ಬ್ರೇಕಿಂಗ್ ನ್ಯೂಸ್
23-10-20 03:26 pm Bangalore Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 23: ಹಣ ಡಬಲ್ ಮಾಡಿಕೊಡುತ್ತೇವೆಂದು ಹೇಳಿ ವಂಚಿಸತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಹೈದರಾಬಾದ್ ಮೂಲದ ಹತ್ತು ಜನರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ವಿಜಯಕುಮಾರ್ (45), ಎಸ್.ಮಧುಸೂದನ್(42), ಪುಲ್ಲಪ್ಪ (43), ಎಂ.ಕಿರಣ್ (44), ಜಿ.ಪದ್ಮ (45), ಸೂರ್ಯಭಾಸ್ಕರ್ (45), ಸುಧಾಕರ್ (38), P. ಮುಧು (35), ಶಿವರಾತ್ರಿ ವೆಂಕಣ್ಣ (40), ಪ್ರಕಾಶ್ ಬಾಬು (60) ಬಂಧಿತ ಆರೋಪಿಗಳಾಗಿದ್ದು ಎರಡು ಲಾಡ್ಜ್ ಗಳಲ್ಲಿ ಇದ್ದುಕೊಂಡು ಅಮಾಯಕರನ್ನು ಮರುಳು ಮಾಡಿ ಹಣ ದೋಚುತ್ತಿದ್ದರು.

500 ರೂಪಾಯಿಗೆ 1000 ರೂ. ಕೊಡುತ್ತೇವೆ ಎಂದು ನಂಬಿಸುತ್ತಿದ್ದ ತಂಡ, ನೋಟಿನ ಆಕಾರದ ಕಪ್ಪು ಬಣ್ಣದ ಪೇಪರ್ ಮೇಲೆ 500, 2000 ಮೌಲ್ಯದ ನೋಟು ಇಟ್ಟು ನಕಲಿ ಪ್ರಿಂಟ್ ಹೊಡೆಯುತ್ತಿದ್ದರು. ಅದೇ ಮಾದರಿಯ ನಕಲಿ ನೋಟುಗಳನ್ನು ಜನರಿಗೆ ನೀಡುತ್ತಿದ್ದರು. ಖದೀಮರು ಕಪ್ಪು ಹಣ ಡಬ್ಲಿಂಗ್ ಮಾಡಿಕೊಡಲು 15% ಕಮಿಷನ್ ಕೂಡ ಪಡೆಯುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
2000 ರೂ. ಮೌಲ್ಯದ ಪಿಂಕ್ ನೋಟು ಕೊಡುವುದಾಗಿಯೂ ಜನರನ್ನು ನಂಬಿಸುತ್ತಿದ್ದರು. ಒಂದು ನೋಟಿಗೆ ಎರಡು ನೋಟ್ ಪಡೆಯುವ ಆಮಿಷಕ್ಕೆ ಬಲಿಯಾದ ಅದೆಷ್ಟೋ ಮಂದಿ ಈ ಜಾಲದಲ್ಲಿ ಹಣ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಪಿಂಕ್ ಮತ್ತು ಗ್ರೀನ್ ಎಂಬ ಕೋಡ್ ವರ್ಡ್ ಇಟ್ಟುಕೊಂಡು ಮನಿ ಡಬ್ಲಿಂಗ್ ಜಾಲ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ, ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಸ್ಥಳೀಯ ಮಹಿಳೆಯರು, ವೃದ್ಧರನ್ನೂ ತೊಡಗಿಸಿಕೊಂಡು ಹೈದರಾಬಾದ್ ಮೂಲದ ತಂಡ ಈ ಜಾಲ ನಿರ್ವಹಣೆ ಮಾಡುತ್ತಿತ್ತು.
Ten persons have been arrested in Money Doubling case by Bangalore City police. It is said this gang were cheating the innocents in the name of money doubling.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 09:46 pm
HK News Staffer
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 09:44 pm
HK News Staffer
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm