ಬ್ರೇಕಿಂಗ್ ನ್ಯೂಸ್
21-08-20 04:15 pm Mangalore Reporter ಕರಾವಳಿ
ಮಂಜೇಶ್ವರ, ಆಗಸ್ಟ್ 21: ಕಡಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದು ತಾಯಿ ಮತ್ತು ಮಗು ಮೃತಪಟ್ಟ ಘಟನೆ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಬೋಳಂತಕೋಡಿಯಲ್ಲಿ ನಡೆದಿದೆ.
ಮಳೆ, ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಮನೆಯ ಹಿಂಭಾಗದಲ್ಲಿ ಬಿದ್ದಿತ್ತು. ಇದನ್ನು ಗಮನಿಸದೆ 5 ವರ್ಷದ ಮಗು ಆಶ್ರಯ್ ಆ ದಾರಿಯಲ್ಲಿ ಸಾಗಿದ್ದ. ತಂತಿ ತುಳಿಯುತ್ತಿದ್ದಂತೆ ವಿದ್ಯುತ್ ಶಾಕ್ ಹೊಡೆದಿದ್ದು ಮನೆ ಒಳಗಿದ್ದ ತಾಯಿ ವಿಜಯಾ(35) ಹೊರಗೆ ಓಡಿ ಬಂದು ಮಗುವನ್ನು ಎತ್ತಲು ಮುಂದಾಗಿದ್ದಾರೆ. ಆದರೆ, ಮಗು ಮತ್ತು ತಾಯಿ ಇಬ್ಬರೂ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿದ್ದಾರೆ.

ಹಿರಿಯ ಮಗಳು ಸಾನಿಕ ಕೂಡ ಅದೇ ದಾರಿಯಿಂದ ಓಡಿಕೊಂಡು ಹೋಗಿದ್ದಳು. ಆದರೆ ಸಾನಿಕ ಅದೃಷ್ಟದಿಂದ ತಂತಿಯನ್ನು ತುಳಿಯದೆ ಮುಂದಕ್ಕೆ ಹೋಗಿದ್ದಾಳೆ. ಹಿಂದಿನಿಂದ ಓಡಿಬಂದ ತಮ್ಮ ತಂತಿಯನ್ನು ತುಳಿದು ದುರಂತಕ್ಕೆ ಈಡಾಗಿದ್ದಾನೆ. ಆಟೋ ಚಾಲಕ ವಿಶ್ವನಾಥ ಎಂಬವರ ಮಕ್ಕಳಾಗಿದ್ದು ಇಬ್ಬರೂ ಕಳಿಯೂರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದರು. ಹಿರಿಯ ಮಗಳು ನಾಲ್ಕನೇ ತರಗತಿ ಆಗಿದ್ದರೆ, ಆಶ್ರಯ್ ಎಲ್ ಕೆಜಿ ಕಲಿಯುತ್ತಿದ್ದ. ಲಾಕ್ ಡೌನ್ ಕಾರಣ ಶಾಲೆ ಇಲ್ಲದೆ ಮನೆಯಲ್ಲಿ ಆಟದಲ್ಲಿ ತೊಡಗಿದ್ದರು.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 10:47 pm
Mangalore Correspondent
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm