ಬ್ರೇಕಿಂಗ್ ನ್ಯೂಸ್
01-11-21 07:29 pm Headline Karnataka News Desk ಕ್ರೈಂ
ಕೊಚ್ಚಿ, ನ.1: ಗಲ್ಫ್ ರಾಷ್ಟ್ರಗಳಿಂದ ಭಾನುವಾರ ರಾತ್ರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏಳು ಮಂದಿ ಖದೀಮರು ಅಕ್ರಮವಾಗಿ 5 ಕೇಜಿ ಚಿನ್ನವನ್ನು ತರುತ್ತಿದ್ದುದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿದ್ದು, ಏಳು ಮಂದಿಯನ್ನೂ ವಶಕ್ಕೆ ಪಡೆದಿದ್ದಾರೆ.
ಬೆಹ್ರೈನ್, ಶಾರ್ಜಾ ಮತ್ತು ದುಬೈನಿಂದ ಏಳು ಮಂದಿ ನಿನ್ನೆ ಮಧ್ಯರಾತ್ರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ, ಕಸ್ಟಮ್ ಅಧಿಕಾರಿಗಳ ತಪಾಸಣೆಯಲ್ಲಿ ಅವರ ದೇಹದಲ್ಲಿ ಚಿನ್ನ ಇರುವುದು ಪತ್ತೆಯಾಗಿದ್ದು ತಪಾಸಣೆ ಕೈಗೊಂಡಿದ್ದಾರೆ. ಪ್ರಯಾಣಿಕರು ತಮ್ಮ ಗುದ ದ್ವಾರದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ, ಉಂಡೆಗಳಾಗಿಸಿ ತೂರಿಸಿಕೊಂಡಿದ್ದರು. ಅದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, 5.64 ಕೇಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪತ್ತನಂತಿಟ್ಟ, ಕೋಜಿಕೋಡ್, ಮಲಪ್ಪುರಂ, ತಮಿಳುನಾಡು ಮತ್ತು ಕರ್ನಾಟಕದ ನಿವಾಸಿಗಳಾಗಿದ್ದಾರೆ.
ಔಷಧಿ ಮಾತ್ರೆಗಳ ರೂಪದಲ್ಲಿ ಉಂಡೆಗಳನ್ನಾಗಿಸಿ, ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದರು. ಬೆಹ್ರೈನ್ ನಿಂದ ಬರುತ್ತಿದ್ದ ಅನಾಸ್ ಜಿಹಾದ್ ಎಂಬ ಪ್ರಯಾಣಿಕ ತನ್ನ ಗುದ ದ್ವಾರದಲ್ಲಿ 1.032 ಕೇಜಿ ಚಿನ್ನವನ್ನು ಹೊಂದಿದ್ದರೆ, ನೌಫಾಲ್ ಎಂಬಾತ 778 ಗ್ರಾಮ್ ಚಿನ್ನವನ್ನು ಹೊಂದಿದ್ದ. ಶಾರ್ಜಾದಿಂದ ಬಂದಿದ್ದ ಮೊಹಮ್ಮದ್ ಇರ್ಫಾನ್ ಆಲಿ ಬಳಿ 501 ಗ್ರಾಮ್ ಚಿನ್ನ ವಶಕ್ಕೆ ಪಡೆದರೆ, ಅಶರ್ ಮೊಹಮ್ಮದ್ ಅಮರ್ ಬಳಿ 543 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಇದೇ ರೀತಿ ದುಬೈನಿಂದ ಬರುತ್ತಿದ್ದ ಸಿಬಿ ಸಾಜಿ, ಮುಸ್ಬಾ ಮಹಮ್ಮದ್ ಇಶಾಕ್ ಮತ್ತು ಅಂಜುಂ ಸೂಫಿಯಾನ್ ಕ್ರಮವಾಗಿ 1.071 ಕೇಜಿ, 597 ಗ್ರಾಮ್, 542 ಗ್ರಾಮ್ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಈ ಏಳು ಮಂದಿಯನ್ನೂ ಕಸ್ಟಮ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
The air intelligence unit and customs sleuths at Cochin International Airport seized 5.064 kg of gold from seven passengers, including a woman, on Sunday. According to a report published in The New Indian Express (TNIE), the passengers had arrived at Kochi airport from Bahrain, Sharjah and Dubai flights in the early hours of Sunday. These passengers originally belonged to Pathanamthitta, Malappuram, Kozhikode, Tamil Nadu and Karnataka.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
21-03-26 11:56 am
HK News Staffer
Yakshagana, Govinda Bhat Death: ತೆಂಕುತಿಟ್ಟು ಯ...
20-03-26 11:26 pm
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm