ಬ್ರೇಕಿಂಗ್ ನ್ಯೂಸ್
26-08-20 10:46 am Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 26: ಕೊರೊನಾ ಲಾಕ್ಡೌನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಕಾರ್ಮಿಕರಿಗೂ ರಾಜಯೋಗ ತಂದಿಟ್ಟಿದೆ. ಲಾಕ್ ಡೌನ್ ಬಳಿಕ ತಮ್ಮೂರಿಗೆ ತೆರಳಿದ್ದ ಉತ್ತರ ಭಾರತ ಮೂಲದ ಮರಳು ಕಾರ್ಮಿಕರನ್ನು ಮಂಗಳೂರಿನ ಹೊಯ್ಗೆ ಮಾಫಿಯಾ ವಿಮಾನದಲ್ಲಿ ತರಿಸಿಕೊಂಡಿದೆ ಎನ್ನುವ ಸುದ್ದಿ ಬಂದಿದೆ.
ಲಾಕ್ಡೌನ್ ಬಳಿಕ ಬದುಕಿದರೆ ಬೇಡಿ ತಿಂದೇನು ಎಂದು ತಮ್ಮೂರಿಗೆ ಓಡಿಹೋಗಿದ್ದ ಕಾರ್ಮಿಕರು ಈಗ ಮತ್ತೆ ನಗರಕ್ಕೆ ಕಾಲಿಡತೊಡಗಿದ್ದಾರೆ. ಆದರೆ, ಉತ್ತರ ಭಾರತ ಮೂಲದ ಮರಳು ಕಾರ್ಮಿಕರು ಆಗಮಿಸಲು ರೈಲು ಸಂಚಾರ ಇಲ್ಲದೆ ಕಷ್ಟವಾಗಿದೆ. ಹೀಗಾಗಿ ಮಂಗಳೂರಿನ ಹೊಯ್ಗೆ ಮಾಲಕರು ಸೇರಿ ನೂರಕ್ಕೂ ಹೆಚ್ಚು ಕಾರ್ಮಿಕರನ್ನು ತುರ್ತಾಗಿ ಫ್ಲೈಟಿನಲ್ಲಿ ಕರೆತಂದಿದ್ದಾರೆ ಎನ್ನಲಾಗುತ್ತಿದೆ.

ಎರಡು ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾರ್ಮಿಕರನ್ನು ನೋಡಿದ ಅಲ್ಲಿನ ಸಿಬಂದಿಗೇ ಅಚ್ಚರಿಯಾಗಿತ್ತು. ಸಾಧಾರಣ ಮಧ್ಯಮ ವರ್ಗದವರೇ ವಿಮಾನ ಹತ್ತಲು ಅಸಾಧ್ಯ ಎನ್ನುವಂತಿದ್ದರೆ, ಮರಳು ಕಾರ್ಮಿಕರು ಜೀವನದಲ್ಲಿ ಎಂದೂ ಸಿಗದ ಭಾಗ್ಯವನ್ನು ತಮ್ಮ ಮಾಲಕರ ಮೂಲಕ ಅನುಭವಿಸಿದ್ದಾರೆ ಎಂದು ಅಲ್ಲಿನ ಸಿಬಂದಿ ಹೇಳುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಮೂಲದ ಕಾರ್ಮಿಕರು ಹೆಚ್ಚಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮರಳನ್ನು ತೆಗೆಯುತ್ತಾರೆ. ಜಿಲ್ಲಾಡಳಿತದಿಂದ ಮರಳು ತೆಗೆಯಲು ಅನುಮತಿ ಸಿಕ್ಕಿರದಿದ್ದರೂ, ದಂಧೆಕೋರರು ಈಗಲೇ ಮರಳು ಎತ್ತುವ ಕಾರ್ಯ ಆರಂಭಿಸಿದ್ದಾರೆ.

ಮಂಗಳೂರಿನ ಅಡ್ಯಾರ್, ಕಣ್ಣೂರಿನಲ್ಲಿ ಮರಳು ಎತ್ತುವ ಕಾರ್ಯ ಸರಾಗವಾಗಿ ನಡೆದಿದೆ. ಫಲ್ಗುಣಿ ನದಿಯಿಂದಲೂ ಅಲ್ಲಲ್ಲಿ ಮರಳು ತೆಗೆಯಲು ದಂಧೆಕೋರರು ಕೆಲಸ ಆರಂಭಿಸಿದ್ದಾರೆಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಆದರೆ ತುರ್ತಾಗಿ ಮರಳು ತೆಗೆಯಬೇಕಿದ್ದರೆ ಇಲ್ಲಿನ ಕಾರ್ಮಿಕರಿಂದ ಸಾಧ್ಯವಾಗಲ್ಲ. ನದಿಯಲ್ಲಿ ನೀರು ಹೆಚ್ಚಿರುವಾಗ ಮರಳು ತೆಗೆಯುವುದು ಅಪಾಯ ಆಗಿರುವುದರಿಂದ ಸ್ಥಳೀಯ ಕಾರ್ಮಿಕರು ಈ ಕೆಲಸಕ್ಕೆ ಬರಲ್ಲ. ಅದಕ್ಕಾಗಿ ಈ ಹಿಂದೆ ಇಲ್ಲಿ ಮರಳೆತ್ತುವ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಕಾರ್ಮಿಕರನ್ನು ಮಾಲಕರು ಮತ್ತೆ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮರಳು ಉದ್ಯಮ ನಡೆಸುವ ಒಬ್ಬರಲ್ಲಿ ಕೇಳಿದರೆ, ಹೌದಾ.. ನಂಗೊತ್ತಿಲ್ಲ ಮಾರ್ರೇ.. ಎಂದು ಮೂಗು ಮುರಿಯುತ್ತಾರೆ !
06-08-26 03:49 pm
HK News Staffer
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ, ಛಲವಾದಿ...
04-08-26 09:12 pm
ಸಿದ್ದರಾಮಯ್ಯ ಆಪ್ತ ಎಂಬ ಕಾರಣಕ್ಕೆ ನನಗೆ ಅನ್ಯಾಯ ಆಗಿ...
04-08-26 09:10 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
06-08-26 11:03 pm
Mangaluru Staffer
ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ...
06-08-26 10:22 pm
ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ...
06-08-26 09:33 pm
ಹೆದ್ದಾರಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಗಿಳ...
06-08-26 08:09 pm
ಸುರತ್ಕಲ್ ಎನ್ಐಟಿಕೆ ಕಾಲೇಜು ಹಾಸ್ಟೆಲ್ನಲ್ಲಿ ಸ್ವಯ...
05-08-26 08:08 pm
07-08-26 12:35 pm
HK News Staffer
ಲವ್ - ಸೆಕ್ಸ್..ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸ...
06-08-26 09:31 pm
ಲವ್ - ಸೆಕ್ಸ್ ದೋಖಾ ; ಬಳ್ಳಾರಿಯಲ್ಲಿ ಬೆಚ್ಚಿಬೀಳಿಸಿ...
06-08-26 09:31 pm
ಬೆಂಗಳೂರು ; ಒಂದು ತಿಂಗಳ ಹಿಂದೆ ನೇಪಾಳದಿಂದ ಕೆಲಸಕ್ಕ...
06-08-26 06:13 pm
7 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ...
06-08-26 11:48 am