ಬ್ರೇಕಿಂಗ್ ನ್ಯೂಸ್
11-11-21 03:29 pm Mangaluru Correspondent ಕ್ರೈಂ
ಮಂಗಳೂರು, ನ.11: ಸರೆಂಡರ್ ಮಾಡಿದ್ದ ಕ್ರೆಡಿಟ್ ಕಾರ್ಡನ್ನು ಹ್ಯಾಕ್ ಮಾಡಿ, ಅದರಿಂದ ದುಡ್ಡು ಪೀಕಿಸಿದ್ದ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನೆಲೆಸಿರುವ ಇಬ್ಬರು ಟಿಬೆಟಿಯನ್ ಬುದ್ಧ ಭಿಕ್ಕುಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ತಾವರ ನಿವಾಸಿ ಸಿ.ಡಿ. ಅಲೆಗ್ಸಾಂಡರ್ ಎಂಬವರು ಕಳೆದ ಸೆ.9 ರಂದು ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಗೆ ಸರೆಂಡರ್ ಮಾಡಿದ್ದರೂ ಅದರಿಂದ 1.12 ಲಕ್ಷ ರೂ. ಡ್ರಾ ಆಗಿದ್ದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. 2021ರ ಮಾರ್ಚ್ 23 ರಂದು ಎಸ್ ಬಿಐ ಬ್ಯಾಂಕ್ ಶಾಖೆಗೆ ತೆರಳಿ ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಹೆಚ್ಚಾಗಿದ್ದರಿಂದ ಅದನ್ನು ಮರಳಿ ಬ್ಯಾಂಕಿಗೆ ಕೊಟ್ಟಿದ್ದರು. ಆದರೆ ಮಾರ್ಚ್ 27 ರಂದು ಕ್ರೆಡಿಟ್ ಕಾರ್ಡ್ ಮೂಲಕ 1.12 ಲಕ್ಷ ರೂ. ಡ್ರಾ ಆಗಿತ್ತು. ಬ್ಯಾಂಕ್ ಸಿಬಂದಿ ಬಳಿ ಕೇಳಿದಾಗ, ಕ್ರೆಡಿಟ್ ಕಾರ್ಡ್ ಮೂಲಕ ಡ್ರಾ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ, ಮೊಬಿವಿಕ್ ವ್ಯಾಲೆಟ್ ಏಪ್ ಮೂಲಕ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದಿತ್ತು. ಅಲ್ಲದೆ, ಈ ಹಣವು ಉತ್ತರ ಕನ್ನಡ ಜಿಲ್ಲೆಯ ತಟ್ಟಿಹಳ್ಳಿಯ ಕೆನರಾ ಡಿಸಿಸಿ ಬ್ಯಾಂಕ್ ಶಾಖೆಯ ಮುಂಡಗೋಡ ನಿವಾಸಿ ಲೋಬ್ ಸ್ಯಾಂಗ್ ಸ್ಯಾಂಗಿಸ್ ಖಾತೆಗೆ ವರ್ಗಾವಣೆ ಆಗಿರುವುದು ತಿಳಿದುಬಂದಿತ್ತು.

ಪ್ರಕರಣ ಸಂಬಂಧಿಸಿ ಮುಂಡಗೋಡದ ಟಿಬೆಟಿಯನ್ ಕಾಲನಿ ನಿವಾಸಿಗಳಾದ ಲೋಬ್ ಸ್ಯಾಂಗ್ ಸ್ಯಾಂಗಿಸ್ (24) ಮತ್ತು ದಕಪಾ ಪುಂಡೇ (40) ಎಂಬವರನ್ನು ಮಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ. ದಕಪಾ ಪುಂಡೆ ಮುಂಡಗೋಡದಲ್ಲಿದ್ದುಕೊಂಡೇ ಚೀನಾದ ನಿಷೇಧಿತ ಚೀನಾ ಏಪ್ ಗಳಾದ ವೀ ಚ್ಯಾಟ್ ಮತ್ತು ರೆಡ್ ಪ್ಯಾಕ್ ಇತ್ಯಾದಿ ಮೂಲಕ ಹವಾಲಾ ಜಾಲದಲ್ಲಿ ಹಣವನ್ನು ತರಿಸಿಕೊಂಡು ಸ್ಥಳೀಯ ಮನಿ ಎಕ್ಸ್ ಚೇಂಜ್ ಏಜಂಟರಲ್ಲಿ ನಗದು ಮಾಡಿಕೊಳ್ಳುತ್ತಿದ್ದರು. ಇಬ್ಬರನ್ನೂ ಟಿಬೇಟ್ ಕಾಲನಿಯಿಂದ ನ.10 ರಂದು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕ್ರೆಡಿಟ್ ಕಾರ್ಡನ್ನು ಬ್ಯಾಂಕಿಗೆ ಸರೆಂಡರ್ ಮಾಡಿದ್ದರೂ, ಅದರ ಮಾಹಿತಿ ಆರೋಪಿಗಳಿಗೆ ರವಾನೆ ಆಗಿದ್ದು ಹೇಗೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Mangalore Cyber Crime Police arrest Two Tibetan from Mundgod arrested for transferring theft money of credit card.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm