ಬ್ರೇಕಿಂಗ್ ನ್ಯೂಸ್
26-10-20 07:34 pm Mangalore Reporter ಕ್ರೈಂ
ಮಂಗಳೂರು, ಅಕ್ಟೋಬರ್ 26: ತುಳು ಚಿತ್ರನಟ, ಫೈನಾನ್ಸ್ ಮಾಡಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದೆ. ಕೊಲೆಯಾದ ದಿವಸ ಆತ ಉಳಿದುಕೊಂಡಿದ್ದ ಭಂಡಾರಿಬೆಟ್ಟಿನ ಫ್ಲ್ಯಾಟ್ ನಲ್ಲಿ ಒಂದು ಕೋಟಿ ರೂಪಾಯಿ ನಗದು ಇತ್ತು. ಅಲ್ಲದೆ, ಸುರೇಂದ್ರನ ಮೈಯಲ್ಲಿ ಒಂದು ಕೇಜಿಯಷ್ಟು ಬಂಗಾರ ಇತ್ತು. ಕೊಲೆಯ ಬಳಿಕ ಹಣ ಮತ್ತು ಬಂಗಾರ ನಾಪತ್ತೆಯಾಗಿದ್ದು ಕೊಲೆ ಆರೋಪಿಗಳೇ ಕದ್ದಿರಬೇಕೆಂದು ಶಂಕಿಸಿ ಸುರೇಂದ್ರ ಬಂಟ್ವಾಳ್ ತಾಯಿ ರಾಧಾ ಮತ್ತು ತಮ್ಮ ಚಂದ್ರಹಾಸ್ ಎಸ್ಪಿಗೆ ದೂರು ನೀಡಿದ್ದಾರೆ.
ಬಂಟ್ವಾಳ ಪೊಲೀಸರು ಎಫ್ಐಆರ್ ನಲ್ಲಿ ನಗದು ಮತ್ತು ಬಂಗಾರ ನಾಪತ್ತೆಯಾಗಿರುವ ವಿಚಾರವನ್ನು ಸೇರಿಸಿಲ್ಲ. ಈ ಬಗ್ಗೆ ಪೊಲೀಸರಿಗೆ ನಾವು ಮನವಿ ಮಾಡಿದ್ದರೂ, ಎಫ್ಐಆರ್ ನಲ್ಲಿ ಸೇರಿಸಿಕೊಂಡಿಲ್ಲ. ಇದರ ಬಗ್ಗೆ ಎಸ್ಪಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾಗಿ ಸುರೇಂದ್ರನ ತಾಯಿ ರಾಧಾ ತಿಳಿಸಿದ್ದಾರೆ.
ಅಲ್ಲದೆ, ಸತೀಶ್ ಕುಲಾಲ್ ಒಬ್ಬನೇ ಈ ಕೃತ್ಯ ಮಾಡಿಲ್ಲ. ಇದರ ಹಿಂದೆ ಪ್ರಭಾವಿಗಳು ಬಹಳಷ್ಟು ಮಂದಿ ಇದ್ದಾರೆ. ಕೊಲೆಯ ಬಳಿಕ ಚಿನ್ನ ಮತ್ತು ನಗದನ್ನು ಕದ್ದುಕೊಂಡು ಹೋಗಿದ್ದಾರೆ. ಫ್ಲ್ಯಾಟಿನಲ್ಲಿ ಒಂದು ಕೋಟಿ ನಗದು ಇದ್ದ ಬಗ್ಗೆ ಕೊಲೆಯಾಗುವ ಮೂರು ದಿನ ಮೊದಲು ನನ್ನಲ್ಲಿ ಹೇಳಿಕೊಂಡಿದ್ದ. ಹಣ ಮತ್ತು ಚಿನ್ನಕ್ಕಾಗಿ ಈ ಕೊಲೆ ನಡೆದಿದ್ದಾಗಿ ಅನಿಸುತ್ತಿದೆ ಎಂದು ರಾಧಾ ಹೇಳಿದ್ದಾರೆ.
ಈ ಬಗ್ಗೆ ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ಅವರನ್ನು ಸಂಪರ್ಕಿಸಿದಾಗ, ಹಣ ಮತ್ತು ಬಂಗಾರದ ಬಗ್ಗೆ ಆರಂಭದಲ್ಲಿ ದೂರು ನೀಡುವಾಗ ಹೇಳಿರಲಿಲ್ಲ. ಹಾಗಾಗಿ ಎಫ್ಐಆರ್ ನಲ್ಲಿ ಸೇರಿಸಿಕೊಂಡಿರಲಿಲ್ಲ. ಈಗ ಪ್ರಕರಣದ ತನಿಖೆ ಮುಂದುವರಿದಿದ್ದು, ಅಗತ್ಯ ಬಿದ್ದಲ್ಲಿ ಸೇರಿಸಿಕೊಳ್ಳುತ್ತೇವೆ. ಸದ್ಯದಲ್ಲೇ ಪ್ರಕರಣದ ವಿವರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಬಂಟ್ವಾಳ ಪೊಲೀಸರಿಂದ ಸಿಕ್ಕ ಮಾಹಿತಿ ಪ್ರಕಾರ, ಹಣ, ಬಂಗಾರ ಏನೆಲ್ಲಾ ಸಿಕ್ಕಿತ್ತು, ಎಲ್ಲವನ್ನೂ ಕೋರ್ಟಿಗೆ ಒಪ್ಪಿಸಲಿದ್ದೇವೆ. ಅದರಲ್ಲಿ ಎಷ್ಟಿತ್ತು. ಎಷ್ಟು ಬಂಗಾರ ಇತ್ತು ಎನ್ನೋದು ನಮಗೆ ಗೊತ್ತಿಲ್ಲ. ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದೇವೆ. ಹಲವು ವಿಚಾರಗಳು ಹೊರಬಂದಿವೆ. ಐದಾರು ತಂಡಗಳು ಸೇರಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಕೊಲೆಗೆ ಯಾರು ಬೆಂಬಲ ಕೊಟ್ಟಿದ್ದರು. ಯಾರಾದ್ರೂ ಸುಪಾರಿ ಕೊಟ್ಟಿದ್ದರೇ ಇವೆಲ್ಲ ವಿಚಾರದ ಬಗ್ಗೆ ಆರೋಪಿಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
Radha, mother of Surendra Bantea and brother Chandrahas have alleged that Surendra had one crore rupees cash in the Bhandaribettu flat and he had about a kilogram of gold ornaments on his body which are missing and that he was eliminated with an eye on these things.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
18-06-25 10:57 pm
Udupi Correspondent
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
Mangalore Accident, Jeppinamogaru, Aman Rao,...
18-06-25 10:24 am
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm