ಬ್ರೇಕಿಂಗ್ ನ್ಯೂಸ್
05-10-21 04:24 pm Mangaluru Correspondent ಕ್ರೈಂ
ಉಳ್ಳಾಲ, ಅ.5: ಬಸ್ಸಿನಿಂದ ಇಳಿದು ಮನೆ ಕಡೆಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಐ ಲವ್ ಯೂ ಅಂತ ಹೇಳಿ ಕೈ ಎಳೆದು ಅಪ್ಪಿಕೊಳ್ಳಲೆತ್ನಿಸಿದ ಅನ್ಯಕೋಮಿನ ಯುವಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದ ಘಟನೆ ಹರೇಕಳ ಗ್ರಾಮದಲ್ಲಿ ನಡೆದಿದೆ.
ಅಡ್ಯಾರ್ ಕಣ್ಣೂರು ನಿವಾಸಿ ಯಾಕೂಬ್ (43) ಬಂಧಿತ ಕಾಮುಕ. ವಿದ್ಯಾರ್ಥಿನಿ ಇಂದು ಮಧ್ಯಾಹ್ನ ಹರೇಕಳ ಗ್ರಾಮದ ಮಿಷನ್ ಕಂಪೌಂಡ್ ಬಸ್ ನಿಲ್ದಾಣದಲ್ಲಿ ಇಳಿದು ಕಲ್ಲೈ, ವಡ್ಡೆದಗುರಿ ದಾರಿಯಾಗಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ವೇಳೆ ಯಾಕೂಬ್ ಅಡ್ಡಗಟ್ಟಿದ್ದಾನೆ. ಐ ಲವ್ ಯೂ ಅಂತ ಹೇಳಿ ಆಕೆಯ ಕೈ ಎಳೆದು ಅಪ್ಪಿಕೊಳ್ಳಲು ಮುಂದಾಗಿದ್ದು ಪ್ರತಿಭಟಿಸಿದ ಯುವತಿ ಕಾಮುಕನಿಂದ ತಪ್ಪಿಸಿ ಮಂದಕ್ಕೆ ಸಾಗಿದ್ದಾಳೆ. ಪಟ್ಟು ಬಿಡದ ಕಾಮುಕ ಯಾಕೂಬ್ ಪೊದೆಗಳಲ್ಲಿ ಅಡಗಿ ಯುವತಿಗೆ ಅಶ್ಲೀಲ ಸನ್ನೆಗೈದಿದ್ದು ಯುವತಿ ಬೊಬ್ಬೆ ಹೊಡೆದಿದ್ದಾಳೆ. ಯುವತಿಯ ಬೊಬ್ಬೆ ಕೇಳಿದ ಗ್ರಾಮಸ್ಥರು ಕಾಮುಕನನ್ನ ಹಿಡಿಯಲು ಯತ್ನಿಸಿದ್ದು ಕೊಣಾಜೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಳಿಕ ಎಲಿಯಾರ್ ಪದವು ಎಂಬಲ್ಲಿ ಆರೋಪಿ ಯಾಕೂಬನನ್ನ ಗ್ರಾಮಸ್ಥರು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಯಾಕೂಬ್ ಗೆ ದೇರಳಕಟ್ಟೆಯ ಅಡ್ಕರೆ ಎಂಬಲ್ಲಿ ಸಂಬಂಧಿಗಳ ಮನೆಯಿದೆ. ಅಲ್ಲಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಲಾಕ್ಡೌನ್ ವೇಳೆ ಯಾಕೂಬ್ ಕೊಣಾಜೆ ಪರಂಡೆಯ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಕಳ್ಳತನಕ್ಕೆ ಯತ್ನಿಸಿ ಮಾನಸಿಕ ಅಸ್ವಸ್ಥನಂತೆ ನಟಿಸಿದ್ದ. ಈತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಈ ಹಿಂದೆಯೂ ಲೈಂಗಿಕ ಕಿರುಕುಳ ಪ್ರಕರಣವೂ ದಾಖಲಾಗಿತ್ತು.
Mangalore Man tries to Misbehave with Interfaith college-going Girl while getting down from the Bus. Konaje Police who reached the spot has taken him to Custody. Adyar Resident Ayub (43) is the man taken to custody.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm