ಬ್ರೇಕಿಂಗ್ ನ್ಯೂಸ್
05-09-24 02:55 pm Mangalore Correspondent ಕ್ರೈಂ
ಪುತ್ತೂರು, ಸೆ.5: ತನ್ನನ್ನು ಸಿಆರ್ ಪಿಎಫ್ ಯೋಧನೆಂದು ಫೇಸ್ಬುಕ್ ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ತನಗೆ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ, ಫರ್ನಿಚರ್ ಗಳನ್ನು ಮಾರಾಟ ಮಾಡುತ್ತೇನೆಂದು ಹೇಳಿ ಅಡ್ವಾನ್ಸ್ ಹಣ ಪಡೆದು ಪುತ್ತೂರಿನ ವ್ಯಕ್ತಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕು ಪಂಚಾಯಿತಿ ನರೇಗಾ ಸಂಯೋಜಕ ಭರತ್ ಕುಮಾರ್ ಹಣ ಕಳಕೊಂಡವರು. ಇವರಿಗೆ ಫೇಸ್ಬುಕ್ ಮೆಸೆಂಜರ್ ನಲ್ಲಿ ಗೆಳೆಯ ರಾಧಾಕೃಷ್ಣ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ನನ್ನ ಗೆಳೆಯ ಸಂತೋಷ್ ಸಿಆರ್ ಪಿಎಫ್ ಯೋಧನಾಗಿದ್ದು, ಕಾಶ್ಮೀರಕ್ಕೆ ವರ್ಗಾವಣೆಯಾಗುತ್ತಿದ್ದಾನೆ. ಆತನ ಮನೆಯಲ್ಲಿರುವ ಪೀಠೋಪಕರಣ, ಇಲೆಕ್ಟ್ರಾನಿಕ್ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಸಂದೇಶ ಬಂದಿತ್ತು.
ಬಳಿಕ ಸಂತೋಷ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಭರತ್ ಗೆ ಕರೆ ಮಾಡಿದ್ದು ಮನೆ ಸಾಮಗ್ರಿಗಳನ್ನು ಕಳಿಸಿಕೊಡುವುದಾಗಿ ಹೇಳಿ ಫೋಟೋ ಕಳಿಸಿದ್ದಾನೆ. ಸಾಮಗ್ರಿಗೆ 95 ಸಾವಿರ ರೂ. ಎಂದು ಹೇಳಿದ ಆ ವ್ಯಕ್ತಿಯ ಜೊತೆಗೆ ಭರತ್ ಚೌಕಾಶಿ ಮಾಡಿದ್ದು, ಹತ್ತು ಸಾವಿರ ರೂ. ಅಡ್ವಾನ್ಸ್ ಮಾಡಿದ್ದಾರೆ. ಬಳಿಕ ಬೆಂಗಳೂರಿನಿಂದ ಸಿಆರ್ ಪಿಎಫ್ ಲಾರಿಯಲ್ಲಿ ಸಾಮಗ್ರಿ ಕಳಿಸಿಕೊಡುತ್ತಿದ್ದೇನೆ, ಕೂಡಲೇ ಉಳಿಕೆ ಹಣ ಕಳಿಸುವಂತೆ ವ್ಯಕ್ತಿ ಒತ್ತಡ ಹೇರಿದ್ದ. ಈ ಹಂತದಲ್ಲಿ ಸಂಶಯಕ್ಕೀಡಾದ ಭರತ್, ಫೇಸ್ಬುಕ್ ಗೆಳೆಯ ರಾಧಾಕೃಷ್ಣ ಅವರಿಗೆ ಕರೆ ಮಾಡಿದಾಗ, ತಾನೇನೂ ಮೆಸೇಜ್ ಹಾಕಿಲ್ಲ ಎಂದುತ್ತರ ಬಂದಿದೆ. ಇದರಿಂದ ಮೋಸ ಹೋಗಿದ್ದು ಅರಿವಾಗುತ್ತಲೇ ಭರತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮೆಸೇಜ್ ಕಳಿಸಿದ್ದ ಫೇಸ್ಬುಕ್ ಖಾತೆ ಬ್ಲಾಕ್ ಆಗಿದೆ. ಹಣ ಕಳಿಸಿದ್ದ ಫೋನ್ ಪೇ ನಂಬರ್ ಚಾಲ್ತಿಯಲ್ಲಿದ್ದು, ಫೋನ್ ಮಾಡಿದರೆ ರಿಂಗ್ ಆಗುತ್ತಿದೆ. ಫೋನ್ ಪೇ ಮಾಡಿದಾಗ ಬಾಬುಲಾಲ್ ಎಂದು ಆ ಹೆಸರನ್ನು ತೋರಿಸಿತ್ತು. ಅವರಲ್ಲಿ ಕೇಳಿದಾಗ, ಅದು ತನ್ನ ತಂದೆಯದೆಂದು ಸಂತೋಷ್ ಹೇಳಿದ್ದ ಎಂದು ಭರತ್ ಕುಮಾರ್ ತಿಳಿಸಿದ್ದಾರೆ.
Online fraud in the name of CRSF solider, puttur man cheated of 10 thousand rs.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm