ಬ್ರೇಕಿಂಗ್ ನ್ಯೂಸ್
26-01-21 02:45 pm Mangalore Correspondent ಕ್ರೈಂ
ಮಂಗಳೂರು, ಜ.26: ಕಾವೂರು ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿ ನಿನ್ನೆ ರಾತ್ರಿ ಪುಂಡಾಟಿಕೆ ನಡೆದಿದೆ. ಯುವಕನೊಬ್ಬ ಇಬ್ಬರ ಮೇಲೆ ವಿನಾಕಾರಣ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರೋರಾತ್ರಿ ಶಾಂತಿನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಯುವಕರು ಸೇರಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ರಾತ್ರಿ 11 ಗಂಟೆ ಸುಮಾರಿಗೆ ನಿಕಿತ್ ಮತ್ತು ಇನ್ನೊಬ್ಬ ಕಾರಿನಲ್ಲಿ ಬರುತ್ತಿದ್ದಾಗ ಶಾಂತಿನಗರದಲ್ಲಿ ಅಶ್ರಫ್ ಎಂಬ ಯುವಕ ರಸ್ತೆಯಲ್ಲಿ ಕುಳಿತು ಸಿಗರೇಟು ಸೇದುತ್ತಿದ್ದ. ಈ ಬಗ್ಗೆ ರಸ್ತೆಯಲ್ಲಿ ಕುಳಿತಿರುವ ವ್ಯಕ್ತಿಯನ್ನು ಕಾರಿನಲ್ಲಿದ್ದ ಮಂದಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಮಾತಿನ ಚಕಮಕಿ ನಡೆದಿದ್ದು, ಅಶ್ರಫ್ ಅಲ್ಲಿ ಕೈಗೆ ಸಿಕ್ಕ ಮರದ ಸೋಂಟೆಯಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.
ಇಷ್ಟಾಗುತ್ತಿದ್ದಂತೆ, ಕಾವೂರಿನ ಹಿಂದು ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದು, ಪೊಲೀಸರಿಗೂ ಸುದ್ದಿ ಮುಟ್ಟಿಸಿದ್ದಾರೆ. ಕಾವೂರು ಪೊಲೀಸರು ಬಂದು ಉದ್ರಿಕ್ತರನ್ನು ಮನವೊಲಿಸಿ, ಚದುರಿಸಿದ್ದಾರೆ. ಅಲ್ಲದೆ, ಅಶ್ರಫ್ ವಿರುದ್ಧ ಕೇಸು ದಾಖಲಿಸುವುದಾಗಿ ಹೇಳಿದ್ದಾರೆ. ರಾತ್ರಿ 12 ಗಂಟೆ ವೇಳೆಗೆ ಪೆಟ್ಟು ತಿಂದ ಯುವಕರಿಬ್ಬರ ಮನೆಯಿಂದ ಮಹಿಳೆಯರೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಅಲ್ಲದೆ, ಹಲ್ಲೆಗೊಳಗಾದ ಯುವಕರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಗಾಂಜಾ ಅಡ್ಡೆ !
ಶಾಂತಿನಗರದಲ್ಲಿ ಸಂಜೆ ಹೊತ್ತಿಗೆ ಯುವತಿಯರು, ಮಹಿಳೆಯರು ನಡೆದುಕೊಂಡು ಹೋಗಲು ಭಯ ಪಡುತ್ತಿದ್ದಾರೆ. ಯುವಕರು ಸೇರಿಕೊಂಡು ಚುಡಾಯಿಸುವುದು, ಕಿಚಾಯಿಸುವುದನ್ನು ಮಾಡುತ್ತಾ ಕೀಟಲೆ ಮಾಡುತ್ತಾರೆ. ಅಲ್ಲದೆ, ಗಾಂಜಾ ಸೇದಿಕೊಂಡು ಪೊಲೀಸರಿಗೂ ಭಯ ಪಡದ ವಾತಾವರಣ ಅಲ್ಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಭಾಗದಲ್ಲಿ ಪೊಲೀಸರು ಬೀಟ್ ಮಾಡುವುದಿಲ್ಲ. ಸಂಜೆಯಿಂದ ರಾತ್ರಿಯಾದರೂ ಅಲ್ಲಿ ಬೀದಿಯಲ್ಲಿ ನಿಂತು, ರಸ್ತೆಯಲ್ಲಿ ಕುಳಿತು ಯುವಕರು ಕೀಟಲೆ ನಡೆಸುತ್ತಾರೆ. ಮಂಗಳೂರು ನಗರ ಭಾಗದಲ್ಲಿ ಬೀಟ್ ಮಾಡುವ ಪೊಲೀಸರು ಈ ಭಾಗದಲ್ಲಿ ಯಾಕೆ ಮಾಡುವುದಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದಲೇ ಶಾಂತಿನಗರ ಗಾಂಜಾ ಅಡ್ಡೆಯಾಗಿದೆ ಎಂದು ದೂರುತ್ತಾರೆ.

ಆರೋಪಿ ಅಶ್ರಫ್ ಮೂಲತಃ ಮೂಲ್ಕಿಯ ಕಾರ್ನಾಡು ನಿವಾಸಿ ಎನ್ನಲಾಗುತ್ತಿದೆ. ಕೆಲಸದ ನಿಮಿತ್ತ ಕಾವೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸರಲ್ಲಿ ಕೇಳಿದರೆ, ಅದು ಗಾಂಜಾ ಗಲಾಟೆ, ದೊಡ್ಡ ವಿಷ್ಯ ಏನಿಲ್ಲ ಎನ್ನುತ್ತಾರೆ. ಪೊಲೀಸರ ನಿರ್ಲಕ್ಷ್ಯವೇ ಅಪರಾಧಿಗಳ ಆಟಾಟೋಪಕ್ಕೆ ಕಾರಣವಾಗುತ್ತದೆ ಅನ್ನುವುದನ್ನು ಪೊಲೀಸರು ಮನಗಂಡಂತಿಲ್ಲ.
Ganja Consumption in car has lead to fight between two groups at Shantinagar in Kavoor. A case has been filed and the accused is said to be absconding.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
01-08-26 04:27 pm
HK News Staffer
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm