ಬ್ರೇಕಿಂಗ್ ನ್ಯೂಸ್
22-08-20 05:14 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 22: ಕರಾವಳಿಯಲ್ಲಿ ಕೊರೊನಾ ಸಂಕಷ್ಟದ ನಡುವೆ ಗಣೇಶನ ಪೂಜೆ ನಡೆದಿದೆ. ಆದರೆ, ಕರಾವಳಿ ಜನ ಗಣೇಶನ ಆರಾಧನೆಯಲ್ಲಿ ತೊಡಗಿದ್ದರೆ ಇತ್ತ ಹಸಿರ ಸಿರಿಯ ಪ್ರಕೃತಿಯೇ ಗಣಪನ ರೂಪದಲ್ಲಿ ಕಂಡುಬಂದಿದ್ದಾಳೆ.
ಹೌದು.. ಮಂಗಳೂರು ನಗರ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಪರೂಪದ ದೃಶ್ಯ ಕಂಡುಬಂದಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ಈಚಲು ಮರಕ್ಕೆ ಸುತ್ತಿಕೊಂಡ ಗಿಡ, ಬಳ್ಳಿಗಳೆಲ್ಲ ಸೇರಿ ಗಣೇಶನ ಆಕೃತಿ ಪಡೆದಿದ್ದು ರಮಣೀಯ ನಿಸರ್ಗ ಸಿರಿ ಭಕ್ತಜನರನ್ನು ಮಂತ್ರಮುಗ್ಧಗೊಳಿಸಿದೆ. ಕೆತ್ತಿಕಲ್ ತಿರುವಿನಿಂದ ಅಮೃತೇಶ್ವರಿ ದೇವಸ್ಥಾನಕ್ಕೆ ತಿರುಗುವ ರಸ್ತೆಯಲ್ಲಿ ಸಾಗುತ್ತಿದ್ದಂತೆ ಈ ಗಣೇಶ ರೂಪ ಕಂಡುಬರುತ್ತಿದ್ದು ಇದನ್ನು ವಿಶಾಲ್ ವಾಮಂಜೂರು ಎನ್ನುವ ಫೋಟೋಗ್ರಾಫರ್ ಸೆರೆ ಹಿಡಿದು ಆ ಫೋಟೊವನ್ನು ಹಂಚಿಕೊಂಡಿದ್ದಾರೆ.

ಕಾಕತಾಳೀಯ ಎಂಬಂತೆ, ಗಣೇಶನ ಹಬ್ಬದ ದಿವಸವೇ ಇಂಥ ನಿಸರ್ಗ ಸಿರಿ ಕಂಡುಬಂದಿದ್ದು ಆ ಚಿತ್ರಣದ ಫೋಟೊ ಈಗ ವೈರಲ್ ಆಗಿದೆ. ಈಚಲು ಮರಕ್ಕೆ ಪೊದೆಗಳು ಬೆಳೆದು ನಿಂತಿರುವುದು ಅತ್ತ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಗಣಪತಿಯ ಸೊಂಡಿಲಿನ ರೂಪ ಮನಸ್ಸಿಗೆ ಬರುತ್ತದೆ. ಇದನ್ನೇ ಫೋಟೋಗ್ರಾಫರ್ ತನ್ನ ಕಣ್ಣಿಗೆ ನಿಲುಕಿದಂತೆ ಕ್ಕಿಕ್ಕಿಸಿದ್ದು ಫೋಟೊ ವೈರಲ್ ಆಗುತ್ತಿದ್ದಂತೆ ಜನರು ಸ್ಥಳಕ್ಕೆ ಆಗಮಿಸ ತೊಡಗಿದ್ದಾರೆ. ನಿಸರ್ಗದಲ್ಲಿ ಅರಳಿದ ಗಣಪನನ್ನ ಕಂಡು ಜನರು ಭಕ್ತಿಯಿಂದ ನಮಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳಲ್ಲಿ ಫೋಟೊ ತೆಗೆದು ಕಣ್ಣು ತುಂಬಿಸಿಕೊಳ್ಳುತ್ತಿದ್ದಾರೆ. ಗಣೇಶೋತ್ಸವ ಸಡಗರದ ನಡುವಲ್ಲೇ ಹಸಿರ ಸಿರಿಯ ಮಧ್ಯೆ ಗಣೇಶನ ರೂಪ ಕಂಡಿರುವುದು, ಭಕ್ತ ಜನರ ಕುತೂಹಲಕ್ಕೆ ಕಾರಣವಾಗಿದೆ.
Photo Courtesy : Vishal Vamanjoor
Video:
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm