ಬ್ರೇಕಿಂಗ್ ನ್ಯೂಸ್
15-03-21 06:11 pm Mangalore Correspondent ಕರಾವಳಿ
ಉಳ್ಳಾಲ, ಮಾ.15: ಕಳೆದೊಂದು ವಾರ ಜವರಾಯ ಉಳ್ಳಾಲದ ಕುಂಪಲದಲ್ಲಿ ಕಂಬಳಿ ಹೊದ್ದು ಮಲಗಿದ್ದನೋ ಏನೋ.. ಯಾಕಂದ್ರೆ, ಒಂದೇ ವಾರದಲ್ಲಿ ಕುಂಪಲ ಪ್ರದೇಶದಲ್ಲಿ ಸರಣಿಯಂತೆ ಮೂವರು ಅಕಾಲಿಕವಾಗಿ ಸಾವು ಕಂಡಿದ್ದಾರೆ. ಕಳೆದ ಸೋಮವಾರದಿಂದ ಶುಕ್ರವಾರದ ನಡುವೆ ಕುಂಪಲದಲ್ಲಿ ಮೂವರು ಅಕಾಲಿಕ ಸಾವನ್ನಪ್ಪಿದ್ದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಮಾ.10ರ ಬುಧವಾರ ಆಶ್ರಯ ಕಾಲನಿ ನಿವಾಸಿ ಯುವತಿ ರೂಪದರ್ಶಿ ಪ್ರೇಕ್ಷಾ(17) ಅಸಹಜ ಆತ್ಮಹತ್ಯೆ ಪ್ರಕರಣ ಬಹಳಷ್ಟು ಸುದ್ದಿಯಾಗಿತ್ತು. ಪ್ರಕರಣದಲ್ಲಿ ಪ್ರೇಕ್ಷಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಆಕೆಯ ಗೆಳೆಯ ಮುಂಡೋಳಿ ನಿವಾಸಿ ಯತಿನ್ ರಾಜ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಯತಿನ್ ರಾಜ್ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರೂ ಪ್ರೇಕ್ಷಾ ಸಾವಿನ ಬಗ್ಗೆ ಇರುವ ನಿಗೂಢತೆ ಇನ್ನೂ ಹಾಗೆಯೇ ಉಳಿದಿದೆ. ಅಲ್ಲದೆ ಯುವತಿಯ ಸಾವಿಗೆ ಸ್ಥಳೀಯವಾಗಿ ಬೇರೂರಿರುವ ಗಾಂಜಾ ಮಾಫಿಯಾವೇ ಕಾರಣವೆಂದು ಗಾಂಜಾ ವ್ಯಸನಿಗಳ ವಿರುದ್ದ ಕುಂಪಲ ನಿವಾಸಿಗಳು ಅಭಿಯಾನ ಆರಂಭಿಸಿದ್ದಾರೆ.
ಪ್ರೇಕ್ಷಾ ಸಾವಿಗೂ ಎರಡು ದಿನದ ಹಿಂದೆ ಅಂದರೆ, ಮಾ.8ರ ಸೋಮವಾರ ರಾತ್ರಿ ಕುಂಪಲ ಬಾರ್ದೆ ನಿವಾಸಿ ನವ ವಿವಾಹಿತ ಲವಿತ್ ಕುಮಾರ್(34) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಭವಿಷ್ಯದ ಕನಸುಗಳನ್ನು ಹೊತ್ತು ಕಳೆದ ಜನವರಿ ಅಂತ್ಯದಲ್ಲಿ ಹಸೆಮಣೆ ಏರಿದ್ದ ಲವಿತ್ ಅಕಾಲಿಕವಾಗಿ ಸಾವನ್ನಪ್ಪಿದ್ದು ಈ ಭಾಗದ ಜನರನ್ನು ಶೋಕದಲ್ಲಿ ಮುಳುಗಿಸಿತ್ತು. ನಂತರ ಎರಡೇ ದಿನದಲ್ಲಿ ಪ್ರೇಕ್ಷಾ ಅಸಹಜ ಸಾವನ್ನಪ್ಪಿದ್ದಳು.
ತಂದೆಯಾಗಬೇಕಿದ್ದ ನವವಿವಾಹಿತನ ಸಾವು !
ವಾರಾಂತ್ಯದ ಮಾ.12 ರ ಶುಕ್ರವಾರ ರಾತ್ರಿ ಮತ್ತೊಬ್ಬರು ಅಸಹಜ ಸಾವು ಕಂಡಿದ್ದಾರೆ. ಕುಂಪಲ ಮೂರುಕಟ್ಟೆಯ ಬಾಡಿಗೆ ಮನೆ ನಿವಾಸಿ ಮೂಲತಃ ಕಡಬ ಮರ್ದಾಳ ನಿವಾಸಿ ರಾಧಾಕೃಷ್ಣ (40) ಮನೆಯಲ್ಲಿ ಏಕಾಂಗಿ ಇದ್ದ ಸಂದರ್ಭ ಅಧಿಕ ರಕ್ತದೊತ್ತಡದಿಂದ ಬಳಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಎರಡು ವಾರಗಳ ಹಿಂದಷ್ಟೆ ಪತ್ನಿ ಜಯಂತಿಯನ್ನ ಸೀಮಂತ ಶಾಸ್ತ್ರ ಮುಗಿಸಿ ತವರು ಮನೆಗೆ ಕಳಿಸಿಕೊಟ್ಟಿದ್ದ ರಾಧಾಕೃಷ್ಣ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಕಾಲಿಕ ಸಾವು ಕಂಡಿದ್ದಾರೆ. ಮಧ್ಯರಾತ್ರಿಯಲ್ಲಿ ಬಿಪಿ ಏರಿಳಿತ ಆಗಿದ್ದೇ ಸಾವಿಗೆ ಕಾರಣ ಎನ್ನಲಾಗಿತ್ತು. ಈ ಸಾವು ಕೂಡ ಬೆಳಕಿಗೆ ಬಂದಿದ್ದು ಮರುದಿನವಾಗಿತ್ತು.
ಹೀಗಾಗಿ ಕುಂಪಲ ಪ್ರದೇಶದ ನಿವಾಸಿಗಳಿಗೆ ಕಳೆದ ವಾರವಿಡೀ ಶೋಕದ ದಿನಗಳು. ನೋವು, ವೇದನೆಗಳನ್ನು ಕೊಟ್ಟ ವಾರ. ಇದೇ ವೇದನೆಯ ನಡುವೆ, ಇಲ್ಲಿನ ನಿವಾಸಿಗಳು ಗಾಂಜಾ ವ್ಯಸನಿಗಳ ವಿರುದ್ಧ ಹೋರಾಟವನ್ನೂ ಆರಂಭಿಸಿದ್ದಾರೆ. ಆದರೆ, ಅವರಲ್ಲಿನ ಭೀತಿ ಇನ್ನೂ ತೊಲಗಿಲ್ಲ. ಅಸಹಜ ಸಾವುಗಳೇ ಹಾಗೆ. ಅನಿರೀಕ್ಷಿತ ಆಗಿ ಒದಗುವ ಅಪಘಾತಗಳಂತೆ. ಜೊತೆಗಿದ್ದವರೇ ಇನ್ನಿಲ್ಲವಾಗುತ್ತಾರೆ.. ಕುಂಪಲದ ಜನ ತಮ್ಮ ಒಡನಾಡಿಗಳನ್ನು ಕಳಕೊಂಡಿದ್ದಾರೆ.
Mangalore, Kampala reports three suspicious death in one week. Death of a Model, death of a Man at home and death of a newly married bride groom.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm