ಬ್ರೇಕಿಂಗ್ ನ್ಯೂಸ್
11-11-21 11:02 pm Mangaluru Correspondent ಕ್ರೈಂ
ಮಂಗಳೂರು, ನ.11: ಉಪ್ಪಳ ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ಮತ್ತು ಡಾನ್ ತಸ್ಲೀಮ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಮತ್ತು ಕಾಸರಗೋಡು ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಅದೇ ಗ್ಯಾಂಗ್ ಸದಸ್ಯ ಜಿಯಾನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.



ಐದು ವರ್ಷಗಳ ಹಿಂದೆ ಕೋಟೆಕಾರಿನಲ್ಲಿ ನಡೆದಿದ್ದ ಉಪ್ಪಳದ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ನನ್ನು ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಕೆಲವರನ್ನು ಬಂಧಿಸಿದ್ದರೆ ಪ್ರಮುಖ ಆರೋಪಿಯಾಗಿದ್ದ ಜಿಯಾ ತಪ್ಪಿಸಿಕೊಂಡಿದ್ದ. ಆನಂತರ, ಉಪ್ಪಳ ಮೂಲದ ಡಾನ್ ತಸ್ಲಿಂ ಎಂಬಾತನ್ನೂ ಕೊಲ್ಲಲಾಗಿತ್ತು. ಇದಲ್ಲದೆ, ಬಾಲಿಕಾ ಅಜೀಜ್ ಕೊಲೆ ಪ್ರಕರಣದಲ್ಲಿಯೂ ಮಂಜೇಶ್ವರ ಪೊಲೀಸರಿಗೆ ಜಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಟ್ಲ ಬಳಿಯ ಕೇರಳ ಗಡಿಭಾಗ ಕನ್ಯಾನದಲ್ಲಿ ನಡೆದ ಆಸೀಫ್ ಬಾಯಿಕಟ್ಟೆ ಕೊಲೆ ಪ್ರಕರಣದಲ್ಲಿಯೂ ಜಿಯಾ ಆರೋಪಿಯಾಗಿದ್ದ. ಪೈವಳಿಕೆ ನಿವಾಸಿಯಾಗಿರುವ ಜಿಯಾ, ಪ್ರಕರಣದ ಬಳಿಕ ವಿದೇಶಕ್ಕೆ ತೆರಳಿ ಅಲ್ಲಿಯೇ ತಲೆಮರೆಸಿಕೊಂಡಿದ್ದ.
ಕೆಲವು ದಿನಗಳ ಹಿಂದೆ ರಹಸ್ಯವಾಗಿ ತವರಿಗೆ ಮರಳಿದ್ದ ಜಿಯಾ ಗುರುವಾರ ಬೆಳಗ್ಗೆ ವಿದೇಶಕ್ಕೆ ಮರಳುವುದಕ್ಕಾಗಿ ಮುಂಬೈನ ಸಹಾರಾ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಈ ವೇಳೆ, ಕೇರಳದ ಎಟಿಎಸ್ ಪೊಲೀಸ್ ತಂಡ ವಿಷಯ ತಿಳಿದು ಶಸ್ತ್ರ ಸಜ್ಜಿತರಾಗಿ ದಾಳಿ ನಡೆಸಿ ಬಂಧಿಸಿದೆ.
Natorious Rowdy Jiya Murder accused of Kalia Rafiq arrested in Mumbai. Rowdy Sheeter Kalia Rafiq was murdered brutally at Kotekar on February 14 in 2017.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm