ಬ್ರೇಕಿಂಗ್ ನ್ಯೂಸ್
23-07-21 06:03 pm Headline Karnataka News Network ಕ್ರೈಂ
ಮುಂಬೈ, ಜುಲೈ 23: ತಾಯಿಗೆ ಮಕ್ಕಳು ಹೆಗ್ಗಣ ಆಗಿದ್ದರೂ ಚಿನ್ನವಂತೆ. ಆದರೆ, ಮಕ್ಕಳಿಗೆ ಹಾಗೇನೂ ಇಲ್ವಲ್ಲ. ಇಲ್ಲೊಬ್ಬ 18 ವರ್ಷದ ಹುಡುಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಕುತ್ತಿಗೆ ಅಮುಕಿ ಕೊಲೆ ಮಾಡಿದ್ದಾನೆ. ಹೌದು.. ಮುಂಬೈನ ವಸಾಯಿ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲಿವಾಡದಲ್ಲಿ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಗಂಡ ತೀರಿಕೊಂಡ ಬಳಿಕ 59 ವರ್ಷದ ಮಹಿಳೆ ಕುಡಿಯಲು ತೊಡಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರ ಇಬ್ಬರು ಮಕ್ಕಳು ಮತ್ತು ತಾಯಿ ನಡುವೆ ಕಂದಕ ತಂದಿಟ್ಟಿತ್ತು. ಮೊನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ತಾಯಿ, ಮಕ್ಕಳ ನಡುವೆ ಜಗಳ ಆಗಿತ್ತು.

ಎಂಟನೇ ಕ್ಲಾಸ್ ಓದುತ್ತಿದ್ದ 18 ವರ್ಷದ ಹುಡುಗ, ತನ್ನ ತಂಗಿಯನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾನೆ. ಆಕೆ ಹೊರ ನಡೆಯುತ್ತಿದ್ದಂತೆ, ಮನೆಯ ಬಾಗಿಲನ್ನು ಒಳಗಿಂದ ಲಾಕ್ ಮಾಡಿದ್ದ ಹುಡುಗ ತಾಯಿಯ ಕುತ್ತಿಗೆ ಬೆಲ್ಟ್ ನಲ್ಲಿ ಅದುಮಿದ್ದಾನೆ. ವಿಲವಿಲ ಒದ್ದಾಡಿ ಸಾಯುವ ತನಕವೂ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಸ್ವಲ್ಪ ಹೊತ್ತಿನ ಬಳಿಕ ತಂಗಿ ಮನೆಗೆ ಮರಳಿದ್ದು, ಅಲ್ಲಿನ ದೃಶ್ಯ ನೋಡಿ ಹೌಹಾರಿದ್ದಾಳೆ. ತಾಯಿಯನ್ನೇ ಕೊಲೆ ಮಾಡಿದ್ದು ನೋಡಿ ಸ್ಥಳೀಯರನ್ನು ಕರೆದಿದ್ದಾಳೆ. ಬಳಿಕ ವಸಾಯಿ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ತಾಯಿಯನ್ನು ಕೊಲೆಗೈದ ಬಳಿಕ ಅಲ್ಲಿಯೇ ಕುಳಿತಿದ್ದ ಮಗನನ್ನು ವಶಕ್ಕೆ ಪಡೆದಿದ್ದಾರೆ. ತಂದೆಯ ಉಳಿಸಿದ್ದ ಹಣವನ್ನು ತಾಯಿ ಕುಡಿತಕ್ಕೇ ಮುಗಿಸುತ್ತಿದ್ದಾಳೆಂದು ಕೊಲೆ ಮಾಡಿದ್ದಾಗಿ ಹುಡುಗ ಹೇಳಿದ್ದಾನಂತೆ.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm