ಬ್ರೇಕಿಂಗ್ ನ್ಯೂಸ್
04-01-22 12:45 pm HK Desk news ಕ್ರೈಂ
ಥಾಣೆ, ಜ.3 : ಮನೆಯಲ್ಲಿ 50 ರೂಪಾಯಿ ಕದ್ದಿದ್ದಕ್ಕೆ ಮಗನನ್ನು ಸಾಯುವ ಮಟ್ಟಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ತಂದೆಯನ್ನು ಕಲ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್(10) ತಂದೆಯ ಹೊಡೆತಕ್ಕೆ ಸಾವನ್ನಪ್ಪಿರುವ ಬಾಲಕ. ಬಬ್ಲು ಓಮ್ಪ್ರಕಾಶ್ ಪ್ರಜಾಪತಿ(41) ಕೊಲೆ ಮಾಡಿರುವ ಆರೋಪಿ.
ಕಲ್ವಾ ಠಾಣೆಯ ವ್ಯಾಪ್ತಿ ಥಕುರ್ಪದ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಡಿ.29ರಂದು ರಾತ್ರಿ ಕಿರಣ್ನನ್ನು ತಂದೆ ಥಳಿಸಿದಾಗ ಆತನ ಏಟಿಗೆ ಮಗ ರಾತ್ರಿಯೆಲ್ಲ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಜೈ ಮಾ ಸಂತೋಷಿ ಚಾವಲ್ನ ಗೈಯ್ಕರ್ ಮೈದಾನ್ನಲ್ಲಿ ಬ್ಲಾಂಕೆಟ್ನಿಂದ ಸುತ್ತಿದ್ದ ಹಲವು ಗಾಯಗಳ ಗುರುತುಗಳಿದ್ದ ಬಾಲಕನನ್ನು ಕಂಡ ದಾರಿಹೋಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಕಾಲ್ವ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೂಡಲೇ ಆತನನ್ನು ಚತ್ರಪತಿ ಶಿವಾಜಿ ಮಹಾರಾಜ್ ಹಾಸ್ಪಟೆಲ್ಗೆ ಕರೆದೊಯ್ದಾಗ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದು, ಬಾಲಕನ ಭುಜ ಮತ್ತು ಕಾಲಿಗೆ ಮುರಿತವಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿರುವುದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ತನಿಖೆ ಕೈಗೊಂಡ ಪೊಲೀಸರು ನೆರೆಹೊರೆಯವರನ್ನು ವಿಚಾರಿಸಿದಾಗ ಬಾಲಕನ ವಿವರಗಳು ಪತ್ತೆಯಾಗಿವೆ. ಬಳಿಕ ಮೃತ ಬಾಲಕನ ಸಹೋದರಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಮಗನನ್ನು ಕೊಂದು ಪರಾರಿಯಾಗಿದ್ದ ತಂದೆ ಓಂಪ್ರಕಾಶ್ ಬಳಿಕ ತನ್ನ ಏರಿಯಾದಲ್ಲಿ ತಿರುಗಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Kalwa police arrested a 38-year-old man on Thursday for beating his 10-year-old son to death for stealing ₹50 from his wallet. The father beat him up with different objects on Wednesday night and the boy fell unconscious. The father later wrapped him in a blanket and left him unattended till the next day.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am