ಬ್ರೇಕಿಂಗ್ ನ್ಯೂಸ್
15-03-21 12:16 pm Mangalore Correspondent ಕರಾವಳಿ
ಮುಲ್ಕಿ, ಮಾ.15 : ಇತ್ತೀಚೆಗೆ ಬಳ್ಕುಂಜೆ ಪರಿಸರದಲ್ಲಿ 300 ವರ್ಷ ಹಳೆಯ ದೈವದ ಪರಿಕರಗಳು ಪತ್ತೆಯಾದ ಬೆನ್ನಲ್ಲೇ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಕೊಲಕಾಡಿ ಎಂಬಲ್ಲಿ ಪಾಳುಬಿದ್ದ ದೈವಸ್ಥಾನ ಇದ್ದ ಜಾಗದಲ್ಲಿ 600 ವರ್ಷ ಹಳೆಯದು ಎನ್ನಲಾದ ದೈವದ ಮೂರ್ತಿ, ಮೊಗ ಮತ್ತಿತರ ಪರಿಕರಗಳು ಪತ್ತೆಯಾಗಿವೆ.
ಕಳೆದ ಹಲವಾರು ವರ್ಷಗಳಿಂದ ಪರಿಸರದ ದೈವಸ್ಥಾನ ಪಾಳು ಬಿದ್ದಿದ್ದು , ಪಿಲಿಚಂಡಿ, ನಂದಿಗೋಣ ಹಾಗೂ ಇತರ ದೈವಗಳು ಪಾಳು ಬಿದ್ದ ಜಾಗದಲ್ಲಿ ನೆಲೆಸಿವೆ ಎನ್ನಲಾಗುತ್ತಿದೆ. ಊರಿಗೆ ಬಂದಿರುವ ತೊಂದರೆ, ದುರಿತ ನಿವಾರಿಸಲು ಅಷ್ಟಮಂಗಲ ಪ್ರಶ್ನೆ ಇಟ್ಟಿದ್ದ ವೇಳೆ, ದೈವಸ್ಥಾನದ ಜೀರ್ಣೋದ್ಧಾರ ಆಗಬೇಕೆಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ದೈವದ ಪರಿಕರಗಳು ಪತ್ತೆಯಾಗಿವೆ.
ಈ ಬಗ್ಗೆ ಕೊಲಕಾಡಿ ಕುಂಜಾರುಗಿರಿ ದೇವಳದ ಟ್ರಸ್ಟಿ ಗುಣೇಶ್ ಶೆಟ್ಟಿ ಮಾತನಾಡಿ, ಪತ್ತೆಯಾದ ದೈವದ ಪರಿಕರಗಳಿಗೆ ಹಾಗೂ ಮುಲ್ಕಿ ಸೀಮೆಯ ಇತಿಹಾಸ ಪ್ರಸಿದ್ಧ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನಕ್ಕೂ ಸಂಬಂಧ ಇರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಹಿರಿಯರ ಪ್ರಕಾರ, ಕೆಲವು ವರ್ಷಗಳ ಹಿಂದೆ ಗುಜರಿ ವ್ಯಾಪಾರಿಯೊಬ್ಬರು ಈ ಪರಿಕರಗಳನ್ನು ಸಾಗಿಸಲು ಯತ್ನಿಸಿದ್ದು ಇದ್ದಕ್ಕಿದ್ದಂತೆಯೇ ಪರಿಕರಗಳು ಭಾರವಾಗಿದ್ದು ಒಯ್ಯಲು ಸಾಧ್ಯವಾಗದೆ ಅಲ್ಲಿಯೇ ತಂದಿಟ್ಟು ಹೋಗಿದ್ದರಂತೆ.
ದೈವದ ಪರಿಕರಗಳು ಇರುವ ಜಾಗದಲ್ಲಿ ಬೃಹದಾಕಾರದ ಆಲದ ಮರ ಇದ್ದು, ಅಲ್ಲಿಯೂ ಅನೇಕ ಅವಶೇಷಗಳು ಪತ್ತೆಯಾಗಿದೆ. ಸ್ವಲ್ಪ ಮುಂದಕ್ಕೆ ಪಿಲಿಕಟ್ಟೆ ಎನ್ನುವ ಕಟ್ಟೆ ಇದ್ದು, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಹಿಂದೆ ದೈವದ ನೇಮ ನಡೆಯುತ್ತಿದ್ದಾಗ ಹುಲಿ ಬಂದು ಕಟ್ಟೆಯಲ್ಲಿ ಕುಳಿತು ತನ್ನ ಪಾಡಿಗೆ ಉತ್ಸವ ನೋಡಿ ಹೋಗುತ್ತಿತ್ತು ಎನ್ನಲಾಗಿದೆ. ಹಾಗೆಯೇ ಸ್ಥಳದಲ್ಲಿ ಪುರಾತನ ಬಾವಿಯೂ ಪತ್ತೆಯಾಗಿದೆ.
ಕೆಲವು ದಿನಗಳ ಹಿಂದೆ ಮುಲ್ಕಿ ಸಮೀಪದ ಬಳಕುಂಜೆಯಲ್ಲಿ ಬಾವಿ ಒಳಗಿದ್ದ ದೈವದ ಪರಿಕರಗಳು ಪತ್ತೆಯಾಗಿದ್ದವು. ಇದೀಗ ಮುಲ್ಕಿ ಸೀಮೆಯ ಅತಿಕಾರಿಬೆಟ್ಟು ಗ್ರಾಮದಲ್ಲಿ ಅಂತಹದ್ದೇ ದೈವದ ಪರಿಕರ ಪತ್ತೆಯಾಗಿದ್ದು, ತುಳುನಾಡಿನಲ್ಲಿ ದೈವಗಳ ಗಾಢ ಇರುವಿಕೆಯನ್ನು ಮತ್ತಷ್ಟು ದೃಢಪಡಿಸಿದೆ.
Read: ಪುರಾತನ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ ಪತ್ತೆ ! ನಿಜವಾದ ದೈವದ ನುಡಿ !!
600-Year-Old Idols we're found in a Deserted area at Mulki. It is said that it was found near a old temple.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm