ಬ್ರೇಕಿಂಗ್ ನ್ಯೂಸ್
24-02-25 02:50 pm Mangalore Correspondent ಕರಾವಳಿ
ಪುತ್ತೂರು, ಫೆ.24: ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ನಿರ್ಲಕ್ಷ್ಯದಿಂದಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯ ಹೊಟ್ಟೆಯಲ್ಲಿ ಬಟ್ಟೆಯ ತುಂಡು ಉಳಿದುಕೊಂಡಿದ್ದಲ್ಲದೆ, ಮೂರು ತಿಂಗಳ ಕಾಲ ಮಹಿಳೆ ನರಕಯಾತನೆ ಅನುಭವಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಯ ವೈದ್ಯ ಡಾ.ಅನಿಲ್ ಬೈಪಡಿತ್ತಾಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆಯ ಪತಿ ಬಂಗಾರಡ್ಕ ನಿವಾಸಿ ಗಗನ್ ದೀಪ್, ಪೊಲೀಸರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.
2024ರ ನವೆಂಬರ್ 27ರಂದು ಗಗನ್ ದೀಪ್ ಅವರ ಪತ್ನಿ ಶರಣ್ಯಲಕ್ಷ್ಮಿ ಅವರಿಗೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಆಗಿತ್ತು. ಹೆರಿಗೆಯಾದ ಬಳಿಕ ಐದು ದಿನಕ್ಕೆ ಡಿಸ್ಚಾರ್ಜ್ ಆಗಿದ್ದ ಮಹಿಳೆಗೆ ಕೆಲವು ದಿನಗಳಲ್ಲಿ ಜ್ವರ ಬಂದಿದ್ದು, ಚಿಕಿತ್ಸೆ ಪಡೆದಿದ್ದರು. ಆದರೆ ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಏನೋ ಅಸಹಜ ವಸ್ತು ಇದ್ದ ಅನುಭವ ಆಗುತ್ತಿದ್ದುದರಿಂದ ಆಪರೇಶನ್ ಮಾಡಿದ್ದ ವೈದ್ಯರಿಗೆ ತಿಳಿಸಿದ್ದರು. ಆದರೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದು, ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದರು. ದರ್ಬೆಯ ಸ್ಕ್ಯಾನಿಂಗ್ ಸೆಂಟರಿನಲ್ಲಿ ಪರೀಕ್ಷೆ ನಡೆಸಿದಾಗ, ಹೊಟ್ಟೆಯಲ್ಲಿ ಅಸಹಜ ವಸ್ತು ಇರುವುದು ಪತ್ತೆಯಾಗಿತ್ತು.


ಆದರೆ ವೈದ್ಯರು ತಾನು ಅನುಭವಿ ವೈದ್ಯನಾಗಿದ್ದು, ಹೊಟ್ಟೆಯ ಒಳಗಡೆ ಯಾವುದೇ ಹೊರಗಿನ ವಸ್ತು ಉಳಿದಿರಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. ಅದು ಹೆಮಟೋಮ ಆಗಿರಬಹುದು. ಕೆಲವು ದಿನಗಳಲ್ಲಿ ಸರಿ ಹೋಗುತ್ತದೆ, ಔಷಧಿ ಕೊಡುತ್ತೇನೆ ಎಂದಿದ್ದಾರೆ. ಆನಂತರ ಜ್ವರ ಕಡಿಮೆಯಾಗಿದ್ದರೂ, ಹೊಟ್ಟೆಯಲ್ಲಿ ನೋವು ಕಡಿಮೆಯಾಗಿರಲಿಲ್ಲ. ಆನಂತರ, ಕಾಲು, ತೊಡೆಗಳಲ್ಲಿ ನೋವು ಕಾಣಿಸಿಕೊಂಡಿತ್ತು. ಮಲಗಿದರೆ ಎದ್ದು ಕೂರಲಾಗದಷ್ಟು ನೋವು ಎದುರಾಗಿತ್ತು. ಮಗುವನ್ನು ಎತ್ತಿಕೊಳ್ಳುವುದಕ್ಕೂ ಸಾಧ್ಯವಾಗದೇ ಇದ್ದಾಗ ಅದೇ ವೈದ್ಯರಲ್ಲಿ ತೋರಿಸಲಾಯಿತು. ಇದು ಬೇರೇನೋ ಕಾಯಿಲೆ ಇರಬಹು, ರುಮಟೋಲಜಿ ತಜ್ಞರನ್ನು ಸಂಪರ್ಕಿಸಲು ಸೂಚಿಸಿದ್ದರು. ಸಿಟಿ ಆಸ್ಪತ್ರೆಗೆ ತಜ್ಞ ವೈದ್ಯರು ಬರುತ್ತಾರೆ ಎಂದು ಹೇಳಿದ್ದರೂ, ಆ ವೈದ್ಯರು ಸಿಕ್ಕಿರಲಿಲ್ಲ.
ಆನಂತರ, ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸಿದಾಗ, ಮೊದಲೇ ತೆಗೆಸಿದ್ದ ಸ್ಕ್ಯಾನಿಂಗ್ ನೋಡಿ ಯಾವುದೋ ಹೊರಗಿನ ವಸ್ತು ಹೊಟ್ಟೆಯಲ್ಲಿ ಉಳಿದುಕೊಂಡಿದೆ ಎಂದು ವೈದ್ಯರು ತಿಳಿಸಿದ್ದರು. ಅಲ್ಲಿಯೇ, ಸಿಟಿ ಸ್ಕ್ಯಾನ್ ಮಾಡಿಸಿದಾಗ, 10 ಸೆಂಟಿ ಮೀಟರ್ ಗಾತ್ರದಲ್ಲಿ ಯಾವುದೋ ವಸ್ತು ಇರುವುದು ದೃಢಪಟ್ಟಿತ್ತು. ಆಪರೇಶನ್ ಮಾಡಿ ಎರಡು ತಿಂಗಳು ಕಳೆದಿದ್ದರಿಂದ ಈಗಾಗಲೇ ಈ ವಸ್ತುವಿನಿಂದಾಗಿ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ, ಕೂಡಲೇ ಆಪರೇಶನ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಆನಂತರ ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ತೆರಳಿ ಮರುದಿನವೇ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆಪರೇಶನ್ ಸಂದರ್ಭದಲ್ಲಿ ಬಳಸುವ ಬಟ್ಟೆಯ ತುಂಡನ್ನು ಹೊಟ್ಟೆಯ ಒಳಗಿನಿಂದ ತೆಗೆದಿದ್ದಾರೆ.
ಈ ಬಗ್ಗೆ ಸಿಸೇರಿಯನ್ ಮಾಡಿದ್ದ ವೈದ್ಯರನ್ನು ಪ್ರಶ್ನಿಸಿದಾಗ, ತನ್ನಿಂದಾದ ತಪ್ಪು ಅಲ್ಲ, ಯಾರು ನಿರ್ಲಕ್ಷಿಸಿದ್ದಾರೆಂದು ತಿಳಿದಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ. ಘಟನೆ ಬಗ್ಗೆ ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ದೂರು ನೀಡಲಾಗಿದೆ. ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮೆಡಿಕಲ್ ಕೌನ್ಸಿಲ್ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸುತ್ತೇವೆಂದು ತಿಳಿಸಿದ್ದಾಗಿ ಗಗನ್ ದೀಪ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
Surgical mop left in womans stomach during C Section at puttur hospital, husband slams doctor Dr Anil Baipadithaya. A private hospital in Puttur has been accused by husband of medical negligence after a surgical mop was allegedly left in a woman's stomach during a Caesarean-section conducted on her last Nov.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 05:12 pm
HK News Staffer
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am