ಬ್ರೇಕಿಂಗ್ ನ್ಯೂಸ್
21-05-22 04:19 pm HK News Desk ಕ್ರೈಂ
ಕೊಚ್ಚಿ, ಮೇ 21: ಅಫ್ಘಾನಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ತರಲಾಗುತ್ತಿದ್ದ ಬರೋಬ್ಬರಿ 1500 ಕೋಟಿ ರೂಪಾಯಿ ಮೌಲ್ಯದ 218 ಕೇಜಿ ಹೆರಾಯಿನ್ ಮಾದಕ ದ್ರವ್ಯವನ್ನು ಲಕ್ಷದ್ವೀಪ ಸಮುದ್ರ ಬಳಿ ಡಿಆರ್ ಐ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಯಲ್ಲಿ ಪತ್ತೆ ಮಾಡಿದ್ದಾರೆ.
ಕಳೆದ ಹಲವಾರು ತಿಂಗಳಿಂದ ಲಭಿಸಿದ್ದ ಮಾಹಿತಿಯಂತೆ ಡ್ರಗ್ಸ್ ಭಾರತಕ್ಕೆ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಲಕ್ಷದ್ವೀಪ ಸಮುದ್ರದಲ್ಲಿ ಡಿಆರ್ ಐ ಮತ್ತು ಕೋಸ್ಟ್ ಗಾರ್ಡ್ ಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಮೇ 7ರಿಂದ ಆಪರೇಶನ್ ಖೋಜ್ ಬೀನ್ ಹೆಸರಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲಕ್ಷದ್ವೀಪ ಆಸುಪಾಸಿನಲ್ಲಿ ಕಂಡುಬರುವ ಬೋಟ್ ಗಳನ್ನು ತಪಾಸಣೆಯಲ್ಲಿ ತೊಡಗಿದ್ದರು. ಮೇ 18ರಂದು ಭಾರತದ ನೋಂದಣಿಯ ಪ್ರಿನ್ಸ್ ಮತ್ತು ಲಿಟಲ್ ಜೀಸಸ್ ಹೆಸರಿನ ಎರಡು ಬೋಟ್ ಗಳು ಕಂಡುಬಂದಿದ್ದು ತಪಾಸಣೆ ನಡೆಸಿದ್ದಾರೆ. ಲಕ್ಷದ್ವೀಪ ಸಮುದ್ರದ ಅಗಟ್ಟಿ ದ್ವೀಪದ ಬಳಿ ಎರಡು ಬೋಟ್ ಪತ್ತೆಯಾಗಿದ್ದು, ಅದರಲ್ಲಿ ನೋಡಿದಾಗ ಅಗಾಧ ಪ್ರಮಾಣದಲ್ಲಿ ಡ್ರಗ್ಸ್ ಸ್ಟೋರೇಜ್ ಇರುವುದನ್ನು ಪತ್ತೆ ಮಾಡಿದ್ದಾರೆ.
ಎರಡು ಮೀನುಗಾರಿಕಾ ಬೋಟಿನ ಅಡಿಭಾಗದಲ್ಲಿ ಯಾರಿಗೂ ಕಾಣಿಸದಂತೆ ಪ್ಲಾಸ್ಟಿಕ್ ಚೀಲಗಳಲ್ಲಿ ಹೆರಾಯಿನ್ ಅಡಗಿಸಿಡಲಾಗಿತ್ತು. 218 ಕೇಜಿ ಹೆರಾಯಿನ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1526 ಕೋಟಿ ರೂಪಾಯಿ ಬೆಲೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಾರ್ಯಾಚರಣೆಗೆ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯ ಐಸಿಜಿ ಸುಜೀತ್ ಹೆಸರಿನ ಹಡಗನ್ನು ಬಳಸಲಾಗಿತ್ತು. ಎರಡು ಬೋಟಿನಲ್ಲಿ 20 ಮಂದಿ ಕಾರ್ಮಿಕರಿದ್ದು ಅವರನ್ನು ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದೆ. ಎರಡು ಬೋಟ್ ಮತ್ತು ಕಾರ್ಮಿಕರನ್ನು ಕೇರಳದ ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ನೆಲೆಗೆ ಕರೆತರಲಾಗಿದೆ. 218 ಕೇಜಿ ಹೆರಾಯಿನನ್ನು ತಲಾ ಒಂದು ಕೇಜಿ ಚೀಲದಂತೆ ಪ್ಯಾಕೆಟ್ ಮಾಡಲಾಗಿತ್ತು. ಬೋಟ್ ಮೂಲಕ ತಮಿಳುನಾಡಿಗೆ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ.
ಕೋಸ್ಟ್ ಗಾರ್ಡ್ ಮತ್ತು ಡಿಆರ್ ಐ ಅಧಿಕಾರಿಗಳು ಒಂದು ತಿಂಗಳ ಅಂತರದಲ್ಲಿ 2500 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಸಮುದ್ರ ಮಾರ್ಗದಲ್ಲಿ ಭಾರೀ ಕಳ್ಳಸಾಗಾಣಿಕೆ ಆಗುತ್ತಿದ್ದು ಕಳೆದ ಎಪ್ರಿಲ್ 20ರಂದು 205 ಕೇಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಎಪ್ರಿಲ್ 29ರಂದು 396 ಕೇಜಿ ಹೆರಾಯಿನ್ ಲೇಸ್ಡ್ ಮತ್ತು 62 ಕೇಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಇದೀಗ ಮೇ 18ರಂದು ಮತ್ತೊಂದು ಬೃಹತ್ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಕಳ್ಳಸಾಗಣೆ ಪತ್ತೆಯಾಗಿದೆ.
In yet another narcotics haul, the Indian Coast Guard (ICG) and the Directorate of Revenue Intelligence (DRI) jointly seized 218 kg of heroin worth Rs 1,526 crore smuggled in from Afghanistan which was being taken through sea route.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm