ಬ್ರೇಕಿಂಗ್ ನ್ಯೂಸ್
16-04-22 07:56 pm HK Desk news ಕ್ರೈಂ
ಪಾಲಕ್ಕಾಡ್, ಎ.16: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಎಸ್ಡಿಪಿಐ ಮತ್ತು ಆರೆಸ್ಸೆಸ್ ಮುಯ್ಯಿಗೆ ಮುಯ್ಯಿ ಎನ್ನುವಂತೆ ತಲವಾರು ಕಾಳಗದಲ್ಲಿ ತೊಡಗಿದೆ. ಶುಕ್ರವಾರ ಮಧ್ಯಾಹ್ನ ಎಸ್ಡಿಪಿಐ ಕಾರ್ಯಕರ್ತನ ಕೊಲೆ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಶನಿವಾರ ಮಧ್ಯಾಹ್ನ ಹಾಡಹಗಲೇ ಆರೆಸ್ಸೆಸ್ ನಾಯಕರೊಬ್ಬರ ಹತ್ಯೆ ನಡೆದಿದೆ.
ಈ ಹಿಂದೆ ಆರೆಸ್ಸೆಸ್ ಶಾರೀರಿಕ ಶಿಕ್ಷಣ ಪ್ರಮುಖ್ ಆಗಿದ್ದ ಶ್ರೀನಿವಾಸನ್ ಕೊಲೆಯಾದವರು. ಮೇಲ್ಮುರಿ ಎಂಬಲ್ಲಿ ಶ್ರೀನಿವಾಸನ್ ಇಂದು ಮಧ್ನಾಹ್ನ ಒಂದು ಗಂಟೆ ಸುಮಾರಿಗೆ ತನ್ನ ಅಂಗಡಿಯಲ್ಲಿದ್ದಾಗ, ಮೂರು ಬೈಕುಗಳಲ್ಲಿ ಬಂದ ಐವರು ಹಂತಕರು ಯದ್ವಾತದ್ವಾ ತಲವಾರು ಬೀಸಿ ಭೀಕರ ಕೊಲೆ ಮಾಡಿದ್ದಾರೆ. ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದರೂ ಬದುಕುಳಿಯಲಿಲ್ಲ.
ಬಿಜೆಪಿ ನಾಯಕರು, ಕೊಲೆಯ ಹಿಂದೆ ಎಸ್ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರಿದ್ದಾರೆ, ಅವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶುಕ್ರವಾರ ನಡೆದ ಕೊಲೆಗೆ ಪ್ರತೀಕಾರ ರೂಪದಲ್ಲಿ ಘಟನೆ ನಡೆದಿದ್ದು, ಎಸ್ಡಿಪಿಐ ಕಾರ್ಯಕರ್ತರೇ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಎಲಪ್ಪಳ್ಳಿ ಎಂಬಲ್ಲಿ ಮಸೀದಿಗೆ ಕಾರಿನಲ್ಲಿ ಬಂದಿದ್ದ ಸುಬೈರ್ ಎಂಬ ಎಸ್ಡಿಪಿಐ ಕಾರ್ಯಕರ್ತನ ಕೊಲೆ ಆಗಿತ್ತು. ಕಾರಿಗೆ ಹಿಂದಿನಿಂದ ಡಿಕ್ಕಿಯಾಗಿದ್ದ ತಂಡ, ತಂದೆಯ ಎದುರಲ್ಲೇ ಸುಬೇರ್ ನನ್ನು ಕೊಲೆಗೈದಿತ್ತು. ಸಂಜೆ ವೇಳೆಗೆ ಸುಬೇರ್ ಅಂತ್ಯಕ್ರಿಯೆ ನಡೆದಿದ್ದು, ಅದಾಗಿ 20 ಗಂಟೆ ಕಳೆಯುವಷ್ಟರಲ್ಲಿ ಮತ್ತೊಂದು ಹೆಣ ಬಿದ್ದಿದೆ. ಘಟನೆ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಈ ಹಿಂದೆ ಆರೆಸ್ಸೆಸ್ ನಾಯಕರಾಗಿದ್ದ ಶ್ರೀನಿವಾಸನ್(47), ಈಗ ಹಳೆಯದನ್ನು ಬಿಟ್ಟು ಆಟೋ ಗ್ಯಾರೇಜ್ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದಾಗಲೇ ಸುಲಭದಲ್ಲಿ ಹಂತಕರ ಕೈಗೆ ಸಿಕ್ಕಿದ್ದಾರೆ. ಶುಕ್ರವಾರದ ಕೊಲೆ ಪ್ರಕರಣದಲ್ಲಿ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲಿ ಶಾಮೀಲು ಹೊಂದಿಲ್ಲ. ನಮ್ಮ ಕೈವಾಡ ಇಲ್ಲ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
A local RSS leader was hacked to death in Kerala’s Palakkad district on Saturday, barely a day after a PFI leader was murdered in the area. The BJP’s district leadership in Palakkad said the PFI and its political wing, the Social Democratic Party of India, were behind Saturday’s murder.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm