ಬ್ರೇಕಿಂಗ್ ನ್ಯೂಸ್
22-10-21 10:30 pm Mangalore Reporter ಕ್ರೈಂ
ಮಂಗಳೂರು, ಅ.22 : ಮನೆಯೊಂದರಲ್ಲಿ ಪ್ರತಿ ವಾರ ಗೋವುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಮೂಲ್ಕಿ ಹಾಗೂ ಮೂಡುಬಿದಿರೆ ಪ್ರಖಂಡದ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದು ಕಿನ್ನಿಗೋಳಿಯ ಸಂಕಲಕರಿಯದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯನ್ನು ಪತ್ತೆ ಮಾಡಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಕೆ.ಜಿ. ಗೋಮಾಂಸವನ್ನು ಪತ್ತೆ ಮಾಡಿದ್ದಾರೆ. ಬಳಿಕ ಅದರಲ್ಲಿದ್ದ ಆರೋಪಿಗಳು ನೀಡಿದ ಮಾಹಿತಿಯಂತೆ ಮೂಲ್ಕಿ ಪೊಲೀಸರಿಗೆ ಬಜರಂಗದಳ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಆಬಳಿಕ ಕಸಾಯಿಖಾನೆ ಇದ್ದ ಜಾಗ ಕಾರ್ಕಳ ಠಾಣೆ ವ್ಯಾಪ್ತಿಗೆ ಬರುತ್ತಿದ್ದ ಕಾರಣ ಅಲ್ಲಿನ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ಕಸಾಯಿಖಾನೆಗೆಂದು ಮನೆಯ ಬಳಿಯಲ್ಲೇ ಹಟ್ಟಿಯನ್ನು ರಚಿಸಿದ್ದು ಅಲ್ಲಿ ಪ್ರತಿವಾರ ಗೋವನ್ನು ಖರೀದಿಸಿ ತಂದು ಕಟ್ಟಿ ಹಾಕುತ್ತಿದ್ದರು. ಬಳಿಕ ಅದನ್ನು ಪ್ರತಿ ವಾರ ಅಗತ್ಯ ಇದ್ದಷ್ಟು ಮಾಂಸ ಮಾಡುತ್ತಿದ್ದರು. ಸುತ್ತಲಲ್ಲಿ ಹಿಂದುಗಳ ಮನೆಯೇ ಇದ್ದರೂ, ಗೋವನ್ನು ಮಾಂಸ ಮಾಡಿ ಮೂಲ್ಕಿ ವ್ಯಾಪ್ತಿಯ ಹಲವು ಕಡೆಗಳಿಗೆ ಮಾಂಸವನ್ನು ವ್ಯವಸ್ಥಿತವಾಗಿ ಪೂರೈಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇದ್ದರೂ, ಪೊಲೀಸ್ ದೂರು ನೀಡಿರಲಿಲ್ಲ.
ದಾಳಿ ನಡೆಸಿದ ವೇಳೆ, ಆರೋಪಿಯ ಮನೆಯ ಒಳಗೇ ಕಸಾಯಿಖಾನೆ ನಡೆಸುತ್ತಿದ್ದುದು ಪತ್ತೆಯಾಗಿದೆ. ಹೊರಗಡೆ ಇದ್ದ ಹಟ್ಟಿಯಲ್ಲಿ ಎಂಟು ಗೋವುಗಳಿದ್ದು ಅವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮನೆಯ ಒಳಗಡೆಯೂ ಮಾಂಸ ಮತ್ತು ಮಾಂಸ ಮಾಡಲು ಬಳಸಿದ್ದ ಪರಿಕರಗಳನ್ನೂ ವಶಕ್ಕೆ ಪಡೆದಿದ್ದಾರೆ. ಒಟ್ಟು ಒಂದು ಕ್ವಿಂಟಾಲ್ನಷ್ಟು ಗೋಮಾಂಸ ಹಾಗೂ ನಾಲ್ಕು ಆರೋಪಿಗಳನ್ನು ಮೂಲ್ಕಿ ಮತ್ತು ಕಾರ್ಕಳ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಮಹಮ್ಮದ್ ಹಸನಬ್ಬ, ರಫೀಕ್, ಇದಿನಬ್ಬ ಹಾಗೂ ಇಬ್ರಾಹಿಂ ಬಂಧಿತರು. ಈ ಪೈಕಿ ಇಬ್ರಾಹಿಂ ಕಸಾಯಿಖಾನೆ ರೂವಾರಿಯಾಗಿದ್ದು ಆತನ ಮನೆಯಲ್ಲೇ ಮಾಂಸ ಮಾಡಿ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
Mangalore House converted into slaughter house flesh illegally being traded Bagarang Dal members raid house four arrested near Kinnigoli.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
24-06-25 01:02 am
HK News Desk
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
23-06-25 11:01 pm
Mangalore Correspondent
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
Mangalore, Lokayukta Raid, MCC: ಮಂಗಳೂರು ಪಾಲಿಕ...
23-06-25 06:56 pm
Sudheer Kumar Reddy, Mangalore; ಸಾಕ್ಷ್ಯಗಳಿದ್ದ...
23-06-25 06:07 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm