ಬ್ರೇಕಿಂಗ್ ನ್ಯೂಸ್
18-11-21 05:15 pm Mangaluru correspondent ಕ್ರೈಂ
ಮಂಗಳೂರು, ನ.18: ನೀರಿನ ಮೀಟರ್ ರೀಡಿಂಗ್ ಮಾಡುವವರು ಎಂದು ಹೇಳಿ ಮನೆಗೆ ಬಂದಿದ್ದ ಇಬ್ಬರು ಮನೆಯಲ್ಲಿದ್ದ ವೃದ್ಧ ಮಹಿಳೆಯನ್ನು ಯಾಮಾರಿಸಿ, ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕದ್ದೊಯ್ದ ಘಟನೆ ಉರ್ವಾದಲ್ಲಿ ನಡೆದಿದೆ.
ಉರ್ವಾ ಸ್ಟೋರ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಘಟನೆ ನಡೆದಿದೆ. ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಬಂದಿದ್ದು ನಾವು ಮಹಾನಗರ ಪಾಲಿಕೆಯಿಂದ ಬಂದಿದ್ದಾಗಿ ಹೇಳಿದ್ದಾರೆ. ನಿಮ್ಮ ನೀರಿನ ಮೀಟರ್ ರೀಡಿಂಗ್ ಮಾಡಬೇಕು, ನೀರಿನ ಸಂಪ್ ಚೆಕ್ ಮಾಡಬೇಕೆಂದು ಹೇಳಿ ಅಧಿಕಾರಿಗಳ ಸೋಗಿನಲ್ಲಿ ಪರಿಶೀಲನೆ ಮಾಡಿದ್ದಾರೆ.
ಆನಂತರ, ಮಹಿಳೆಯ ಜೊತೆಗೆ ಮನೆಯ ಟೆರೇಸಿಗೆ ತೆರಳಿದ್ದ ಇಬ್ಬರು ಅಲ್ಲಿರುವ ನೀರಿನ ಟಾಂಕಿಯನ್ನು ಪರಿಶೀಲನೆ ನಡೆಸಿದ್ದು, ಮನೆ ಹಿಂಭಾಗದಲ್ಲಿ ಗಲೀಜು ಮಾಡದಂತೆ ಹೇಳಿದ್ದಾರೆ. ಈ ವೇಳೆ, ಪರಿಸರದ ನಿವಾಸಿಗಳು ಕೂಡ ಬಂದಿದ್ದು, ನೀವು ಮಹಾನಗರ ಪಾಲಿಕೆಯವರು ಅನ್ನುವುದಕ್ಕೆ ಯಾವ ದಾಖಲೆಯಿದೆ ಎಂದು ಹೇಳಿ ಕೇಳಿದ್ದಾರೆ. ಅದು ಬೈಕಿನಲ್ಲಿದೆ ಎಂದು ಕೊಡುತ್ತೇವೆಂದು ಹೇಳಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು.
ಸಂಜೆ ವೇಳೆಗೆ, ಮನೆಯ ಒಳಗಿನ ಕಪಾಟಿನಲ್ಲಿ ಚೆಕ್ ಮಾಡಿದಾಗ, 68 ಗ್ರಾಮ್ ಚಿನ್ನಾಭರಣ ಮತ್ತು 71 ಸಾವಿರ ರೂ. ನಗದು ಹಣ ಕಳವಾಗಿತ್ತು. ಇದರ ಬಗ್ಗೆ 70 ವರ್ಷದ ಮೀರಾ ಪೈ ಉರ್ವಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೀಟರ್ ರೀಡಿಂಗ್ ಎಂದು ಹೇಳಿ ಇಬ್ಬರು ಅಜ್ಜಿಯ ಜೊತೆಗೆ ಮಾತನಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಮನೆಯ ಒಳಗೆ ಹೋಗಿದ್ದ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಅದರ ಆಧಾರದಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
Mangalore Robbery in Urwa store, Burglars enter home loot cash and gold.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 04:49 pm
HK News Staffer
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
11-08-26 03:08 pm
HK News Staffer
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm