ಬ್ರೇಕಿಂಗ್ ನ್ಯೂಸ್
10-10-24 08:19 pm HK News Desk ಕರ್ನಾಟಕ
ಮೈಸೂರು, ಅ.10: ಬೈಕ್ ಗ್ಯಾರೇಜ್ ನಡೆಸುತ್ತಿದ್ದ ಮೆಕ್ಯಾನಿಕ್ ಒಬ್ಬನಿಗೆ ಕೇರಳದ ಲಾಟರಿ ಹೊಡೆದಿದ್ದು ರಾತ್ರೋರಾತ್ರಿ ಸಾಮಾನ್ಯ ಮನುಷ್ಯ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಲಾಟರಿಯಲ್ಲಿ ಪಾಂಡವಪುರ ಮೂಲದ ಅಲ್ತಾಫ್ ಪಾಷಾ ಎಂಬ ಯುವಕ 25 ಕೋಟಿ ರೂ. ಬಹುಮಾನ ಗೆದ್ದಿದ್ದು ಎಲ್ಲರ ಗಮನಸೆಳೆದಿದೆ.
ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, 15 ವರ್ಷಗಳಿಂದ ಲಾಟರಿ ಖರೀದಿಸುವ ಖಯಾಲಿ ಹೊಂದಿದ್ದ. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಓಣಂ ಬಂಪರ್ ಲಾಟರಿಯನ್ನು 500 ರೂ. ಕೊಟ್ಟು ಖರೀದಿ ಮಾಡಿದ್ದ. ಬಹುಮಾನ ಬಂದಿರುವ ವಿಚಾರವನ್ನು ಮೊದಲಿಗೆ ನಂಬುವುದಕ್ಕೂ ಅಲ್ತಾಫ್ ಕುಟುಂಬ ತಯಾರಿರಲಿಲ್ಲ. ಮಾಧ್ಯಮದ ಜೊತೆಗೆ ಅಲ್ತಾಫ್ ಪತ್ನಿ ಸೀಮಾ ಬಾನು ಮತ್ತು ಮಗಳು ತನಲ್ ಸಂತಸ ಹಂಚಿಕೊಂಡಿದ್ದಾರೆ.
ಮೊದಲಿಗೆ ನಾವು ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿರಲಿಲ್ಲ. ಇಂದು ಬೆಳಗ್ಗೆ ಪರಿಶೀಲನೆ ಬಳಿಕ ನಮಗೆ ನಂಬಿಕೆ ಬಂದಿತ್ತು. 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದರು. ಲಾಟರಿ ತೆಗೆದುಕೊಳ್ಳುವುದಕ್ಕೇ ಕೇರಳಕ್ಕೆ ಹೋಗುತ್ತಿದ್ದರು. 15 ವರ್ಷದಿಂದ ಯಾವುದೇ ಲಾಟರಿ ಗೆದ್ದಿರಲಿಲ್ಲ. ಈಗಲು ಅಷ್ಟೇ ನಮಗೆ ಬಂದಿಲ್ಲ ಅಂತನೇ ಅಂದುಕೊಂಡಿದ್ದೆವು. ಈ ಸಲ ಎರಡು ಲಾಟರಿ ಟಿಕೆಟ್ ತಂದಿದ್ದರು. ಒಂದನ್ನು ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಂದಿದ್ರು. ಆದ್ರೆ ಅದೇ ಗೆದ್ದುಬಿಟ್ಟರೆ ಅಂತ ಹೇಳಿದ್ದಕ್ಕೆ ಆ ಲಾಟರಿಯನ್ನೂ ಇಟ್ಟುಕೊಂಡಿದ್ದರು. ನೋಡಿದ್ರೆ ಅದೇ ಲಾಟರಿಗೆ 25 ಕೋಟಿ ಬಹುಮಾನ ಬಂದಿದೆ ಎಂದು ಸೀಮಾ ಬಾನು ಹೇಳಿದ್ದಾರೆ.
ಮೊದಲಿಗೆ ನಮಗೆ ನಂಬಿಕೆಯೆ ಇರಲಿಲ್ಲ. ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆಯೂ ಆಗಿತ್ತು. ಲಾಟರಿ ತೆಗೆದುಕೊಳ್ಳುವುದು ಬೇಡ ಅಂತ ಹೇಳುತ್ತಿದ್ದೆವು. ಇದೀಗ ಲಾಟರಿ ಗೆದ್ದಿರುವುದು ಖುಷಿಯಾಗಿದೆ. ಸ್ವಲ್ಪ ಸಾಲ ಇದೆ, ಅದನ್ನು ತೀರಿಸಿ ಮನೆ ತೆಗೆದುಕೊಳ್ಳಬೇಕೆಂಬ ಆಸೆ ಇದೆ ಎಂದು ಸೀಮಾ ಹೇಳಿದ್ದಾರೆ. ಅಲ್ತಾಫ್ ಲಾಟರಿ ಬಹುಮಾನ ಪಡೆಯುವುದಕ್ಕಾಗಿ ಕೇರಳಕ್ಕೆ ತೆರಳಿದ್ದಾರೆ. 25 ಕೋಟಿ ಮೊತ್ತದಲ್ಲಿ ತೆರಿಗೆ ಕಳೆದು 17.5 ಕೋಟಿ ಮೊತ್ತ ಅಲ್ತಾಫ್ ಕೈಸೇರಲಿದೆ.
Mandya youth gets bumper lottery of 25 crores, gets 12 crore after tax deduction. Altaf who had been to kerala had purchased two lotteries out of which he has been found the winner of 25 crores.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm