ಬ್ರೇಕಿಂಗ್ ನ್ಯೂಸ್
25-04-24 10:18 pm Mangalore Correspondent ಕ್ರೈಂ
ಮಂಗಳೂರು, ಎ.25: ಮಂಗಳೂರಿನಲ್ಲಿ ಷೇರು ಮಾರುಕಟ್ಟೆ ವಹಿವಾಟು ನಡೆಸುತ್ತಿದ್ದು, ಹಲವರಿಂದ ಹಣ ಪಡೆದು ವಂಚಿಸಿದ್ದ ಕೃಷ್ಣಪ್ರಸಾದ್ ಶೆಟ್ಟಿ (42) ಎಂಬ ವ್ಯಕ್ತಿ 2023ರ ನವೆಂಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.
ಕೃಷ್ಣಪ್ರಸಾದ್ ಶೆಟ್ಟಿ ಮೂಲತಃ ಹೆಬ್ರಿ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಕುಟುಂಬದ ಜೊತೆಗೆ ನೆಲೆಸಿದ್ದರು. ಇದೇ ವೇಳೆ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಡಬಲ್ ಆಗುತ್ತದೆಯೆಂದು ಸ್ನೇಹಿತರು, ಸಂಬಂಧಿಕರನ್ನು ನಂಬಿಸಿ ಹಣ ಪಡೆದಿದ್ದರು. ಎರಡು ಕೋಟಿ ವರೆಗೂ ಹಣ ಪಡೆದು ವಂಚಿಸಿದ್ದಾರೆಂದು ಹಣ ಕಳಕೊಂಡವರು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದರು.
ಇದರ ಬೆನ್ನಲ್ಲೇ ನವೆಂಬರ್ 16ರಂದು ಪತ್ನಿಯ ಜೊತೆಗೆ ಕಾರಿನಲ್ಲಿ ಬಂಟ್ಸ್ ಹಾಸ್ಟೆಲ್ ಬಳಿಯ ಏಕ್ಸಿಸ್ ಬ್ಯಾಂಕಿಗೆ ಬಂದಿದ್ದರು. ಪತ್ನಿಯನ್ನು ಕಾರಿನಲ್ಲಿ ಕುಳ್ಳಿರಿಸಿ, ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಹೋದವರು ಮರಳಿರಲಿಲ್ಲ. ಮರುದಿನ ಸ್ನೇಹಿತರಿಗೆ ಬೆಂಗಳೂರಿಗೆ ತೆರಳಿದ್ದೇನೆ ಎಂದು ಹೇಳಿದ್ದರು. ಪತಿ ಬರದೇ ಇರುವುದರಿಂದ ಪತ್ನಿ ಮಂಗಳೂರಿನ ಬಂದರು ಠಾಣೆಗೆ ನಾಪತ್ತೆ ದೂರು ನೀಡಿದ್ದರು.
ಇದಲ್ಲದೆ, ಸೈಬರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದರಿಂದ ಹಣ ವಂಚಿತರು ಪೊಲೀಸರಿಗೆ ಒತ್ತಡ ಹೇರಿ ತನಿಖೆಗೆ ಆಗ್ರಹ ಮಾಡಿದ್ದರು. ಪೊಲೀಸರು ಕೃಷ್ಣಪ್ರಸಾದ್ ಶೆಟ್ಟಿಯ ಬಗ್ಗೆ ಹುಡುಕಾಟವನ್ನೂ ನಡೆಸಿದ್ದರು. ಆರೋಪಿ ಕೃಷ್ಣಪ್ರಸಾದ್ ತಲೆಮರೆಸಿಕೊಂಡಿದ್ದಾನೆಯೇ, ಏನಾದ್ರೂ ಮಾಡಿಕೊಂಡಿದ್ದಾನೆಯೇ ತಿಳಿದಿಲ್ಲ. ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಮಂಗಳೂರು ಪೊಲೀಸರಿಗೆ ತಿಳಿಸುವಂತೆ ಕೋರಿದ್ದಾರೆ.
Mangalore Fraud of crores in the name of share market, Krishnaprasad Shetty native of Hebri goes missing since six months. Police have requested to call them if they find him anywhere.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm