ಬ್ರೇಕಿಂಗ್ ನ್ಯೂಸ್
19-09-21 01:52 pm Mangaluru Correspondent ಕ್ರೈಂ
Photo credits : Representational
ಪಡುಬಿದ್ರಿ, ಸೆ.19 : ಮಂಗಳೂರು- ಮುಂಬಯಿ ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಉಡುಪಿ ಜಿಲ್ಲೆಯ ಎಲ್ಲೂರು ನಿವಾಸಿ ಸುಚಿತಾ ಕುಸುಮಾಕರ್ ಶೆಟ್ಟಿಯವರ ಬೆಲೆ ಬಾಳುವ ಮೊಬೈಲ್ ಸಹಿತ ನಗದು ಇದ್ದ ಪರ್ಸ್ ಅನ್ನು ಸೆ.16 ರ ರಾತ್ರಿ ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಪರ್ಸ್ನಲ್ಲಿ 75 ಸಾವಿರ ರೂ. ಮೌಲ್ಯದ ಮೊಬೈಲ್, 12 ಸಾವಿರ ರೂ. ನಗದು ಇನ್ನಿತರ ವಸ್ತುಗಳಿದ್ದವು. ಸುಚಿತಾ ಅವರು ಬೆಲೆ ಬಾಳುವ ವಜ್ರ ಮತ್ತು ಚಿನ್ನಾಭರಣಗಳನ್ನು ಸೀಟ್ನಡಿ ಇರಿಸಿದ್ದ ಬ್ಯಾಗ್ನಲ್ಲಿಟ್ಟಿದ್ದರು. ಹಾಗಾಗಿ ಅವುಗಳು ಕಳವಾಗಿಲ್ಲ. ಮುಂಬೈ ಬಂಟರ ಸಂಘದ ನಗರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಕುಸುಮಾಕರ್ ಶೆಟ್ಟಿ ಮುಂಬಯಿಗೆ ತೆರಳಲು ಉಡುಪಿಯಲ್ಲಿ ಮತ್ಸ್ಯ ಗಂಧ ರೈಲು ಹತ್ತಿದ್ದರು. ರೈಲಿನ ಎಸಿ ಕೋಚ್ನಲ್ಲಿ ಸಹೋದರಿಯೊಂದಿಗೆ ಪ್ರಯಾಣ ಬೆಳೆಸಿದ್ದರು.

ಉಡುಪಿಯಿಂದ ಹೊರಟ ರೈಲು ತಡರಾತ್ರಿ ಪನ್ವೇಲ್ ಸಮೀಪದ ರೋಹಾ - ನಾಗೋಥಾಣೆಗೆ ತಲುಪಿದ್ದಾಗ ಸುಚಿತಾರಿಗೆ ನಿದ್ದೆ ಆವರಿಸಿದ್ದು ಮುಂಜಾನೆ 3.40ರ ವೇಳೆ ತಲೆದಿಂಬಿನಡಿ ಇಟ್ಟಿದ್ದ ಪರ್ಸ್ನ್ನು ಕಳ್ಳರು ಎಳೆದುಕೊಂಡು ಹೋಗಿದ್ದಾರೆ. ಕಂಪಾರ್ಟ್ಮೆಂಟಿನ ಕೊನೆಯ ಸೀಟ್ ನಲ್ಲಿ ಮಲಗಿದ್ದ ಕಾರಣ ಪರ್ಸ್ ಎಳೆದು ಬಾಗಿಲಿನ ಮೂಲಕ ಓಡಿ ಹೋಗಿದ್ದಾನೆ. ಈ ಸಂದರ್ಭ ಅವರು ಬೊಬ್ಬಿಟ್ಟರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈಯಿಂದ ಮಂಗಳೂರಿಗೆ ಬರುವ ಮತ್ಸ್ಯ ಗಂಧ ರೈಲಿನಲ್ಲಿ ಎರಡು ಕುಖ್ಯಾತ ಕಳ್ಳರ ತಂಡಗಳು ನಿರಂತರ ಕಳವು ಕೃತ್ಯದಲ್ಲಿ ತೊಡಗಿವೆ. ಆದರೆ ರೈಲ್ವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.
Udupi Robbery in Matsyagandha train Man robbed of 75 Thousand. The railway police are showing negligence it is said in this case.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 07:23 pm
Mangalore Correspondent
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದ...
07-11-25 11:41 am
07-11-25 08:05 pm
HK News Desk
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm