ಬ್ರೇಕಿಂಗ್ ನ್ಯೂಸ್
17-05-21 11:10 am Mangalore Correspondent ಕರಾವಳಿ
ಮಂಗಳೂರು, ಮೇ 17: ಪಡುಬಿದ್ರಿ ಬಳಿಯ ಸಮುದ್ರದಲ್ಲಿ ಸಿಕ್ಕಿಬಿದ್ದಿರುವ ಎಂಆರ್ ಪಿಎಲ್ ಗುತ್ತಿಗೆ ಕೆಲಸ ಮಾಡುವ ಟಗ್ ಬೋಟಿನ ಕಾರ್ಮಿಕರ ರಕ್ಷಣೆಗೆ ಕೊಚ್ಚಿಯಿಂದ ಹೆಲಿಕಾಪ್ಟರ್ ಬಂದಿದ್ದು ಎಲ್ಲ ಒಂಬತ್ತು ಮಂದಿಯನ್ನೂ ರಕ್ಷಿಸಲಾಗಿದೆ.
ಇಂದು ಬೆಳಗ್ಗೆ ಏಳು ಗಂಟೆಗೆ ಕೊಚ್ಚಿಯಿಂದ ಮಂಗಳೂರಿಗೆ ಬಂದ ನೌಕಾಪಡೆಯ ಹೆಲಿಕಾಪ್ಟರ್, ಎಂಟು ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಪಡುಬಿದ್ರಿ ಬಳಿಯಿಂದ ಐದು ಮೈಲ್ ದೂರವಿರುವ ಸಮುದ್ರ ಮಧ್ಯೆ ಟಗ್ ಸಿಕ್ಕಿಹಾಕಿಕೊಂಡಿದ್ದು ಅದನ್ನು ರಕ್ಷಣೆ ಮಾಡುವುದು ಕೋಸ್ಟ್ ಗಾರ್ಡ್ ಪಡೆಗೆ ಸವಾಲಾಗಿತ್ತು. ಹೀಗಾಗಿ ದ.ಕ. ಜಿಲ್ಲಾಧಿಕಾರಿ ನಿನ್ನೆ ಸಂಜೆಯೇ ರಾಜ್ಯದ ಸಿಎಂ ಕಚೇರಿಯಿಂದ ಅನುಮತಿ ಪಡೆದು ನೌಕಾಪಡೆಯ ನೆರವು ಕೋರಿದ್ದರು. ಸಮುದ್ರ ತುಂಬ ರಫ್ ಇದ್ದುದರಿಂದ ಮತ್ತು ಗಾಳಿ ವೇಗವಾಗಿ ಬೀಸುತ್ತಿರುವುದರಿಂದ ರಕ್ಷಣೆಗೆ ಹೆಲಿಕಾಪ್ಟರ್ ತರಿಸಲು ಕೇಳಿಕೊಂಡಿದ್ದರು. ಗೋವಾದಿಂದ ಹೆಲಿಕಾಪ್ಟರ್ ತರಿಸುವ ಯೋಚನೆ ಮಾಡಲಾಗಿತ್ತಾದರೂ, ನಿನ್ನೆ ಸಂಜೆಯಿಂದ ಗೋವಾ ಭಾಗದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಿದ್ದರಿಂದ ಕೊಚ್ಚಿ ವಿಭಾಗದಿಂದ ನೆರವು ಕೇಳಲಾಗಿತ್ತು.




ಇಂದು ಬೆಳಗ್ಗೆ ಕೊಚ್ಚಿಯಿಂದ ಆಗಮಿಸಿದ ಹೆಲಿಕಾಪ್ಟರ್, ಮಂಗಳೂರು ಏರ್ಪೋರ್ಟ್ ಗೆ ಬಂದು ಕಾರ್ಯಾಚರಣೆ ಆರಂಭಿಸಿದೆ. ಬೆಳಗ್ಗೆ 10.30 ರ ವೇಳೆಗೆ ಎಲ್ಲ ಒಂಬತ್ತು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಕಾಪ್ಟರ್ ನಲ್ಲಿ ಒಬ್ಬೊಬ್ಬರನ್ನೇ ಮೇಲಕ್ಕೆ ತಂದು ಬಳಿಕ ಅಲ್ಲಿಯೇ ಸನಿಹ ಇದ್ದ ಕೋಸ್ಟ್ ಗಾರ್ಡ್ ಪಡೆಯ ಹಡಗಿನಲ್ಲಿ ಇಳಿಸಲಾಗಿತ್ತು. ಇಂದು ಬೆಳಗ್ಗಿನ ಹೊತ್ತಿಗೆ ಸಮುದ್ರ ಬಿರುಸು ಕಳಕೊಂಡಿದ್ದರಿಂದ ಕೋಸ್ಟ್ ಗಾರ್ಡ್ ಸಿಬಂದಿಯೂ ಸ್ಪೀಡ್ ಬೋಟ್ ನಲ್ಲಿ ರಕ್ಷಣೆಗೆ ಇಳಿದಿದ್ದರು.




ಕೋಸ್ಟ್ ಗಾರ್ಡ್ ಹಡಗು ಕಳೆದ ಎರಡು ದಿನಗಳಿಂದ ಟಗ್ ನಲ್ಲಿರುವ ಒಂಬತ್ತು ಕಾರ್ಮಿಕರ ಬಗ್ಗೆ ನಿಗಾ ಇಟ್ಟಿತ್ತು. ಎಂಆರ್ ಪಿಎಲ್ ನಲ್ಲಿ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ಟಗ್ ಕಾರ್ಮಿಕರು ಮೊನ್ನೆ ಶನಿವಾರ ದಡಕ್ಕೆ ಬರುವ ಯೋಚನೆ ಮಾಡಿದ್ದರು. ಆದರೆ, ಅಷ್ಟರಲ್ಲಿ ಚಂಡಮಾರುತ ಪ್ರಭಾವಕ್ಕೆ ಸಿಲುಕಿ ಸಮುದ್ರದಲ್ಲಿ ಅಪಾಯಕ್ಕೀಡಾಗಿದ್ದರು. ಗಾಳಿಯ ರಭಸಕ್ಕೆ ಜನರೇಟರ್ ಕೈಕೊಟ್ಟಿದ್ದರಿಂದ ಇಂಜಿನ್ ಚಾಲೂ ಆಗದೆ, ಗಾಳಿ ಬಂದ ಕಡೆಗೆ ತೇಲುತ್ತಾ ಹೋಗುವಂತಾಗಿತ್ತು.
ಎನ್ಎಂಪಿಟಿ ಬಂದರು ವ್ಯಾಪ್ತಿಗೆ ಬರುವ ಈ ಟಗ್, ಚಂಡಮಾರುತದ ಎಚ್ಚರಿಕೆ ಇದ್ದರೂ ಸಮುದ್ರದಲ್ಲಿ ಯಾಕೆ ಉಳಿದುಕೊಂಡಿತ್ತು. ಇದಕ್ಕೆ ಎಂಆರ್ ಪಿಎಲ್ ಮತ್ತು ಎನ್ಎಂಪಿಟಿ ಬಂದರು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎರಡೂ ಸಂಸ್ಥೆಗಳಿಂದ ಪ್ರತ್ಯೇಕ ವರದಿ ನೀಡುವಂತೆ ಕೇಳಿದ್ದಾರೆ.
MRPL Tugboat with Nine persons that were stranded through cyclone Tauktae has been rescued by Mangalore Coast Gaurd through the help of Cochi Helicopter. All the nine are said to be safe.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 09:08 pm
HK News Desk
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm