ಬ್ರೇಕಿಂಗ್ ನ್ಯೂಸ್
11-11-21 08:54 pm Headline Karnataka News Desk ಕ್ರೈಂ
ಮಂಗಳೂರು, ನ.11: ನಗರದ ಮಣ್ಣಗುಡ್ಡೆಯ ಗಾಂಧಿನಗರದಲ್ಲಿ ಶಾಸಕ ವೇದವ್ಯಾಸ ಕಾಮತ್ ಮನೆ ಬಳಿಯಲ್ಲೇ ಕಳ್ಳರು ಕೈಚಳಕ ಮೆರೆದಿದ್ದಾರೆ. ಗಾಂಧಿನಗರದ ಆರು ಮನೆಗಳಿಗೆ ಕಳ್ಳರು ತೆರಳಿದ್ದು, ಮನೆಮಂದಿ ಮಲಗಿರುವಾಗಲೇ ಎರಡು ಮನೆಗಳ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದೊಯ್ದಿದ್ದಾರೆ.
ಇಬ್ಬರು ಕಳ್ಳರ ಕೈಚಳಕ ಅಲ್ಲಿನ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ರಥಬೀದಿಯ ಸ್ಕೂಲ್ ಬುಕ್ ಕಂಪನಿಯ ಮಾಲೀಕರದ್ದು ಎನ್ನಲಾದ ಮನೆಯ ಒಳಗೆ ನುಗ್ಗಿದ್ದ ಕಳ್ಳರು ಆ ಮನೆಯಲ್ಲಿ ಒಂದೂವರೆ ಲಕ್ಷ ಮೌಲ್ಯದ ಎರಡು ಬಳೆ ಮತ್ತು ಒಂದು ಸರವನ್ನು ಕದ್ದೊಯ್ದಿದ್ದಾರೆ. ಮನೆಯ ಹಿಂಬದಿ ಬಾಗಿಲನ್ನು ಒಡೆದು ಒಳನುಗ್ಗಿದ್ದ ಕಳ್ಳರು ಮನೆಮಂದಿ ಮಲಗಿದ್ದಾಗಲೇ ಕಳ್ಳತನ ನಡೆಸಿದ್ದಾರೆ. ಮನೆ ಆವರಣದಲ್ಲಿ ಹತ್ತು ಅಡಿ ಎತ್ತರ ಗೋಡೆ ಇದ್ದು ಅದನ್ನು ಹಾರಿ ಕಂಪೌಂಡ್ ಒಳಗೆ ಬಂದಿದ್ದರು. ರಾತ್ರಿ ವೇಳೆ ಏನೋ ಶಬ್ದ ಆಗಿದ್ದರಿಂದ ಮನೆಯ ಒಬ್ಬರು ಎದ್ದು ಲೈಟ್ ಹಾಕಿದ್ದರು. ಆನಂತರ ಯಾರೂ ಇಲ್ಲವೆಂದು ಬಾಗಿಲು ಮುಚ್ಚಿ ಮಲಗಿದ್ದರು. ಆದರೆ ಹಿಂಬಾಗಿಲನ್ನು ಒಡೆದು ಕಳವುಗೈದಿದ್ದು ಬೆಳಗ್ಗಿನ ಹೊತ್ತಲ್ಲಿ ಬೆಳಕಿಗೆ ಬಂದಿದೆ. ಕಳ್ಳ ಮನೆ ಕಂಪೌಂಡ್ ಹಾರಿ ನುಗ್ಗಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದರ ಬಳಿಯಲ್ಲೇ ಇರುವ ಮೈಸೂರು ಮೂಲದ ಎಸ್.ಕೆ. ರಾಜೇಂದ್ರ ಎಂಬವರ ಮನೆಗೂ ಕಳ್ಳರು ನುಗ್ಗಿದ್ದಾರೆ. ಮನೆಮಂದಿ ಬಾಗಿಲು ಹಾಕಿ ಮೈಸೂರಿಗೆ ತೆರಳಿದ್ದರು. ಆ ಮನೆಯಲ್ಲಿ ಏನೂ ಕಳವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಪರಿಸರದ ಇತರ ನಾಲ್ಕು ಮನೆಗಳಿಗೂ ಕಳ್ಳರು ಹೋಗಿದ್ದರು. ಅಲ್ಲಿ ಮನೆಯ ಒಳಗೆ ನುಗ್ಗಲು ಸಾಧ್ಯವಾಗಿರಲಿಲ್ಲ. ಎರಡು ಮನೆಗೆ ನುಗ್ಗಿದ್ದು, ಒಂದರಲ್ಲಿ ಮಾತ್ರ ಕಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು 25ರಿಂದ 30ರ ವಯಸ್ಸಿನವರಾಗಿದ್ದು, ಸದ್ದಿಲ್ಲದೆ ಕಳವು ಮಾಡಿಕೊಂಡು ತೆರಳಿದ್ದಾರೆ. ಕಳ್ಳರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
Mangalore Burglars break into three houses in Gandhinagar in Mangalore near MLAs house, steal lakhs worth of valuables. Barke police have formed a special team to nab the accused.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
24-06-25 01:02 am
HK News Desk
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
23-06-25 11:01 pm
Mangalore Correspondent
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
Mangalore, Lokayukta Raid, MCC: ಮಂಗಳೂರು ಪಾಲಿಕ...
23-06-25 06:56 pm
Sudheer Kumar Reddy, Mangalore; ಸಾಕ್ಷ್ಯಗಳಿದ್ದ...
23-06-25 06:07 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm