ಬ್ರೇಕಿಂಗ್ ನ್ಯೂಸ್
22-10-21 05:06 pm Mangaluru Correspondent ಕ್ರೈಂ
ಉಳ್ಳಾಲ, ಅ.22 : ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟಿನ ಒಂಟಿ ಬಂಗಲೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಹಿತ್ತಾಳೆ ದೀಪಗಳನ್ನ ಕದ್ದೊಯ್ದ ಪ್ರಕರಣದಲ್ಲಿ ಮದನಿನಗರದ ಇಬ್ಬರು ಕಳ್ಳರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದ ಮದನಿ ನಗರ ನಿವಾಸಿಗಳಾದ ಅಸ್ವೀರ್ (22) ಮತ್ತು ನಿಜಾಮುದ್ದೀನ್(22) ಬಂಧಿತ ಕಳ್ಳರು. ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನ ಸುಜಾತ ಎಂಬವರಿಗೆ ಸೇರಿದ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಲಕ್ಷಕ್ಕೂ ಮೀರಿ ಬೆಳೆ ಬಾಳುವ ಹಿತ್ತಾಳೆ ದೀಪಗಳನ್ನ ಕದ್ದೊಯ್ದ ಘಟನೆ ಕಳೆದ ಅ.6 ರಂದು ಬೆಳಕಿಗೆ ಬಂದಿತ್ತು. ಬಂಗಲೆ ಮಾಲಕಿ ಸುಜಾತ ಅವರು ಕುಟುಂಬ ಸಮೇತ ಹೊರ ದೇಶದಲ್ಲಿ ವಾಸವಿದ್ದು ಬಂಗಲೆ ಒಂಟಿಯಾಗಿತ್ತು. ಪಿಕ್ಕಾಸಿನಲ್ಲಿ ಬಂಗಲೆಯ ಹಿಂಬಾಗಿಲನ್ನ ಮುರಿದು ಒಳನುಗ್ಗಿದ ಕಳ್ಳರು ಮನೆಯೆಲ್ಲಾ ತಡಕಾಡಿದ್ದು ಕೊನೆಗೆ ಒಳಗಿದ್ದ ದೊಡ್ಡ ಗಾತ್ರದ ಮೂರು ಹಿತ್ತಾಳೆ ದೀಪ ಮತ್ತು ಎರಡು ಸಣ್ಣ ಗಾತ್ರದ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದರು.



ಬಂಗಲೆಯ ಪಕ್ಕದ ನಿವಾಸಿ ಸುಜಾತ ಅವರ ಸಹೋದರ ವಕೀಲ ಗಂಗಾಧರ್ ಉಳ್ಳಾಲ್ ಅವರಿಗೆ ಅ.6 ರಂದು ಕಳ್ಳತನ ಘಟನೆ ಗಮನಕ್ಕೆ ಬಂದಿದ್ದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪ್ರಕರಣದ ಬಗ್ಗೆ ಯಾವುದೇ ಸಿಸಿಟಿವಿ ದಾಖಲೆ ಇಲ್ಲದಿದ್ದರೂ ಉಳ್ಳಾಲ ಪಿಐ ಸಂದೀಪ್ ನೇತೃತ್ವದ ತಂಡ ಕಳ್ಳರ ಜಾಡು ಹಿಡಿಯಲು ಬಲೆ ಬೀಸಿತ್ತು. ಕುಂಪಲ ಬಗಂಬಿಲದಲ್ಲಿ ತಿರುಗಾಡುತ್ತಿದ್ದ ಅಸ್ವೀರ್ ಮತ್ತು ನಿಝಾಮುದ್ದೀನನ್ನು ಸಂಶಯದ ಮೇರೆಗೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮದನಿನಗರ ನಿವಾಸಿಗಳಾದ ತಸ್ಲೀಮ್ ಮತ್ತು ಅಮ್ಮು ಕೂಡ ಭಾಗಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನ ನಡೆಸಿದ ಲಕ್ಷಾಂತರ ಮೌಲ್ಯದ ಹಿತ್ತಾಳೆ ದೀಪಗಳನ್ನ ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಖಚಿತ ಸುಳಿವು ಇಲ್ಲದಿದ್ದರೂ ಕೆಲವೇ ದಿನಗಳಲ್ಲಿ ಒಂಟಿ ಬಂಗಲೆ ಕಳ್ಳತನ ಪ್ರಕರಣ ಭೇದಿಸಿದ ಉಳ್ಳಾಲ ಪೊಲೀಸರ ಕಾರ್ಯ ವೈಖರಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.




ದೀಪಕ್ಕಾಗಿ ಭಾವುಕರಾಗಿ ಹರಕೆ ಹೊತ್ತಿದ್ದ ಸಿರಿವಂತರು !
ದುಬೈಯಲ್ಲಿ ಕುಟುಂಬ ಸಮೇತ ವಾಸವಾಗಿರುವ ಸಿರಿವಂತ ಕುಟುಂಬದ ಸುಜಾತ ಅವರು ತನ್ನ ಒಂಟಿ ಬಂಗಲೆಯ ಭಾವನಾತ್ಮಕ ಅಂಗವಾದ ಹಿತ್ತಾಳೆ ದೀಪಗಳು ಕಳವಾಗಿರುವ ವಿಷಯ ತಿಳಿದು ಕೂಡಲೇ ಸಂಬಂಧಿಕರು, ಸ್ನೇಹಿತ ವರ್ಗದವರಿಗೆ ಕರೆ ಮಾಡಿ ಎಷ್ಟು ಖರ್ಚಾದರೂ ಪರವಾಗಿಲ್ಲ. ತನಗೆ ಆ ದೀಪಗಳು ಮತ್ತೆ ಸಿಗಬೇಕೆಂದು ಹೇಳಿದ್ದರಂತೆ. ಅಲ್ಲದೆ ಎಲ್ಲ ದೈವ, ದೇವರುಗಳಿಗೂ ದೀಪಗಳು ಮತ್ತೆ ಸಿಗುವಂತೆ ಹರಕೆ ಹೊತ್ತಿದ್ದರಂತೆ. ಸುಜಾತ ಅವರ ಭಾವನಾತ್ಮಕ ನಂಟಿನ ಪ್ರತಿಫಲವೋ ಎಂಬಂತೆ ಮದನಿ ನಗರದ ಕಳ್ಳರು ಇದೀಗ ಪೊಲೀಸರಿಗೆ ಪವಾಡ ಸದೃಶರಾಗಿ ಸಿಕ್ಕಿ ಬಿದ್ದಿದ್ದು ದೀಪಗಳು ಮತ್ತೆ ಬಂಗಲೆ ಸೇರುವಂತಾಗಿದೆ.
ತೊಕ್ಕೊಟ್ಟು ; ಒಂಟಿ ಬಂಗಲೆಗೆ ನುಗ್ಗಿ ಕಳ್ಳತನ, ಲಕ್ಷಾಂತರ ಮೌಲ್ಯದ ಹಿತ್ತಾಳೆ ದೀಪಗಳ ಕಳವು
Mangalore Thokottu Burglars enter bungalow, steal Five brass lamps worth lakhs two arrested by Ullal Police. FIve steal brass lamps worth lakhs had been stolen.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm