ಬ್ರೇಕಿಂಗ್ ನ್ಯೂಸ್
22-10-21 05:06 pm Mangaluru Correspondent ಕ್ರೈಂ
ಉಳ್ಳಾಲ, ಅ.22 : ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟಿನ ಒಂಟಿ ಬಂಗಲೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಹಿತ್ತಾಳೆ ದೀಪಗಳನ್ನ ಕದ್ದೊಯ್ದ ಪ್ರಕರಣದಲ್ಲಿ ಮದನಿನಗರದ ಇಬ್ಬರು ಕಳ್ಳರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಮದನಿ ನಗರ ನಿವಾಸಿಗಳಾದ ಅಸ್ವೀರ್ (22) ಮತ್ತು ನಿಜಾಮುದ್ದೀನ್(22) ಬಂಧಿತ ಕಳ್ಳರು. ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನ ಸುಜಾತ ಎಂಬವರಿಗೆ ಸೇರಿದ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಲಕ್ಷಕ್ಕೂ ಮೀರಿ ಬೆಳೆ ಬಾಳುವ ಹಿತ್ತಾಳೆ ದೀಪಗಳನ್ನ ಕದ್ದೊಯ್ದ ಘಟನೆ ಕಳೆದ ಅ.6 ರಂದು ಬೆಳಕಿಗೆ ಬಂದಿತ್ತು. ಬಂಗಲೆ ಮಾಲಕಿ ಸುಜಾತ ಅವರು ಕುಟುಂಬ ಸಮೇತ ಹೊರ ದೇಶದಲ್ಲಿ ವಾಸವಿದ್ದು ಬಂಗಲೆ ಒಂಟಿಯಾಗಿತ್ತು. ಪಿಕ್ಕಾಸಿನಲ್ಲಿ ಬಂಗಲೆಯ ಹಿಂಬಾಗಿಲನ್ನ ಮುರಿದು ಒಳನುಗ್ಗಿದ ಕಳ್ಳರು ಮನೆಯೆಲ್ಲಾ ತಡಕಾಡಿದ್ದು ಕೊನೆಗೆ ಒಳಗಿದ್ದ ದೊಡ್ಡ ಗಾತ್ರದ ಮೂರು ಹಿತ್ತಾಳೆ ದೀಪ ಮತ್ತು ಎರಡು ಸಣ್ಣ ಗಾತ್ರದ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದರು.



ಬಂಗಲೆಯ ಪಕ್ಕದ ನಿವಾಸಿ ಸುಜಾತ ಅವರ ಸಹೋದರ ವಕೀಲ ಗಂಗಾಧರ್ ಉಳ್ಳಾಲ್ ಅವರಿಗೆ ಅ.6 ರಂದು ಕಳ್ಳತನ ಘಟನೆ ಗಮನಕ್ಕೆ ಬಂದಿದ್ದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪ್ರಕರಣದ ಬಗ್ಗೆ ಯಾವುದೇ ಸಿಸಿಟಿವಿ ದಾಖಲೆ ಇಲ್ಲದಿದ್ದರೂ ಉಳ್ಳಾಲ ಪಿಐ ಸಂದೀಪ್ ನೇತೃತ್ವದ ತಂಡ ಕಳ್ಳರ ಜಾಡು ಹಿಡಿಯಲು ಬಲೆ ಬೀಸಿತ್ತು. ಕುಂಪಲ ಬಗಂಬಿಲದಲ್ಲಿ ತಿರುಗಾಡುತ್ತಿದ್ದ ಅಸ್ವೀರ್ ಮತ್ತು ನಿಝಾಮುದ್ದೀನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮದನಿನಗರ ನಿವಾಸಿಗಳಾದ ತಸ್ಲೀಮ್ ಮತ್ತು ಅಮ್ಮು ಕೂಡ ಭಾಗಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನ ನಡೆಸಿದ ಲಕ್ಷಾಂತರ ಮೌಲ್ಯದ ಹಿತ್ತಾಳೆ ದೀಪಗಳನ್ನ ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಖಚಿತ ಸುಳಿವು ಇಲ್ಲದಿದ್ದರೂ ಕೆಲವೇ ದಿನಗಳಲ್ಲಿ ಒಂಟಿ ಬಂಗಲೆ ಕಳ್ಳತನ ಪ್ರಕರಣ ಭೇದಿಸಿದ ಉಳ್ಳಾಲ ಪೊಲೀಸರ ಕಾರ್ಯ ವೈಖರಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.




ದೀಪಕ್ಕಾಗಿ ಭಾವುಕರಾಗಿ ಹರಕೆ ಹೊತ್ತಿದ್ದ ಸಿರಿವಂತರು !
ದುಬೈಯಲ್ಲಿ ಕುಟುಂಬ ಸಮೇತ ವಾಸವಾಗಿರುವ ಸಿರಿವಂತ ಕುಟುಂಬದ ಸುಜಾತ ಅವರು ತನ್ನ ಒಂಟಿ ಬಂಗಲೆಯ ಭಾವನಾತ್ಮಕ ಅಂಗವಾದ ಹಿತ್ತಾಳೆ ದೀಪಗಳು ಕಳವಾಗಿರುವ ವಿಷಯ ತಿಳಿದು ಕೂಡಲೇ ಸಂಬಂಧಿಕರು, ಸ್ನೇಹಿತ ವರ್ಗದವರಿಗೆ ಕರೆ ಮಾಡಿ ಎಷ್ಟು ಖರ್ಚಾದರೂ ಪರವಾಗಿಲ್ಲ. ತನಗೆ ಆ ದೀಪಗಳು ಮತ್ತೆ ಸಿಗಬೇಕೆಂದು ಹೇಳಿದ್ದರಂತೆ. ಅಲ್ಲದೆ ಎಲ್ಲ ದೈವ, ದೇವರುಗಳಿಗೂ ದೀಪಗಳು ಮತ್ತೆ ಸಿಗುವಂತೆ ಹರಕೆ ಹೊತ್ತಿದ್ದರಂತೆ. ಸುಜಾತ ಅವರ ಭಾವನಾತ್ಮಕ ನಂಟಿನ ಪ್ರತಿಫಲವೋ ಎಂಬಂತೆ ಮದನಿ ನಗರದ ಕಳ್ಳರು ಇದೀಗ ಪೊಲೀಸರಿಗೆ ಪವಾಡ ಸದೃಶರಾಗಿ ಸಿಕ್ಕಿ ಬಿದ್ದಿದ್ದು ದೀಪಗಳು ಮತ್ತೆ ಬಂಗಲೆ ಸೇರುವಂತಾಗಿದೆ.
ತೊಕ್ಕೊಟ್ಟು ; ಒಂಟಿ ಬಂಗಲೆಗೆ ನುಗ್ಗಿ ಕಳ್ಳತನ, ಲಕ್ಷಾಂತರ ಮೌಲ್ಯದ ಹಿತ್ತಾಳೆ ದೀಪಗಳ ಕಳವು
Mangalore Thokottu Burglars enter bungalow, steal Five brass lamps worth lakhs two arrested by Ullal Police. FIve steal brass lamps worth lakhs had been stolen.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm