ಬ್ರೇಕಿಂಗ್ ನ್ಯೂಸ್
01-09-20 06:11 pm Mysore Reporter ಕ್ರೈಂ
ಮೈಸೂರು, ಸೆಪ್ಟೆಂಬರ್ 1: ನೀವು ಬೆಲ್ ಬಾಟಮ್ ಸಿನಿಮಾ ನೋಡಿರಬಹುದು. ಯಾವುದೇ ಕುರುಹೇ ಇಲ್ಲದ ರೀತಿ ಮನೆ ಕಳ್ಳತನ ಮಾಡೋ ಕತೆ ಅದರಲ್ಲಿತ್ತು. ಈಗ ನಿಜ ಜೀವನದಲ್ಲೂ ಅದೇ ಮಾದರಿಯ ಕಳ್ಳತನ ಆಗಿರುವುದು ಪೊಲೀಸರನ್ನು ದಂಗುಬಡಿಸಿದೆ. ಮನೆಯ ಬಾಗಿಲು ಮುರಿಯದೇ, ಬೀರುವಿನ ಬೀಗವನ್ನೂ ಒಡೆಯದೆ ಬರೋಬ್ಬರಿ ಎರಡು ಕೆ.ಜಿ ಚಿನ್ನವನ್ನು ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಶೇಷ ಅಂದ್ರೆ, ಈ ಕಳವು ನಡೆದಿದ್ದು ಕಳ್ಳರನ್ನು ಹಿಡಿಯೋ ಪೊಲೀಸರ ಮನೆಯಲ್ಲಿ..!
ಮೈಸೂರಿನ ಸರಸ್ವತಿಪುರಂನ 5ನೇ ಕ್ರಾಸ್ನಲ್ಲಿರುವ ವಿಜಯ್ ಕುಮಾರ್ ಮತ್ತು ಪತ್ನಿ ವನಜಾಕ್ಷಿ ಅವರ ಮನೆಯಲ್ಲಿ ಕಳ್ಳತನ ಆಗಿದೆ. ವನಜಾಕ್ಷಿ ಮೈಸೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬಂದಿ. ಇವರ ಮನೆಯಲ್ಲಿ ಸೋಮವಾರ ಮಧ್ಯರಾತ್ರಿ ಕಳ್ಳತನ ನಡೆದಿದ್ದು ಬರೋಬ್ಬರಿ 2 ಕೆಜಿ ಚಿನ್ನವನ್ನ ಕಳ್ಳರು ಕುರುಹೇ ಇಲ್ಲದ ರೀತಿ ಎಗರಿಸಿದ್ದಾರೆ.
ಕಳ್ಳತನ ಕೃತ್ಯದ ಬಗ್ಗೆಯೇ ಈಗ ಸಂಶಯ ಉಂಟಾಗಿದೆ. ಕಳ್ಳರು ಮನೆಗೆ ಹೇಗೆ ನುಗ್ಗಿದ್ದಾರೆ ಎನ್ನುವುದೇ ಪೊಲೀಸರು ಮತ್ತು ಮನೆಯವರ ಚಿಂತೆಗೆ ಕಾರಣವಾಗಿದೆ. ಯಾಕಂದ್ರೆ, ಮನೆಯ ಯಾವುದೇ ಬಾಗಿಲು ಅಥವಾ ಕಿಟಕಿಗಳನ್ನು ಮುರಿದಿಲ್ಲ. ಜತೆಗೆ ಚಿನ್ನ ಇದ್ದ ಬೀರುವಿನ ಬೀಗವನ್ನೂ ಒಡೆದಿಲ್ಲ. ಮನೆಯ ಒಳಗೆ ಕಳ್ಳರು ಬಂದಿದ್ದಾರೆ ಎನ್ನುವ ಕುರುಹೇ ಇಲ್ಲದ ರೀತಿ ಚಿನ್ನ ಎಗರಿಸಿದ್ದಾರೆ. ವಿಶೇಷ ಅಂದ್ರೆ, ಘಟನೆ ನಡೆಯುವ ವೇಳೆ ವಿಜಯ್ ಕುಮಾರ್ ಅವರ ಮಗಳು ಅದೇ ಜಾಗದಲ್ಲಿ ಮಲಗಿದ್ದರು. ಇವರಿಗೆ ಕಳ್ಳತನ ಆಗಿದ್ದೇ ಗೊತ್ತಿಲ್ಲ.
ಕಳ್ಳರು ಹೊತ್ತೊಯ್ದ ಚಿನ್ನದಲ್ಲಿ ನಮ್ಮ ಸಂಬಂಧಿಕರ ಚಿನ್ನವೂ ಇದೆ. ಬ್ಯಾಂಕ್ ಕಚೇರಿ ಸ್ಥಳಾಂತರ ಆಗುತ್ತಿದ್ದ ಕಾರಣ ನಾವು ಚಿನ್ನ ತಂದು ಮನೆಯಲ್ಲೇ ಇಟ್ಟಿದ್ದೆವು. ರಾತ್ರಿ ತಾಯಿಗೆ ಅನಾರೋಗ್ಯ ಆಗಿದ್ದರಿಂದ ಹೊರಗೆ ಹೋಗಿದ್ದೆವು. ಮಗಳು ಮಾತ್ರ ಮನೆಯಲ್ಲಿ ಇದ್ದಳು ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ಕಳ್ಳತನ ಬಗ್ಗೆ ಪೊಲೀಸರು ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳತನ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಕ್ಕಪಕ್ಕದ ಮನೆಯ ಸಿಸಿಟಿವಿಗಳನ್ನೂ ಹುಡುಕಾಡಿದ್ದಾರೆ. ಯಾವುದೇ ಸಾಕ್ಷಿ ಸಿಕ್ಕಿಲ್ಲ. ಕಳ್ಳತನವಾದ ಮನೆಯಲ್ಲಿ ಒಂದೇ ಒಂದು ಕುರುಹು ಇಲ್ಲದಿರುವುದು ಕೃತ್ಯದ ಬಗ್ಗೆಯೇ ಸಂಶಯ ಹುಟ್ಟಿದೆ. ಮನೆಯವರೇ ಕಳ್ಳತನದ ಕತೆ ಕಟ್ಟಿದ್ದಾರೆಯೇ ಅನ್ನುವ ಅನುಮಾನ ಕೇಳಿಬಂದಿದೆ.
ಎರಡು ಕೆಜಿ ಚಿನ್ನವೆಂದರೆ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚಿನ ಮೌಲ್ಯ ಆಗಲಿದೆ. ಅಪರಾಧ ವಿಭಾಗದ ಡಿಸಿಪಿ ಗೀತ ಪ್ರಸನ್ನ ಅವರು, ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm