ಬ್ರೇಕಿಂಗ್ ನ್ಯೂಸ್
09-08-20 05:27 pm Udupi Reporter ಕ್ರೈಂ
ಉಡುಪಿ, ಆಗಸ್ಟ್ 9: ದೇಶದಲ್ಲಿ ಕೇಂದ್ರ ಸರಕಾರವೇನೋ ತ್ರಿವಳಿ ತಲಾಖ್ ಗೆ ನಿಷೇಧ ಹೇರಿದೆ. ಮುಸ್ಲಿಂ ಮಹಿಳೆಯರು ಇದರಿಂದ ಸಂತಸಗೊಂಡಿದ್ದೂ ಆಗಿದೆ. ಆದರೆ, ತ್ರಿವಳಿ ತಲಾಖ್ ನೀಡೋರು ಕಡಿಮೆಯಾಗಿದ್ದಾರೆ ಅಂದರೆ ಅದು ಭ್ರಮೆ ಮಾತ್ರ. ಹುಟ್ಟುಗುಣ ಸುಟ್ಟರೂ ಬಿಡದು ಎನ್ನುವಂತೆ ಕೆಲವರು ವರ್ತಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಇಲ್ಲೊಬ್ಬ ಫೇಸ್ಬುಕ್ಕಲ್ಲೇ ತಲಾಖ್, ತಲಾಖ್ ಎಂದು ಕಂಬಿ ಎಣಿಸಿದ್ದು..
ಉಡುಪಿ ಜಿಲ್ಲೆಯ ಶಿರ್ವ ನಿವಾಸಿ ಶೇಕ್ ಮೊಹಮ್ಮದ್ ಸಲೀಂ (38) ಎಂಬಾತ ತನ್ನ ಪತ್ನಿಗೆ ಫೇಸ್ಬುಕ್ ತಲಾಖ್ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶಿರ್ವ ಜಾಮಿಯಾ ಮಸೀದಿ ಸಮೀಪದ ನಿವಾಸಿಯಾಗಿರುವ ಮೊಹಮ್ಮದ್ ಸಲೀಂ, 2010ರ ಸೆ.23ರಂದು ವಿವಾಹವಾಗಿದ್ದ. ಅಷ್ಟೇ ಅಲ್ಲ, ಮದುವೆಯಾಗಿ ಪತ್ನಿಯ ಜೊತೆಗೇ ಸೌದಿಗೂ ತೆರಳಿದ್ದ. ದಾಂಪತ್ಯಕ್ಕೆ ಸಾಕ್ಷಿಯಾಗಿ ಪುತ್ರಿಯೂ ಜನಿಸಿದ್ದಳು. ಆದರೆ, ಈ ನಡುವೆ ಸಲೀಂಗೆ ಏನು ಗರ ಬಡಿಯಿತೋ ಗೊತ್ತಿಲ್ಲ. ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಪತ್ನಿ , ಮಗಳನ್ನು ಬಿಟ್ಟು 2019 ಅಕ್ಟೋಬರ್ 3ರಂದು ಎಸ್ಕೇಪ್ ಆಗಿ ಮುಂಬೈಗೆ ಬಂದಿದ್ದ. ಅಷ್ಟೇ ಅಲ್ಲ, ಮುಂಬೈಗೆ ಬರುವಾಗಲೇ ಇನ್ನೊಬ್ಬಳನ್ನು ಕಟ್ಟಿಕೊಂಡೇ ಆಗಮಿಸಿದ್ದ.

ಪತ್ನಿ ಹಾಗೂ ಮಗಳಿಗೆ ಗೊತ್ತೇ ಆಗದ ರೀತಿ ಮತ್ತೊಬ್ಬ ಮಹಿಳೆಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದ. ಅಷ್ಟೇ ಅಲ್ಲ, ಹಳೆಯ ಪತ್ನಿಗೆ ತನ್ನ ಫೇಸ್ಬುಕ್ ಖಾತೆಯ ಮೆಸೆಂಜರ್ ಮೂಲಕ ತ್ರಿವಳಿ ತಲಾಖಿನ ವಾಯ್ಸ್ ಮೆಸೇಜ್ ಕಳಿಸಿದ್ದಾನೆ. ಗಂಡನ ಕಿತಾಪತಿ ಕಂಡು ಆಘಾತಗೊಂಡ ಪತ್ನಿ ಸ್ವಪ್ನಾಝ್, ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಇರುವುದನ್ನು ಮನಗಂಡು ಸೇಡು ತೀರಿಸಲು ನಿರ್ಧರಿಸಿದ್ದಾಳೆ.
ಪತಿಯ ವಂಚನೆಯಿಂದ ದಿಕ್ಕೇ ತೋಚದಂತಾಗಿದ್ದ ಪತ್ನಿ ಸ್ವಪ್ನಾಝ್ ಧೈರ್ಯ ಮಾಡಿ, ಸೌದಿಯಿಂದಲೇ ಶಿರ್ವ ಠಾಣೆಗೆ ದೂರು ನೀಡಿದ್ದಾಳೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಶಿರ್ವ ಪೊಲೀಸರು, ಮೊಹಮ್ಮದ್ ಸಲೀಂ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆಗಸ್ಟ್ 7 ರಂದು ಶಿರ್ವಕ್ಕೆ ಬಂದಿದ್ದ ಮೊಹಮ್ಮದ್ ಸಲೀಂನನ್ನು ಪೊಲೀಸರ ಅರೆಸ್ಟ್ ಮಾಡಿದ್ದು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ತಲಾಖ್ ತಲಾಖ್ ಎಂದು ಮುಸ್ಲಿಂ ಮಹಿಳೆಯರನ್ನು ಶೋಷಣೆ ಮಾಡುವ ಧೋರಣೆ ಇನ್ನು ನಡೆಯಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಪತ್ನಿ ಸಫ್ನಾಝ್ ಸೌದಿಯಲ್ಲಿದ್ದೇ ಈ ಕೆಲಸ ಮಾಡಿದ್ದು ನಿಜಕ್ಕೂ ಗಟ್ಟಿಗಿತ್ತಿಯ ಕೆಲಸವೇ ಸರಿ..
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm