ಬ್ರೇಕಿಂಗ್ ನ್ಯೂಸ್
23-10-20 03:26 pm Bangalore Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 23: ಹಣ ಡಬಲ್ ಮಾಡಿಕೊಡುತ್ತೇವೆಂದು ಹೇಳಿ ವಂಚಿಸತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಹೈದರಾಬಾದ್ ಮೂಲದ ಹತ್ತು ಜನರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ವಿಜಯಕುಮಾರ್ (45), ಎಸ್.ಮಧುಸೂದನ್(42), ಪುಲ್ಲಪ್ಪ (43), ಎಂ.ಕಿರಣ್ (44), ಜಿ.ಪದ್ಮ (45), ಸೂರ್ಯಭಾಸ್ಕರ್ (45), ಸುಧಾಕರ್ (38), P. ಮುಧು (35), ಶಿವರಾತ್ರಿ ವೆಂಕಣ್ಣ (40), ಪ್ರಕಾಶ್ ಬಾಬು (60) ಬಂಧಿತ ಆರೋಪಿಗಳಾಗಿದ್ದು ಎರಡು ಲಾಡ್ಜ್ ಗಳಲ್ಲಿ ಇದ್ದುಕೊಂಡು ಅಮಾಯಕರನ್ನು ಮರುಳು ಮಾಡಿ ಹಣ ದೋಚುತ್ತಿದ್ದರು.

500 ರೂಪಾಯಿಗೆ 1000 ರೂ. ಕೊಡುತ್ತೇವೆ ಎಂದು ನಂಬಿಸುತ್ತಿದ್ದ ತಂಡ, ನೋಟಿನ ಆಕಾರದ ಕಪ್ಪು ಬಣ್ಣದ ಪೇಪರ್ ಮೇಲೆ 500, 2000 ಮೌಲ್ಯದ ನೋಟು ಇಟ್ಟು ನಕಲಿ ಪ್ರಿಂಟ್ ಹೊಡೆಯುತ್ತಿದ್ದರು. ಅದೇ ಮಾದರಿಯ ನಕಲಿ ನೋಟುಗಳನ್ನು ಜನರಿಗೆ ನೀಡುತ್ತಿದ್ದರು. ಖದೀಮರು ಕಪ್ಪು ಹಣ ಡಬ್ಲಿಂಗ್ ಮಾಡಿಕೊಡಲು 15% ಕಮಿಷನ್ ಕೂಡ ಪಡೆಯುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
2000 ರೂ. ಮೌಲ್ಯದ ಪಿಂಕ್ ನೋಟು ಕೊಡುವುದಾಗಿಯೂ ಜನರನ್ನು ನಂಬಿಸುತ್ತಿದ್ದರು. ಒಂದು ನೋಟಿಗೆ ಎರಡು ನೋಟ್ ಪಡೆಯುವ ಆಮಿಷಕ್ಕೆ ಬಲಿಯಾದ ಅದೆಷ್ಟೋ ಮಂದಿ ಈ ಜಾಲದಲ್ಲಿ ಹಣ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಪಿಂಕ್ ಮತ್ತು ಗ್ರೀನ್ ಎಂಬ ಕೋಡ್ ವರ್ಡ್ ಇಟ್ಟುಕೊಂಡು ಮನಿ ಡಬ್ಲಿಂಗ್ ಜಾಲ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ, ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಸ್ಥಳೀಯ ಮಹಿಳೆಯರು, ವೃದ್ಧರನ್ನೂ ತೊಡಗಿಸಿಕೊಂಡು ಹೈದರಾಬಾದ್ ಮೂಲದ ತಂಡ ಈ ಜಾಲ ನಿರ್ವಹಣೆ ಮಾಡುತ್ತಿತ್ತು.
Ten persons have been arrested in Money Doubling case by Bangalore City police. It is said this gang were cheating the innocents in the name of money doubling.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm