ಬ್ರೇಕಿಂಗ್ ನ್ಯೂಸ್
30-09-21 05:02 pm Headline Karnataka News Network ಕ್ರೈಂ
ಬೆಂಗಳೂರು, ಸೆ.30: ಇತ್ತೀಚೆಗೆ ಒಂದೇ ಕುಟುಂಬದ ಐವರು ಮನೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದ ಘಟನೆ ಭಾರೀ ಸಂಚಲನ ಸೃಷ್ಟಿಸಿತ್ತು. ಹೀಗೆ ಸಾವು ಕಂಡವರ ಪೈಕಿ, ಒಂಬತ್ತು ತಿಂಗಳ ಮಗುವೂ ಇತ್ತು. ಬೆಡ್ಡಿನಲ್ಲಿ ಮಲಗಿಯೇ ಇದ್ದ ಮಗುವಿನ ಸಾವಿನ ಬಗ್ಗೆ ಸಂಶಯವೂ ಹುಟ್ಟಿತ್ತು. ಮಗುವಿಗೆ ಆಹಾರ ಸಿಗದೆ ನಿತ್ರಾಣಗೊಂಡು ಸಾವನ್ನಪ್ಪಿದ್ದಾಗಿ ಸಂಶಯ ಪಡಲಾಗಿತ್ತು. ಆದರೆ, ಮಗುವಿನ ಪೋಸ್ಟ್ ಮಾರ್ಟಂ ವರದಿಯಲ್ಲಿ ಬೇರೆಯದೇ ವರದಿ ಬಂದಿದೆ.
ಮಗು ಉಸಿರು ಕಟ್ಟಿ ಸಾವನ್ನಪ್ಪಿದ್ದಾಗಿ ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಸಿಂಧೂರಾಣಿ ಸಾಯೋದಕ್ಕೂ ಮುನ್ನ ಮಗುವನ್ನು ನೇಣಿಗೆ ಹಾಕಿಸುವ ಪ್ರಯತ್ನ ಮಾಡಿದ್ದಾಳೆಯೇ ಎಂಬ ಶಂಕೆ ಮೂಡಿದೆ. ನೇಣಿಗೆ ಹಾಕಿಸಿ, ಆನಂತರ ಬೆಡ್ಡಿನಲ್ಲಿ ಮಲಗಿಸಿದ್ದಾಳೆಯೇ ಅಥವಾ ತಲೆದಿಂಬು ಮುಖಕ್ಕೆ ಇಟ್ಟು ಉಸಿರು ಕಟ್ಟಿಸಿ ಸಾಯಿಸಿದ್ದಾರೆಯೇ ಎಂಬ ಶಂಕೆಯೂ ಕೇಳಿಬಂದಿದೆ.
ಮಗು ಸಾಯೋದಕ್ಕೂ ಮುನ್ನ ಉಸಿರು ಕಟ್ಟಿಸಿದ ಬಗ್ಗೆ ವರದಿಯಿದ್ದು, ಪೊಲೀಸರು ಈ ಕುರಿತ ವರದಿ ಕೇಳಿ ಅಚ್ಚರಿಗೆ ಒಳಗಾಗಿದ್ದಾರೆ. ಸೆ.17ರಂದು ಬೆಂಗಳೂರಿನ ತಿಗಳರಪಾಳ್ಯದಲ್ಲಿ ಘಟನೆ ಬೆಳಕಿಗೆ ಬಂದಿತ್ತು. ಮನೆಯವರು ಸತ್ತು ಐದು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಥಳೀಯ ಪತ್ರಿಕೆಯೊಂದರ ಸಂಪಾದಕನಾಗಿದ್ದ ಶಂಕರ್ ಎಂಬವರ ಮನೆಯಾಗಿದ್ದು, ಆತನ ಪತ್ನಿ, ಇಬ್ಬರು ಹೆಣ್ಮಕ್ಕಳು ಮತ್ತು ಒಬ್ಬ ಮಗ ನೇಣು ಬಿಗಿದು ಸಾವಿಗೆ ಶರಣಾಗಿದ್ದರು.
ಶಂಕರ್ ವಾರದ ಹಿಂದೆ ಮನೆಯಲ್ಲಿ ಕುಟುಂಬ ಕಲಹ ಉಂಟಾಗಿ ಮನೆ ಬಿಟ್ಟು ಹೋಗಿದ್ದ. ಆನಂತರ, ಅದೇ ಸಿಟ್ಟಿನಲ್ಲಿ ಮದುವೆಯಾಗಿದ್ದರೂ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದ ಇಬ್ಬರು ಹೆಣ್ಮಕ್ಕಳು ಮತ್ತು ಅವಿವಾಹಿತ ಮಗ ಸಾವಿಗೆ ಶರಣಾಗಿದ್ದರು. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಶಂಕರ್ ಅವರ ಅನೈತಿಕ ಸಂಬಂಧ ಮತ್ತು ಮನೆಯವರನ್ನು ನಿರ್ಲಕ್ಷ್ಯ ಮಾಡುತ್ತಿದ್ದ ಕಾರಣ ಸಾವಿಗೆ ಶರಣಾಗಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಈ ವೇಳೆ, ಮೂರು ವರ್ಷದ ಹೆಣ್ಣು ಮಗು ಮಾತ್ರ ಐದು ದಿನಗಳ ಕಾಲವೂ ಐದು ಶವಗಳ ನಡುವೆ ಬದುಕಿ ಉಳಿದಿದ್ದು, ಪವಾಡ ಎನ್ನುವಂತಾಗಿತ್ತು. ವಾರದ ನಂತರ ಶಂಕರ್, ಮರಳಿ ಮನೆಗೆ ಬಂದು ಲಾಕ್ ಆಗಿದ್ದ ಮನೆಯನ್ನು ಓಪನ್ ಮಾಡಿ ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.
Post mortem report into the death of five family members, including a 9-month-old, in Bengaluru, has revealed that the toddler was suffocated to death, police sources said on Thursday.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm