ಬ್ರೇಕಿಂಗ್ ನ್ಯೂಸ್
14-12-21 12:20 pm HK Desk news ಕ್ರೈಂ
ಬೆಂಗಳೂರು, ಡಿ.14 : ಗಂಡ – ಹೆಂಡತಿ ನಡುವಿನ ಜಗಳದಲ್ಲಿ ಸಣ್ಣ ಮಗು ಪ್ರಾಣವನ್ನೇ ಬಿಟ್ಟಿದೆ. ಪತ್ನಿ ಮೇಲಿನ ಸಿಟ್ಟಿನಲ್ಲಿ ತಂದೆಯೇ ತನ್ನ 10 ವರ್ಷ ಪ್ರಾಯದ ಮಗುವನ್ನು ನೀರು ತುಂಬಿದ್ದ ಸಂಪ್ ಹೊಂಡಕ್ಕೆ ಎಸೆದು ನೇಣಿಗೆ ಶರಣಾಗಿರುವ ಘಟನೆ ಸಂಪಂಗಿರಾಮ ನಗರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸುರೇಶ್ 15 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದು, ಮಗು ಕೂಡ ಆಗಿತ್ತು. ಆದರೆ ಮಗು ಬೆಳೆಯುತ್ತಿದ್ದಂತೆ ಬುದ್ಧಿಮಾಂದ್ಯ ಆಗಿದ್ದು, ಸಹಜ ಬೆಳವಣಿಗೆಯಿಂದ ವಂಚಿತವಾಗಿತ್ತು. ಆದರೆ, ಇದೇ ವೇಳೆ ಬೆನ್ನು ನೋವಿಗೆ ತುತ್ತಾದ ಸುರೇಶ್ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಒಳಗಾಗಿದ್ದ. ಮಗ ಉದಯ್ ಸಾಯಿರಾಂ ಚಿಕಿತ್ಸೆಗೆ ಖರ್ಚು ಮಾಡಲು ಸಾಧ್ಯವಾಗದ ಕಾರಣ, ಇದೇ ವಿಚಾರದಲ್ಲಿ ಪತಿ- ಪತ್ನಿಯ ಮಧ್ಯೆ ಜಗಳ ಆಗುತ್ತಿತ್ತು.
ಸೋಮವಾರ ಬೆಳಗ್ಗೆ ಪತ್ನಿ ಇನ್ನೂ ಎದ್ದೇಳದೇ ಇರುವಾಗಲೇ ಮಗುವನ್ನು ಎತ್ತಿಕೊಂಡು ಹೋಗಿದ್ದ ಸುರೇಶ್, ಹತ್ತು ವರ್ಷದ ಮಗುವನ್ನು ನೀರಿನ ಸಂಪ್ ಗೆ ಬಿಸಾಡಿ ತೆರಳಿದ್ದ. ಆನಂತರ ಶೇಷಾದ್ರಿಪುರಂ ರೈಲ್ವೇ ಹಳಿಯ ಬಳಿ ತೆರಳಿ, ಅಲ್ಲಿ ನೇಣಿಗೆ ಶರಣಾಗಿದ್ದ. ಪತ್ನಿ ಲಕ್ಷ್ಮಿ ಎದ್ದು ನೋಡಿದಾಗ, ಮಗು ಕಾಣಿಸದೇ ಇದ್ದುದರಿಂದ ಹುಡುಕಾಟ ನಡೆಸಿದ್ದಾಳೆ. ಪತಿಯೂ ಇರದೇ ಇದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಬಳಿಕ ಹುಡುಕಾಟ ನಡೆಸಿದಾಗ, ನೀರಿನ ಸಂಪ್ ನಲ್ಲಿ ಮಗುವಿನ ಶವ ಕಂಡುಬಂದಿದೆ. ಪೊಲೀಸರು ಶೇಷಾದ್ರಿಪುರಂ ಬಳಿ ಸುರೇಶ್ ನೇಣು ಬಿಗಿದ ರೀತಿಯಲ್ಲಿ ಕಂಡುಬಂದಿದ್ದನ್ನು ಪತ್ತೆ ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A man ended his life after killing his 10-year-old specially-abled son as a fallout of some domestic dispute in Sampangiramnagar locality of Bengaluru, police said on Tuesday. According to police, Suresh (40) an auto driver and had married Lakshmi 15 years ago. The couple was dejected as their son was specially-abled.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 04:49 pm
HK News Staffer
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
11-08-26 06:33 pm
HK News Staffer
ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm