ಬ್ರೇಕಿಂಗ್ ನ್ಯೂಸ್
17-01-22 11:12 pm Mangalore Pillar Woman found dead in well, Family involvement suspected of Murder ಕರಾವಳಿ
ಉಳ್ಳಾಲ, ಜ.17: ಸೋಮೇಶ್ವರ ಗ್ರಾಮದ ಪಿಲಾರು ಶಾಲೆಯ ಬಳಿ 85 ರ ವೃದ್ಧೆಯೋರ್ವರು ಬಾವಿಗೆ ಬಿದ್ದು ಇಂದು ಮಧ್ಯಾಹ್ನ ಅಸಹಜ ಸಾವನ್ನಪ್ಪಿದ್ದು , ಕುಟುಂಬಸ್ಥರು ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೇ ಆಕಸ್ಮಿಕ ಸಾವೆಂದು ಬಿಂಬಿಸಲು ಹೊರಟಿದ್ದಾರೆ.
ಪಿಲಾರು ಸರಕಾರಿ ಶಾಲಾ ಬಳಿಯ ದಿ.ಮಂಜಪ್ಪ ಮೂಲ್ಯ ಅವರ ಪತ್ನಿ ಕಲ್ಯಾಣಿ(85) ಬಾವಿಗೆ ಬಿದ್ದು ಮೃತಪಟ್ಟ ವೃದ್ಧೆ. ಪತಿ ಮಂಜಪ್ಪ ಅವರು 23 ವರ್ಷಗಳ ಹಿಂದೆ ಮೃತಪಟ್ಟಿದ್ದು ಕಲ್ಯಾಣಿ ಅವರು ತನ್ನ ಹಿರಿಯ ಮಗ ಉಮೇಶ್ ಅವರೊಂದಿಗೆ ಪಿಲಾರಿನ ಮನೆಯಲ್ಲಿ ವಾಸವಿದ್ದರು.


ಒಂದು ತಿಂಗಳ ಹಿಂದೆ ಕಲ್ಯಾಣಿ ಅವರು ತನ್ನ ಎರಡನೇ ಮಗ ಶಿಫಾಲಿ ಟ್ರಾವೆಲ್ಸ್ ಬಸ್ಸು ಮಾಲಕ ರಾಮಚಂದ್ರ ಅವರ ಮಂಗಳೂರಿನ ಮನೆಗೆ ನೆಲೆಸಲು ತೆರಳಿದ್ದರು. ಇಂದು ಮಧ್ಯಾಹ್ನ ಅಚಾನಕ್ಕಾಗಿ ರಾಮಚಂದ್ರ ಅವರು ತಾಯಿ ಕಲ್ಯಾಣಿ ಅವರನ್ನ ಪಿಲಾರಿನ ಮನೆಗೆ ತಂದು ಬಿಟ್ಟಿದ್ದರು. ಆನಂತರ ಕೆಲ ಹೊತ್ತಿನಲ್ಲಿ ಘಟನೆ ನಡೆದಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬಾವಿಯಲ್ಲಿದ್ದ ಮೃತದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕಲ್ಯಾಣಿ ಅವರು ಬಾವಿಗೆ ಹೇಗೆ ಬಿದ್ದರೆಂದು ನೋಡಿದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲ. ಅವರು ಬಿದ್ದು ಮೃತಪಟ್ಟ ಬಾವಿ ಆವರಣವೂ ಆಯತಪ್ಪಿ ಬೀಳದಷ್ಟು ರಕ್ಷಣಾತ್ಮಕ ಸ್ಥಿತಿಯಲ್ಲಿದೆ. ಮೃತರ ಮರಣೋತ್ತರ ಪರೀಕ್ಷೆ ವರದಿ ಬರುವ ಮೊದಲೇ ಕುಟುಂಬಸ್ಥರು ಕಲ್ಯಾಣಿ ಅವರು ನರರೋಗದಿಂದ ಬಳಲುತ್ತಿದ್ದು ದೇಹ ವಾಲಿ ಬಾವಿಗೆ ಬಿದ್ದು ಸತ್ತಿರುವುದಾಗಿ ಬಿಂಬಿಸಲು ಹೊರಟಿದ್ದಾರೆ. ದೇಹವಾಲಿ ಬಾವಿಗೆ ಬಿದ್ದಿದ್ದರೆ ಅವರ ದೇಹ ಛಿದ್ರವಾಗುವ ಸಾಧ್ಯತೆ ಇರುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
Mangalore Pillar old Woman found dead in well, Family involvement suspected of Murder
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm