ಬ್ರೇಕಿಂಗ್ ನ್ಯೂಸ್
19-10-21 06:50 pm Mangaluru Correspondent ಕ್ರೈಂ
ಉಳ್ಳಾಲ, ಅ.19: ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಪದೇ ಪದೇ ಪೊಲೀಸ್ ದೂರು ನೀಡುತ್ತಿದ್ದ ಕರಾಟೆ ಮಾಸ್ಟರ್ ಓರ್ವರನ್ನ ಹಾಡು ಹಗಲೇ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಇರಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಉಳಿಯ ನಿವಾಸಿ ಹರೀಶ್ ಗಾಣಿಗ(42) ಇರಿತಕ್ಕೊಳಗಾದ ವ್ಯಕ್ತಿ. ಉಳ್ಳಾಲ ವೀರಭದ್ರ ದೇವಸ್ಥಾನದ ಬಳಿಯಲ್ಲಿರುವ ಹರೀಶ್ ಅವರ ಗ್ಯಾಸ್ ಅಕ್ಸೆಸರೀಸ್ ಅಂಗಡಿಯಲ್ಲಿ ಇರಿತ ನಡೆದಿದೆ.
ಸ್ಥಳೀಯ ನಿವಾಸಿ ಗಾಂಜಾ ವ್ಯಸನಿ ವಿಶಾಲ್ ಯಾನೆ ವಿಕಾಸ್ ಎಂಬಾತ ಇಂದು ಸಂಜೆ ಹರೀಶ್ ಅವರ ಅಂಗಡಿಗೆ ನುಗ್ಗಿ ಸೀಯಾಳ ಕೆತ್ತುವ ಕತ್ತಿ ಮತ್ತು ಹರಿತ ಚಾಕುವಿನಿಂದ ಇರಿದಿದ್ದಾನೆಂದು ಆರೋಪಿಸಲಾಗಿದೆ. ಗಾಯಾಳು ಹರೀಶ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ದೂರು ಕೊಟ್ಟಿದ್ದಕ್ಕೇ ಪ್ರತೀಕಾರ;
ಉಳ್ಳಾಲದ ಉಳಿಯದಲ್ಲಿ ವಿಶಾಲ್ ಸೇರಿದಂತೆ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗಿ ಕುಕೃತ್ಯಗಳನ್ನ ನಡೆಸುತ್ತಿದ್ದು ಈ ಬಗ್ಗೆ ಉಳಿಯ ನಿವಾಸಿ ಕರಾಟೆ ಮಾಸ್ಟರ್ ಆಗಿರುವ ಹರೀಶ್ ಅವರು ಎರಡು ಬಾರಿ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಜೀವ ಬೆದರಿಕೆ ಇದೆ ಎಂದೂ ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಗಾಂಜಾ ಮಾಫಿಯಾದ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ಒಂದು ತಿಂಗಳ ಹಿಂದೆ ಗಾಂಜಾ ವ್ಯಸನಿ ವಿಶಾಲ್ ವಿರುದ್ಧ ಹರೀಶ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಅಸಡ್ಡೆ ತೋರಿದ ಪೊಲೀಸರು ಇಂದು ಬೆಳಗ್ಗೆ ವಿಶಾಲನ್ನ ಠಾಣೆಗೆ ವಿಚಾರಣೆಗೆ ಕರೆಸಿದ್ದರು. ಅಷ್ಟಕ್ಕೇ ವ್ಯಘ್ರನಾದ ವಿಶಾಲ್ ಇಂದು ಸಂಜೆ ಒಬ್ಬನೇ ಎರಡು ಮಾರಕಾಸ್ತ್ರಗಳನ್ನ ಹಿಡಿದು ಹರೀಶ್ ಅವರ ಅಂಗಡಿಗೆ ನುಗ್ಗಿ ಇರಿದಿದ್ದಾನೆ.
ಉಳ್ಳಾಲದಲ್ಲಿ ಗಾಂಜಾ ಮಾಫಿಯಾ ವ್ಯಾಪಕವಾಗಿದ್ದು ಪೊಲೀಸರು ವ್ಯಸನಿಗಳ ವಿರುದ್ಧ ದೂರು ನೀಡಿ ಅಂತ ಒಂದು ಕಡೆ ಹೇಳುತ್ತಿದ್ದರೆ, ದೂರು ಕೊಟ್ಟವರು ಹೀನಾಯವಾಗಿ ಇರಿತಕ್ಕೊಳಗಾಗುತ್ತಿದ್ದು ಪೊಲೀಸರ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.
Mangalore Karate Master Stabbed by Drug addict youth at his shop in Ullal. Harish Ganiga is the person being stabbed. Recently Harish had lodged a complaint against Drug addicts in the locality to Ullal Police but the cops who failed to take action had to witness a stabbing incident. Drug addict Vishal is the youth who came to the shop of Harish and stabbed him using sharp weapons.
01-07-25 10:52 pm
Bangalore Correspondent
ಹಾಸನ ಬಳಿಕ ಶಿವಮೊಗ್ಗ ಸರದಿ ; ಎರಡು ದಿನದಲ್ಲಿ ವಿದ್ಯ...
01-07-25 09:57 pm
Stampede, IPS Officer Vikas Kumar Suspension:...
01-07-25 04:19 pm
Sri Rama Sene, Belagavi, SP: ಶ್ರೀರಾಮಸೇನೆ ಸೇನೆ...
30-06-25 10:30 pm
CM Siddaramaiah, Dk Shivakumar, CM Post: ಹೇಯ್...
30-06-25 02:55 pm
01-07-25 08:57 pm
HK News Desk
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 04:36 pm
Mangalore Correspondent
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm