ಬ್ರೇಕಿಂಗ್ ನ್ಯೂಸ್
27-12-20 09:12 pm Mangaluru Correspondent ಕ್ರೈಂ
ಮಂಗಳೂರು, ಡಿ.27: ಬೈಕಿನಲ್ಲಿ ಬಂದು ಸರ ಕದಿಯೋದನ್ನು ಕೇಳಿದ್ದೇವೆ. ಒಬ್ಬಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಯುವಕರು ಸರ ಕಿತ್ತು ಓಡುತ್ತಿರುವುದನ್ನು ಕಂಡಿದ್ದೇವೆ. ಆದರೆ, ಈಗ ಕಳ್ಳರು ಕದಿಯೋದರಲ್ಲೂ ಹೈ ಫೈ ಆಗುತ್ತಿದ್ದಾರೆ. ಮಂಗಳೂರಿನಲ್ಲಿ ಆಟೋದಲ್ಲಿ ಬಂದು ರಾತ್ರೋರಾತ್ರಿ ತಲೆಗೆ ದೊಣ್ಣೆಯಲ್ಲಿ ಹೊಡೆದು ಕಳವು ಮಾಡೋ ಹೊಸ ರೀತಿಯ ಪ್ರಯೋಗ ಆರಂಭವಾಗಿದೆ.
ಮಂಗಳೂರಿನ ಬಂದರು ಮತ್ತು ಉಳ್ಳಾಲದಲ್ಲಿ ಡಿ.25ರಂದು ರಾತ್ರಿ ಒಂದೇ ದಿನ ಹೀಗೆ ವಿಭಿನ್ನ ರೀತಿಯ ಕಳವು ಕೃತ್ಯ ನಡೆದಿದೆ. ಬಂದರಿನಲ್ಲಿ ಪ್ರಭುದೇವ್ ಎಂಬವರು ಮನೆಯಿಂದ ಹೊರಬಂದು ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ, ಆಟೋದಲ್ಲಿ ಬಂದ ವ್ಯಕ್ತಿ ದೊಣ್ಣೆಯಿಂದ ತಲೆಗೆ ಬಡಿದಿದ್ದಾನೆ. ಪ್ರಭುದೇವ್ ಬಳಿಯಿದ್ದ ಮೊಬೈಲನ್ನು ಕಿತ್ತುಕೊಂಡು ಆಟೋದಲ್ಲಿ ಬಂದಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.
ಇದೇ ರೀತಿಯ ಪ್ರಕರಣ ಉಳ್ಳಾಲದಲ್ಲಿಯೂ ಅದೇ ದಿನ ರಾತ್ರಿ ನಡೆದಿದೆ. ಉಳ್ಳಾಲದಲ್ಲಿ ಜಾಫರ್ ಎಂಬ ವ್ಯಕ್ತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋದಲ್ಲಿ ಬಂದ ವ್ಯಕ್ತಿ ತಲೆಗೆ ಹೊಡೆದಿದ್ದು ಆತ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮೊಬೈಲ್ ಎಗರಿಸಿ ಓಡಿದ್ದಾರೆ.
ಆಟೋದಲ್ಲಿ ಚಾಲಕ ಮತ್ತು ಹಿಂಭಾಗದ ಸೀಟಿನಲ್ಲಿ ಮತ್ತೊಬ್ಬ ಇದ್ದ ಎಂದು ಪೊಲೀಸ್ ದೂರು ನೀಡಲಾಗಿದೆ. ಎರಡು ಪ್ರಕರಣವೂ ಬಂದರು ಮತ್ತು ಉಳ್ಳಾಲ ಠಾಣೆಯಲ್ಲಿ ದಾಖಲಾಗಿದೆ. ಟ್ಯಾಕ್ಸಿ ಆಟೋದಲ್ಲಿ ಬಂದು ಹೀಗೆ ದೊಣ್ಣೆಯಲ್ಲಿ ಹೊಡೆದು ಆತನಲ್ಲಿರುವ ಚಿನ್ನ, ಮೊಬೈಲ್, ಹಣ ಹೀಗೆ ಎಲ್ಲವನ್ನೂ ಕಿತ್ತುಕೊಂಡು ಹೋಗುತ್ತಿರುವುದು ಹೊಸ ರೀತಿಯ ಅಪರಾಧ ಆಗಿದ್ದು ಪೊಲೀಸರು ಇನ್ನಷ್ಟೇ ಈ ಬಗ್ಗೆ ಎಚ್ಚತ್ತುಕೊಳ್ಳಬೇಕಷ್ಟೆ.
Mangalore city has now witnessed Robbers arriving in auto-rickshaw Attacking persons and snatching their Mobile phones and cash. A case has been reported in Bunder and Ullal Police station.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
19-06-25 10:08 pm
Mangalore Correspondent
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm