ಬ್ರೇಕಿಂಗ್ ನ್ಯೂಸ್
12-01-22 08:59 pm Mangalore Correspondent ಕ್ರೈಂ
Photo credits : Headline Karnataka
ಮಂಗಳೂರು, ಜ.12 : ಗೋವಿನ ಕರುವನ್ನು ಬಲಿಕೊಟ್ಟು ವಾಮಾಚಾರ ಮಾಡಿರುವ ಘಟನೆ ಮೂಡುಬಿದ್ರೆ ಬಳಿಯ ಕೀರ್ತಿನಗರ ಎಂಬಲ್ಲಿ ಬೆಳಕಿಗೆ ಬಂದಿದ್ದು, ಘಟನೆ ಬಗ್ಗೆ ಹಿಂದು ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕೋಡಂಗಲ್ಲು – ಕೀರ್ತಿನಗರ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿದ ಸ್ಥಿತಿಯಲ್ಲಿ ಗೋವಿನ ರುಂಡ ಪತ್ತೆಯಾಗಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ, ಅದರಲ್ಲಿ ಕುಂಕುಮ ಮತ್ತು ಹೂವು ಕೂಡ ಪತ್ತೆಯಾಗಿದೆ. ಯಾರೋ ವಾಮಾಚಾರ ನಡೆಸಿ, ಮೂರು ರಸ್ತೆ ಸೇರುವಲ್ಲಿ ತಂದು ಎಸೆದು ಹೋಗಿದ್ದಾರೆ ಎನ್ನಲಾಗುತ್ತಿದೆ.
ಮಂಗಳವಾರ ರಾತ್ರಿ ಅಥವಾ ಸೋಮವಾರ ರಾತ್ರಿ ವಾಮಾಚಾರ ನಡೆಸಿ, ಬಲಿ ಕೊಟ್ಟ ಗೋವಿನ ರುಂಡವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಎಸೆದಿದ್ದಾರೆ. ಸ್ವಲ್ಪ ಕೊಳೆತ ರೀತಿ ಇದ್ದು, ಘಟನೆ ನಡೆದು 24 ಗಂಟೆ ಆಗಿರುವ ರೀತಿ ಕಂಡುಬಂದಿದೆ. ಪ್ಲಾಸ್ಟಿಕ್ ನಲ್ಲಿ ಕಟ್ಟಿದ್ದ ಪೊಟ್ಟಣವನ್ನು ನಾಯಿಗಳು ಎಳೆದು ತಂದು ರಸ್ತೆ ಮಧ್ಯ ಹಾಕಿರುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ ಜನರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವನ್ನು ಬಲಿ ಕೊಡುವ ಪದ್ಧತಿ ಇಲ್ಲ. ಈ ಭಾಗದಲ್ಲಿ ವಾಮಾಚಾರ ನಡೆದರೂ, ಗೋವನ್ನು ಬಲಿ ಕೊಡುವುದು ಕಡಿಮೆ. ಆದರೆ, ಇಲ್ಲಿ ಯಾರು ವಾಮಾಚಾರ ನಡೆಸಿದ್ದಾರೆ ಅನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೂಡುಬಿದ್ರೆ ಪೊಲೀಸರು ವಾಮಾಚಾರ, ಇನ್ನಿತರ ಬಲಿ ಹೋಮಗಳನ್ನು ನಡೆಸುವ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.
ಕೆಲವರ ಶಂಕೆಯ ಪ್ರಕಾರ, ಕೇರಳ ಭಾಗದ ವಾಮಾಚಾರ ಮಾಡುವ ಮಂದಿಯನ್ನು ಕರೆಸಿ ಬಲಿ ಹೋಮ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಬೇರೆ ಕಡೆ ವಾಮಾಚಾರ ನಡೆಸಿ, ಗಂಡು ಕರುವನ್ನು ಬಲಿಕೊಟ್ಟು ತಲೆಯನ್ನು ಇಲ್ಲಿ ತಂದು ಹಾಕಿದ್ದಾರೆ. ಹಿಂದುಗಳನ್ನು ಕೆಣಕುವ ಉದ್ದೇಶದಲ್ಲಿ ಈ ಕೃತ್ಯ ಮಾಡಿದ ರೀತಿ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಅಲ್ಲಿಯೇ ಸ್ವಲ್ಪ ಹತ್ತಿರ ದೇವಸ್ಥಾನ ಇದ್ದು, ಅಂಥ ದುರುದ್ದೇಶ ಇರುತ್ತಿದ್ದರೆ ದೇಗುಲದ ಮುಂದೆ ಹಾಕುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಯಾರಾದ್ರೂ ಈ ಭಾಗದಲ್ಲಿ ವಾಮಾಚಾರದ ರೀತಿ ಹೋಮ ಮಾಡಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮೂಡುಬಿದ್ರೆ ಪೊಲೀಸರು ತಿಳಿಸಿದ್ದಾರೆ.
ಹಿಂಜಾವೇಯಿಂದ 48 ಗಂಟೆಗಳ ಗಡುವು
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಜಾಗರಣ ವೇದಿಕೆ ಮೂಡುಬಿದ್ರೆ ಘಟಕದ ನಾಯಕರು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಹಿಂದುಗಳನ್ನು ಕೆಣಕುವ ಉದ್ದೇಶದಿಂದ ಯಾರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸದಿದ್ದರೆ ಮೂಡುಬಿದ್ರೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಹಿಂಜಾವೇ ನಾಯಕರು ಮೂಡುಬಿದ್ರೆ ಠಾಣೆಗೆ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದಾರೆ.
A head of a Calf chopped was found inside a plastic cover in Moodbidri police station limits, Cops suspect of witchcraft as flower and kunkuma is found on it's head. HJV demand arrest of the culprit within 10 days or warn of Gherao.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm