ಬ್ರೇಕಿಂಗ್ ನ್ಯೂಸ್
27-10-21 03:03 pm Mangalore Reporter ಕ್ರೈಂ
ಬಂಟ್ವಾಳ, ಅ.27: ಬಿಜೆಪಿ ಕಾರ್ಯಕರ್ತನ ಮೇಲೆ ಅದೇ ಪಕ್ಷದ ಕಾರ್ಯಕರ್ತರು ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನಲ್ಲಿ ನಡೆದಿದೆ. ಬಡಗಬೆಳ್ಳೂರು ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಪ್ರಕಾಶ್ ಬೆಳ್ಳೂರು ಮೇಲೆ ಆತನ ಮನೆಗೇ ನುಗ್ಗಿ ಹಲ್ಲೆ ನಡೆಸಿ, ತಲವಾರು ದಾಳಿ ನಡೆಸಲಾಗಿದೆ.
ಕಿವಿಯ ಭಾಗಕ್ಕೆ ತಲವಾರು ಏಟು ಬಿದ್ದು ಗಾಯಗೊಂಡಿರುವ ಪ್ರಕಾಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ಪರಿಸರದ ನಿತಿನ್, ನಿಶಾಂತ್ ಮತ್ತಿತರ ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ಇವರ ನಡುವೆ, ಹಣದ ವಿಚಾರದಲ್ಲಿ ಗಲಾಟೆ ನಡೆದಿತ್ತು. ವರ್ಷದ ಹಿಂದೆ ನಿತಿನ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಾಗಿತ್ತು. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲೆಂದು ಸ್ಥಳೀಯ ಪುಢಾರಿ ಆಗಿರುವ ಪ್ರಕಾಶ್ ಬೆಳ್ಳೂರುಗೆ ನಿತಿನ್ 25 ಸಾವಿರ ರೂ. ಹಣವನ್ನು ನೀಡಿದ್ದಾನೆ ಎನ್ನಲಾಗಿದೆ.
ಇದೇ ವಿಚಾರದಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದ್ದ ವಾಗ್ವಾದ, ಫೇಸ್ಬುಕ್ ನಲ್ಲೂ ಮುಂದುವರಿದಿತ್ತು. ಪ್ರಕಾಶ್ ಬೆಳ್ಳೂರು ತಾನು ಹಣ ಪಡೆದಿಲ್ಲ. ಬೇಕಾದರೆ ಪಣೋಲಿಬೈಲಿಗೆ ಬಂದು ಪ್ರಮಾಣ ಮಾಡುತ್ತೇನೆ. ಹಣ ಕೊಟ್ಟಿದ್ದಾರೆ ಎಂದವರು ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಫೇಸ್ಬುಕ್ ನಲ್ಲಿ ಸವಾಲು ಹಾಕಿದ್ದಾರೆ. ಅದೇ ಪೋಸ್ಟ್ ನಲ್ಲಿ ನಿಶಾಂತ್ ಮತ್ತು ಆತನ ಗೆಳೆಯರು ಹೀನಾಯವಾಗಿ ನಿಂದಿಸಿ ಪ್ರಕಾಶ್ ಬಗ್ಗೆ ಬರೆದಿದ್ದರು. ಇದೇ ವಿಚಾರ ಮಾತಿಗೆ ಮಾತು ಬೆಳೆದಿದ್ದು, ನಿತಿನ್, ನಿಶಾಂತ್ ಮತ್ತಿತರರು ಮಂಗಳವಾರ ಸಂಜೆ ಪ್ರಕಾಶ್ ಬೆಳ್ಳೂರು ಮನೆಗೆ ನುಗ್ಗಿ ತಲವಾರು ದಾಳಿ ನಡೆಸಿದ್ದಾರೆ.
ಆದರೆ, ಈ ವೇಳೆ ಪ್ರಕಾಶ್ ತಲವಾರು ಕಡಿತದಿಂದ ತಪ್ಪಿಸಿಕೊಂಡಿದ್ದು ಕಿವಿಗೆ ಮಾತ್ರ ಗಾಯವಾಗಿತ್ತು. ಆನಂತರ, ನೆಲಕ್ಕೆ ಹಾಕಿ ತುಳಿದು ಹಲ್ಲೆ ನಡೆಸಿದ್ದಾರೆ. ಬಳಿಕ ಪ್ರಕಾಶ್ ಸಂಬಂಧಿಕರು ಬಂದು ಸಮಾಧಾನ ಹೇಳಿ, ಕಡಿಯಲು ಬಂದವರನ್ನು ಕಳಿಸಿಕೊಟ್ಟಿದ್ದರು. ಘಟನೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.
Mangalore Bjp member attacked by BJP members in Bantwal over financial dispute. Prakash is said to be admitted in the hospital and is said to be out of danger.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
21-03-26 11:56 am
HK News Staffer
Yakshagana, Govinda Bhat Death: ತೆಂಕುತಿಟ್ಟು ಯ...
20-03-26 11:26 pm
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm