ಬ್ರೇಕಿಂಗ್ ನ್ಯೂಸ್
14-01-21 12:36 pm Mangalore Correspondent ಕ್ರೈಂ
ಮಂಗಳೂರು, ಜ.14: ಮಂಗಳೂರು ನಗರದಲ್ಲಿ ಮಕ್ಕಳ ಕಳ್ಳರಿದ್ದಾರೆಂಬ ವದಂತಿ ಕೇಳಿಬಂದಿದೆ. ಬುಧವಾರ ಬೆಳಗ್ಗೆ ಕುದ್ರೋಳಿಯ ಅಳಕೆಯಲ್ಲಿ ಒಬ್ಬ ಮಹಿಳೆಯ ಬಗ್ಗೆ ಗುಮಾನಿ ವ್ಯಕ್ತಪಡಿಸಿ, ಜನರು ಸೇರಿ ಆಕೆಯನ್ನು ಗದರಿ, ಪೊಲೀಸರಿಗೊಪ್ಪಿಸಿದ್ದರು. ನಿನ್ನೆ ಸಂಜೆ ಹೊತ್ತಿಗೆ ಕೊಂಚಾಡಿಯ ಮಹಾಲಸಾ ದೇವಸ್ಥಾನ ಆವರಣದಲ್ಲಿ ಮಗುವೊಂದನ್ನು ಅಪಹರಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಕೊಂಚಾಡಿಯಲ್ಲಿ ಬೈಕಿನಲ್ಲಿ ಬಂದಿದ್ದ ಇಬ್ಬರು ಸೇರಿ ಆಟವಾಡುತ್ತಿದ್ದ ಮಗುವೊಂದನ್ನು ಮುಸುಕು ಹಾಕಿ, ಹಿಡಿಯಲು ಯತ್ನಿಸಿದ್ದಾರೆ. ಮಗುವಿನ ತಲೆಯ ಭಾಗಕ್ಕೆ ಮುಸುಕು ಹಾಕುತ್ತಿದ್ದಂತೆ ಅಲ್ಲಿ ಆಟವಾಡುತ್ತಿದ್ದ ಇತರೇ ಮಕ್ಕಳು ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ ಬೈಕಿನಲ್ಲಿ ಬಂದವರು ಪರಾರಿಯಾಗಿದ್ದಾರೆ.
ಮಕ್ಕಳ ಮಾತು ಕೇಳಿ, ಸ್ಥಳೀಯರು ಭಯಗೊಂಡಿದ್ದು ಅಪಹರಣ ಯತ್ನಕ್ಕೆ ಒಳಗಾದ ಮಗುವಿನ ಪಾಲಕರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆಗಂತುಕರ ಪತ್ತೆಗಾಗಿ ಕೊಂಚಾಡಿ ಪರಿಸರದ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮಕ್ಕಳ ಅಪಹರಣಕ್ಕೆ ಯತ್ನಿಸಿದ್ದು ಹೌದೋ, ಅಲ್ಲವೋ ಎನ್ನುವ ಬಗ್ಗೆ ಖಾತ್ರಿಪಡಿಸಲು ದಾಖಲೆ ಹುಡುಕುತ್ತಿದ್ದಾರೆ.
ಇದೇ ವೇಳೆ, ಅಳಕೆಯಲ್ಲಿ ಮಹಿಳೆಯ ಕಿತಾಪತಿ ಬಗ್ಗೆ ಬಂದರು ಪೊಲೀಸರಲ್ಲಿ ವಿಚಾರಿಸಿದರೆ, ಅಲ್ಲಿ ಮಹಿಳೆಯ ಬಗ್ಗೆ ಗುಮಾನಿ ಬಂದಿದ್ದು ಫೋಟೊ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದು ಗೊತ್ತು. ಅದು ಮಕ್ಕಳ ಅಪಹರಣದ ವಿಷಯ ಅಲ್ಲ. ಆ ಮಹಿಳೆ, ಉತ್ತರ ಭಾರತದ ಮೂಲದವರಾಗಿದ್ದು ಅಳಕೆ ಪರಿಸರದಲ್ಲಿ ಗುಜರಾತಿ ಮೂಲದವರ ಮನೆಗೆ ಬಂದು ಹಣ ಕೇಳುತ್ತಿದ್ದರಂತೆ. ಅದರ ಬಗ್ಗೆ ಯಾರೂ ಕಂಪ್ಲೇಂಟ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
A woman was held by locals at Konchady in Mangalore alleging of Kidnapping Children. The Kankandy Town police have registered the case against her.
04-05-25 02:27 pm
Bangalore Correspondent
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm