ಬ್ರೇಕಿಂಗ್ ನ್ಯೂಸ್
31-03-21 05:57 pm Mangalore Correspondent ಕರಾವಳಿ
ಮಂಗಳೂರು, ಮಾ.31: ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಎಷ್ಟು ಪರಿಣಾಮಕಾರಿ ನಡೆದಿದೆ ಎಂದರೆ, ಆಗನಗರದಲ್ಲಿ ಒಂದು ಸುತ್ತು ಹೊಡೆದರಷ್ಟಕ್ಕೇ ಸುಸ್ತುಬೇಕು. ಒಂದೇ ಮಳೆಗೆ ಮೊನ್ನೆ ರಥಬೀದಿಯ ಕಾಂಕ್ರೀಟ್ ರಸ್ತೆಯಲ್ಲಿ ರಾಡಿ ಎದ್ದಿತ್ತು. ಇಂದು ಸ್ಟೇಟ್ ಬ್ಯಾಂಕ್ ಬಳಿಯ ರಾವ್ ಎಂಡ್ ರಾವ್ ಸರ್ಕಲ್ ಬಳಿ ವಿಆರ್ ಎಲ್ ಲಾಜಿಸ್ಟಿಕ್ ಟೆಂಪೋವೊಂದು ರಸ್ತೆ ಮಧ್ಯದಲ್ಲಿ ಉಳಿದುಕೊಂಡಿದ್ದ ಗುಂಡಿಗೆ ಬಿದ್ದು ಒದ್ದಾಡಿದ ಘಟನೆ ನಡೆದಿದೆ.
ರಾವ್ ಎಂಡ್ ರಾವ್ ಸರ್ಕಲ್ ಬಳಿಯ ನಾಲ್ಕೂ ಸುತ್ತದ ರಸ್ತೆಗಳಲ್ಲಿ ಸರಕು ವಾಹನಗಳು, ಬಾಡಿಗೆ ನಡೆಸುವ ಟೆಂಪೋಗಳು, ಸರಕು ಸಾಗಿಸುವ ಆಟೋ ರಿಕ್ಷಾಗಳು ಗಿರಗಿಟ್ಲೆ ತಿರುಗುತ್ತಿರುತ್ತವೆ. ದಿನವಿಡೀ ಅತಿ ಹೆಚ್ಚು ವಾಹನಗಳು ರಾಶಿ ಬೀಳುವ ಇಂಥ ಸರ್ಕಲ್ ಬಳಿಯೇ ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದಿತ್ತು. ಅಲ್ಲಿಗೆ ಬಂದಿದ್ದ ವಿಆರ್ ಎಲ್ ಲಾಜಿಸ್ಟಿಕ್ ಸಂಸ್ಥೆಯ ಟೆಂಪೋ ಒಂದರ ಹಿಂಬದಿಯ ಒಂದು ಭಾಗದ ಟೈರ್ ಕಾಂಕ್ರೀಟ್ ರಸ್ತೆಯ ಮಧ್ಯದ ಹೊಂಡದಲ್ಲಿ ಹೂತು ಹೋಗಿದೆ.
ಟೆಂಪೋವನ್ನು ಎಬ್ಬಿಸಲು ಅಲ್ಲಿದ್ದವರು ಹರಸಾಹಸ ಪಟ್ಟಿದ್ದಾರೆ. ಹಿಂದಿನಿಂದ ದೂಡುವ ಪ್ರಯತ್ನ ಮಾಡಿ, ಟೆಂಪೋವನ್ನು ಮುಂದಕ್ಕೆ ಒಯ್ಯುವ ಯತ್ನ ಮಾಡಿದ್ದಾರೆ. ಆದರೆ, ಸರಕು ತುಂಬಿದ್ದ ಟೆಂಪೋವನ್ನು ಹೊಂಡದಿಂದ ಟೈರ್ ಎಬ್ಬಿಸಿ ಮುಂದಕ್ಕೆ ಒಯ್ಯಲು ಸಾಧ್ಯವಾಗಲಿಲ್ಲ. ಬೆಳಗ್ಗಿನಿಂದ ಸಂಜೆಯ ವರೆಗೂ ಟೆಂಪೋ ಅಲ್ಲಿಯೇ ಬ್ಲಾಕ್ ಆಗಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯ ಭಯಾನಕ ಚಿತ್ರಣಕ್ಕೆ ಅಲ್ಲಿನ ಅವಾಂತರವೇ ಸಾಕ್ಷಿಯಾಗಿತ್ತು.
ಟೆಂಪೋ ರಸ್ತೆ ಮಧ್ಯದ ಹೊಂಡದಲ್ಲಿ ಹೊರಳಾಡುವ ವಿಡಿಯೋವನ್ನು ಸಾರ್ವಜನಿಕರು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ಕನ್ನಡಿ ಎನ್ನುವ ರೀತಿ ಟೀಕಿಸಿದ್ದಾರೆ. ಹೊಂಡ ಸಣ್ಣದೇ ಆಗಿದ್ದರೂ, ಮಳೆಯಿಂದಾಗಿ ಗುಂಡಿಯಲ್ಲಿ ಚಕ್ರ ಹೂತು ಹೋಗಿದ್ದರಿಂದ ಟೆಂಪೋ ಎಬ್ಬಿಸಲು ಕಷ್ಟವಾಗಿತ್ತು.
Video:
Poor quality cement road work vrl carrier tempo stuck in a pothole at a state bank in Mangalore. The video of this has gone viral on social media where people mock the city corporations least work.
25-06-25 02:56 pm
Bangalore Correspondent
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
25-06-25 11:10 am
HK News Desk
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
25-06-25 04:06 pm
HK News Desk
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am