ಬ್ರೇಕಿಂಗ್ ನ್ಯೂಸ್
04-08-22 07:00 pm Source: one india ಉದ್ಯೋಗ
ನವದೆಹಲಿ,ಆಗಸ್ಟ್ 4: ಅಗ್ನಿಪಥ್ ಯೋಜನೆಯಡಿ ಭಾರತೀಯ ನೌಕಾಪಡೆಯು ಮಹಿಳಾ ಅಭ್ಯರ್ಥಿಗಳಿಂದ 80,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿರಿಯ ಮಾಧ್ಯಮಿಕ ನೇಮಕಾತಿ (ಎಸ್ಎಸ್ಆರ್) ಮತ್ತು ಮೆಟ್ರಿಕ್ ನೇಮಕಾತಿ (ಎಂಆರ್) ನೋಂದಣಿ ಬುಧವಾರ ಮುಕ್ತಾಯಗೊಂಡಿದ್ದು, ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿಯನ್ನು ಅಗ್ನಿಪಥ್ ಯೋಜನೆಯಡಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ಎಸ್ಎಸ್ಆರ್ (ಸೀನಿಯರ್ ಸೆಕೆಂಡರಿ ನೇಮಕಾತಿ) ಮತ್ತು ಎಂಆರ್ (ಮೆಟ್ರಿಕ್ ನೇಮಕಾತಿ) ನೋಂದಣಿ ಪ್ರಕ್ರಿಯೆಯು ಅಗ್ನಿಪತ್ ನೇಮಕಾತಿ ಯೋಜನೆಗೆ ಪೂರ್ಣಗೊಂಡಿದೆ. 82,000 ಮಹಿಳಾ ಆಕಾಂಕ್ಷಿಗಳು ಸೇರಿದಂತೆ 9.55 ಲಕ್ಷ ಅಗ್ನಿವೀರ್ ಅರ್ಜಿದಾರರು ಈಗ ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ನೌಕಾಪಡೆಯು ಟ್ವೀಟ್ ಮಾಡಿದೆ.
ತನ್ನ ಎಲ್ಲಾ ವಿಭಾಗಗಳಲ್ಲಿ ಲಿಂಗ-ತಟಸ್ಥತೆಯ ಮೇಲೆ ಕೇಂದ್ರೀಕರಿಸಿದ ಭಾರತೀಯ ನೌಕಾಪಡೆಯು ಜೂನ್ 20 ರಂದು ಹೊಸದಾಗಿ ಜಾರಿಯಾದ ಅಗ್ನಿಪಥ್ ನೇಮಕಾತಿ ಯೋಜನೆಯ ಮೂಲಕ ಮಹಿಳಾ ನಾವಿಕರನ್ನು ನೇಮಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿತು. ಎಲ್ಲಾ ಮೂರು ಸೇವೆಗಳು - ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ - ಮಹಿಳಾ ಅಧಿಕಾರಿಗಳನ್ನು ಹೊಂದಿದ್ದು, ಅಧಿಕಾರಿಗಳ ಶ್ರೇಣಿಯ ನಂತರದ ಸಿಬ್ಬಂದಿ ಹುದ್ದೆಗಳು ಮಹಿಳೆಯರಿಗೆ ಮುಕ್ತವಾಗಿರುವುದು ಇದೇ ಮೊದಲು.

ಅಗ್ನಿಪಥ್ ಯೋಜನೆಯ ಮೂಲಕ ನೇಮಕಗೊಳ್ಳುವ ಮಹಿಳಾ ಅಭ್ಯರ್ಥಿಗಳ ನಿಖರ ಸಂಖ್ಯೆಯನ್ನು ನಾವು ಇನ್ನೂ ಲೆಕ್ಕಹಾಕುತ್ತಿದ್ದೇವೆ ಎಂದು ಸಿಬ್ಬಂದಿ ಮುಖ್ಯಸ್ಥ ವೈಸ್ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ರಕ್ಷಣಾ ಸಚಿವಾಲಯದಲ್ಲಿ ತ್ರಿಸೇನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವರ್ಷದ ನವೆಂಬರ್ನಲ್ಲಿ ಅಗ್ನಿವೀರ್ಗಳ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ.

ಭಾರತೀಯ ನೌಕಾಪಡೆಯು ಪ್ರಸ್ತುತ ವಿವಿಧ ಹಡಗುಗಳಲ್ಲಿ ನೌಕಾಯಾನ ಮಾಡುತ್ತಿದೆ. 30 ಮಹಿಳಾ ಅಧಿಕಾರಿಗಳನ್ನು ಹೊಂದಿದೆ. ನಾವು ಅಗ್ನಿಪಥ್ ಯೋಜನೆಯಡಿಯಲ್ಲಿ ಮಹಿಳೆಯರನ್ನು ಸಹ ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಅವರನ್ನು ಯುದ್ಧನೌಕೆಗಳಲ್ಲಿ ನಿಯೋಜಿಸಲಾಗುವುದು. ಒಡಿಶಾದ ಐಎನ್ಎಸ್ ಚಿಲ್ಕಾದಲ್ಲಿ ಭಾರತೀಯ ನೌಕಾಪಡೆಯ ಮೂಲ ತರಬೇತಿ ಸಂಸ್ಥೆಯಾಗಿದ್ದು, ಮಹಿಳಾ ನಾವಿಕರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ವರ್ಷದ ನವೆಂಬರ್ 21 ರಿಂದ ಮೊದಲ ನೌಕಾಪಡೆ ಅಗ್ನಿವೀರ್ಗಳು ಒಡಿಶಾದ ಐಎನ್ಎಸ್ ಚಿಲ್ಕಾದ ತರಬೇತಿ ಸಂಸ್ಥೆಯನ್ನು ತಲುಪಲು ಪ್ರಾರಂಭಿಸುತ್ತದೆ. ಹೆಣ್ಣು ಮತ್ತು ಪುರುಷ ಅಗ್ನಿವೀರ್ಗಳನ್ನು ಇದಕ್ಕಾಗಿ ನಿಯೀಜಿಸಲಾಗಿದೆ ಎಂದು ತ್ರಿಪಾಠಿ ಹೇಳಿದರು.
Agnipath; More than 80,000 women applied for the Navy.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm