ಬ್ರೇಕಿಂಗ್ ನ್ಯೂಸ್
18-11-21 05:15 pm Mangaluru correspondent ಕ್ರೈಂ
ಮಂಗಳೂರು, ನ.18: ನೀರಿನ ಮೀಟರ್ ರೀಡಿಂಗ್ ಮಾಡುವವರು ಎಂದು ಹೇಳಿ ಮನೆಗೆ ಬಂದಿದ್ದ ಇಬ್ಬರು ಮನೆಯಲ್ಲಿದ್ದ ವೃದ್ಧ ಮಹಿಳೆಯನ್ನು ಯಾಮಾರಿಸಿ, ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕದ್ದೊಯ್ದ ಘಟನೆ ಉರ್ವಾದಲ್ಲಿ ನಡೆದಿದೆ.
ಉರ್ವಾ ಸ್ಟೋರ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಘಟನೆ ನಡೆದಿದೆ. ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಬಂದಿದ್ದು ನಾವು ಮಹಾನಗರ ಪಾಲಿಕೆಯಿಂದ ಬಂದಿದ್ದಾಗಿ ಹೇಳಿದ್ದಾರೆ. ನಿಮ್ಮ ನೀರಿನ ಮೀಟರ್ ರೀಡಿಂಗ್ ಮಾಡಬೇಕು, ನೀರಿನ ಸಂಪ್ ಚೆಕ್ ಮಾಡಬೇಕೆಂದು ಹೇಳಿ ಅಧಿಕಾರಿಗಳ ಸೋಗಿನಲ್ಲಿ ಪರಿಶೀಲನೆ ಮಾಡಿದ್ದಾರೆ.
ಆನಂತರ, ಮಹಿಳೆಯ ಜೊತೆಗೆ ಮನೆಯ ಟೆರೇಸಿಗೆ ತೆರಳಿದ್ದ ಇಬ್ಬರು ಅಲ್ಲಿರುವ ನೀರಿನ ಟಾಂಕಿಯನ್ನು ಪರಿಶೀಲನೆ ನಡೆಸಿದ್ದು, ಮನೆ ಹಿಂಭಾಗದಲ್ಲಿ ಗಲೀಜು ಮಾಡದಂತೆ ಹೇಳಿದ್ದಾರೆ. ಈ ವೇಳೆ, ಪರಿಸರದ ನಿವಾಸಿಗಳು ಕೂಡ ಬಂದಿದ್ದು, ನೀವು ಮಹಾನಗರ ಪಾಲಿಕೆಯವರು ಅನ್ನುವುದಕ್ಕೆ ಯಾವ ದಾಖಲೆಯಿದೆ ಎಂದು ಹೇಳಿ ಕೇಳಿದ್ದಾರೆ. ಅದು ಬೈಕಿನಲ್ಲಿದೆ ಎಂದು ಕೊಡುತ್ತೇವೆಂದು ಹೇಳಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು.
ಸಂಜೆ ವೇಳೆಗೆ, ಮನೆಯ ಒಳಗಿನ ಕಪಾಟಿನಲ್ಲಿ ಚೆಕ್ ಮಾಡಿದಾಗ, 68 ಗ್ರಾಮ್ ಚಿನ್ನಾಭರಣ ಮತ್ತು 71 ಸಾವಿರ ರೂ. ನಗದು ಹಣ ಕಳವಾಗಿತ್ತು. ಇದರ ಬಗ್ಗೆ 70 ವರ್ಷದ ಮೀರಾ ಪೈ ಉರ್ವಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೀಟರ್ ರೀಡಿಂಗ್ ಎಂದು ಹೇಳಿ ಇಬ್ಬರು ಅಜ್ಜಿಯ ಜೊತೆಗೆ ಮಾತನಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಮನೆಯ ಒಳಗೆ ಹೋಗಿದ್ದ ಅನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಅದರ ಆಧಾರದಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
Mangalore Robbery in Urwa store, Burglars enter home loot cash and gold.
21-03-26 01:22 pm
HK News Staffer
ಜ್ಯೋತಿಷಿ ಹೆಸರಿನಲ್ಲಿ ಮಾಟ- ಮಂತ್ರ ; 58 ಮಹಿಳೆಯರ ವ...
20-03-26 06:10 pm
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
21-03-26 03:22 pm
HK News Staffer
ಉಳ್ಳಾಲದ ರೌಡಿಶೀಟರ್, ಕೋರ್ಟಿಗೆ ವಂಚಿಸಿ ತಲೆಮರೆಸಿಕೊ...
21-03-26 01:57 pm
ಪ್ರಯಾಣಿಕರಿಗೆ ದೊಡ್ಡ ಹೊಡೆತ ; ಮಂಗಳೂರು–ಸುಬ್ರಹ್ಮಣ...
21-03-26 11:56 am
Yakshagana, Govinda Bhat Death: ತೆಂಕುತಿಟ್ಟು ಯ...
20-03-26 11:26 pm
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm