ಬ್ರೇಕಿಂಗ್ ನ್ಯೂಸ್
30-03-26 11:13 pm Mangalore Correspondent ಕರಾವಳಿ
ಮಂಗಳೂರು, ಮಾರ್ಚ್ 30: ನವ ಮಂಗಳೂರು ಬಂದರಿಗೆ ಮತ್ತೊಂದು ಎಲ್ಪಿಜಿ ಹೊತ್ತ ಟ್ಯಾಂಕರ್ ಹಡಗು ಶೀಘ್ರದಲ್ಲೇ ಬರಲಿದೆ. 23 ಸಾವಿರ ಟನ್ ಎಲ್ಪಿಜಿ ಹೊತ್ತ ಇರಾನ್ ಮೂಲದ ಹಡಗು ಅಲ್ ಐನ್ ಅರೋರಾ ಇನ್ನೆರಡು ದಿನದಲ್ಲಿ ಮಂಗಳೂರು ತಲುಪಲಿದೆ.
ಈ ಹಡಗು ಇದೇ ಮಾರ್ಚ್ 19ರಂದು ಸೌದಿ ಅರೇಬಿಯಾದ ಯನ್ಬು ಇಂಡಸ್ಟ್ರಿಯಲ್ ಬಂದರಿನಿಂದ ಹೊರಟಿತ್ತು. ಮಂಗಳೂರು ಬಂದರು ಮೂಲಗಳ ಪ್ರಕಾರ, ಮಡಗಾಸ್ಕರ್ ಫ್ಲಾಗ್ ಹೊಂದಿರುವ ಹಡಗು ಇದೇ ಮಂಗಳವಾರ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಇರಾನ್ ಕಡೆಯಿಂದ ತೈಲ ಖರೀದಿಗೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ತಾತ್ಕಾಲಿಕವಾಗಿ ಹಿಂಪಡೆದಿತ್ತು. ಆನಂತರ, ಭಾರತಕ್ಕೆ ಇರಾನ್ ದೇಶದಿಂದ ತಲುಪುತ್ತಿರುವ ಮೊದಲ ತೈಲ ಹಡಗು ಇದಾಗಿದೆ. ಯುರೋಪ್ ದೇಶಗಳ ನಿರ್ಬಂಧ ಹಿನ್ನೆಲೆಯಲ್ಲಿ 2019ರ ನಂತರ ಇರಾನ್ ದೇಶದಿಂದ ಭಾರತಕ್ಕೆ ಇಂಧನ ಖರೀದಿಸುವುದು ಕಡಿಮೆಯಾಗಿತ್ತು. ಇದೀಗ ಚೀನಾಕ್ಕೆ ಹೊರಟಿದ್ದ ಇರಾನ್ ಮೂಲದ ಎಲ್ಪಿಜಿ ಟ್ಯಾಂಕ್ ಅರೋರಾ ಭಾರತದ ಬೇಡಿಕೆಯಂತೆ ಮಂಗಳೂರಿನತ್ತ ಬರುತ್ತಿದೆ.
ಇದೇ ವೇಳೆ, ಹೆಲ್ಲಾಸ್ ವೋಯೇಜರ್ ಹೆಸರಿನ ಎಲ್ಪಿಜಿ ಟ್ಯಾಂಕರ್ ನಿಂದ 20 ಸಾವಿರ ಟನ್ ಎಲ್ಪಿಜಿ ಅನ್ ಲೋಡ್ ಆಗುತ್ತಿದೆ. ಇದು ಅಮೆರಿಕದ ಹೌಸ್ಟನ್ ಬಂದರಿನಿಂದ ಫೆ.22ರಂದು ಹೊರಟಿತ್ತು. ಈ ಹಡಗಿನಿಂದ ಎಲ್ಪಿಜಿಯನ್ನು ನೇರವಾಗಿ ತೈಲ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಕಳೆದ ವಾರ ಗುಜರಾತ್ ನಿಂದ ಎಲ್ಪಿಜಿ ಹಡಗು ಮತ್ತು ಅಮೆರಿಕದಿಂದ ತೈಲ ಹೊತ್ತ ಹಡಗು ಆಗಮಿಸಿತ್ತು.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 05:10 pm
HK News Staffer
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm