ಬ್ರೇಕಿಂಗ್ ನ್ಯೂಸ್
13-11-20 04:56 pm Mangalore Correspondent ಕ್ರೈಂ
ಪುತ್ತೂರು, ನವೆಂಬರ್ 13: ಮುಸ್ಲಿಂ ಯುವಕನೊಬ್ಬ ಹಿಂದು ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಯುವತಿಯ ಸ್ನೇಹ ಸಂಪಾದಿಸಿ ಆಕೆಯೊಂದಿಗೆ ಧರ್ಮಸ್ಥಳ ಸೇರಿ ಸುತ್ತಾಡಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕಡಬ ತಾಲೂಕು ಮರ್ದಾಳ ಗ್ರಾಮದ ಪಾಲೆತ್ತಡ್ಕ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರು ಬದಲಾಯಿಸಿ ಕೌಶಿಕ್ ಯಾನೆ ಸಂಜು ಎಂಬ ಹೆಸರಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ. ಅಲ್ಲದೆ, ತನಗೆ ತಂದೆ, ತಾಯಿ ಇಲ್ಲದಿದ್ದು, ಯಾರಾದ್ರೂ ಗೆಳಯರಾಗುವವರು ಫ್ರೆಂಡ್ ರಿಕ್ವೆಸ್ಟ್ ಕಳಿಸುವಂತೆ ಕೇಳಿಕೊಂಡಿದ್ದ. ಅಲ್ಲದೆ, 20ರಿಂದ 25 ವರ್ಷದ ಒಳಗಿನ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟನ್ನೂ ಕಳಿಸಿದ್ದ. ಈ ವೇಳೆ, ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯೊಬ್ಬಳು ಕನೆಕ್ಟ್ ಆಗಿದ್ದು, ವಾಟ್ಸಪ್ ನಂಬರ್ ಪಡೆದು ಇಬ್ಬರೂ ಚಾಟಿಂಗ್ ಆರಂಭಿಸಿದ್ದರು. ಆನಂತರ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಯುವತಿಯೂ ಹುಚ್ಚು ಮಾತಿಗೆ ಮರುಳಾಗಿದ್ದಾಳೆ.



ಇತ್ತೀಚೆಗೆ ನವೆಂಬರ್ 1ರಂದು ಹುಡುಗಿ ತನ್ನ ಹೆತ್ತವರ ಸಮ್ಮತಿ ಪಡೆದು, ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆತುಂಬ ಕುಂಕುಮ ಪ್ರಸಾದ ಹಾಕ್ಕೊಂಡಿದ್ದ ಕೌಶಿಕ್ ಯಾನೆ ಅಬ್ದುಲ್ಲ ಹುಡುಗಿ ಜೊತೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದ. ಬಳಿಕ ಈ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದಲ್ಲದೆ, ತಾನು ಅಪ್ಪಟ ಹಿಂದು ಎನ್ನುವಂತೆ ಹುಡುಗಿ ಮುಂದೆ ನಿರೂಪಿಸಲು ಹೋಗಿದ್ದಾನೆ. ಆದರೆ, ಫೇಸ್ಬುಕ್ ನಲ್ಲಿ ಹೀಗೆ ನಾಮ ಹಾಕ್ಕೊಂಡು ಫೋಟೋ ಹಾಕಿದ್ದನ್ನು ಗಮನಿಸಿದ ಆತನ ಮುಸ್ಲಿಂ ಸಮುದಾಯದ ಯುವಕರು ಆಕ್ಷೇಪಿಸಿದ್ದಾರೆ. ಈ ವೇಳೆ, ಅಬ್ದುಲ್ ರಜಾಕನ ವಾಸ್ತವ ಹೊರಗೆ ಬಂದಿದ್ದು ಹುಡುಗಿಯೂ ತಾನು ಮೋಸ ಹೋಗಿರುವುದನ್ನು ಅರಿತಿದ್ದಾಳೆ.
ಮನೆಯಲ್ಲಿ ಹೊಸ ಹುಡುಗ ಸಂಪರ್ಕ ಆಗಿದ್ದನ್ನು ಹೇಳಿಕೊಂಡು ತಿರುಗಿದ್ದ ಹುಡುಗಿಗೆ ಮುಸ್ಲಿಂ ಹುಡುಗನ ನಾಟಕ ಅರಿವಾಗಿದ್ದು, ಸುಳ್ಳು ಹೇಳಿ ವಂಚಿಸಿರುವ ವಿಚಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪುತ್ತೂರು ಭಾಗದಲ್ಲಿ ಈ ವಿಚಾರ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಕೂಡ ಲವ್ ಜಿಹಾದಿ ಕೃತ್ಯದ ಒಂದು ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಅಬ್ದುಲ್ ರಜಾಕ್ ಫೇಸ್ಬುಕ್ ನಲ್ಲಿ ಇನ್ನೂ ಹಲವು ಖಾತೆಗಳನ್ನು ಹೊಂದಿರುವುದು ಬಹಿರಂಗವಾಗಿದ್ದು, ಕನಕರಾಜು ಹೆಸರಲ್ಲಿ ಅಕೌಂಟ್ ಹೊಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹುಡುಗ- ಹುಡುಗಿ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.
Puttur Muslim Boy Fakes himself as Hindu to win the heart of Girl on Facebook for Marriage. Later he was exposed and a case has been registered in Uppinangady Police Station. The boy is identified as Abdul Razak (25), son of Sheikh Ismail, resident of Palathadka House in Mardhala, Bantra village, Kadaba taluk
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 07:52 pm
Mangalore Correspondent
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm