ಬ್ರೇಕಿಂಗ್ ನ್ಯೂಸ್
24-11-23 07:06 pm Mangalore Correspondent ಕ್ರೈಂ
ಉಳ್ಳಾಲ, ನ.24: ಮೈಯಿಡೀ ಚಿನ್ನವನ್ನ ಹೋಲುವ ಒನ್ ಗ್ರಾಮ್ ಒಡವೆಗಳನ್ನ ಹಾಕಿದ್ದ ವ್ಯಕ್ತಿಯೋರ್ವ ಕಳೆದ ತಿಂಗಳು ತೊಕ್ಕೊಟ್ಟಿನ ಎರಡು ಅಂಗಡಿಗಳಿಗೆ ವಂಚಿಸಿದ ಪ್ರಕರಣ ನಡೆದ ಬೆನ್ನಲ್ಲೇ ಅದೇ ಶೋಕಿಲಾಲ ಕುತ್ತಾರು ಪಂಡಿತ್ ಹೌಸ್ನ ಮೊಬೈಲ್ ಮಳಿಗೆಯಲ್ಲಿ ಮೊಬೈಲ್ ಖರೀದಿಸಿ ಫೋನ್ ಸ್ವಿಚ್ ಆಫ್ ಆಗಿದೆ, ಗೂಗಲ್ ಪೇ ಮಾಡಲು ಆಗುವುದಿಲ್ಲ, ನಾಳೆ ಹಣ ಕೊಡುವುದಾಗಿ ಹೇಳಿ ವಂಚಿಸಿದ ಘಟನೆ ನಡೆದಿದ್ದು, ಅಂಗಡಿ ಮಾಲೀಕ ಖತರ್ನಾಕ್ ವಂಚಕ ಗೂಡ್ಸ್ ಮುನೀರನ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಅಯ್ಯಂಗಾರ್ ಬೇಕರಿ ಮತ್ತು ಸಮೀಪದ ಪೂರ್ಣಿಮಾ ಎಂಬವರ ದಿನಸಿ ಅಂಗಡಿಗೆ ಮೈಯಿಡೀ ಚಿನ್ನದ ಒಡವೆ ಧರಿಸಿದ್ದ ವ್ಯಕ್ತಿಯೋರ್ವ ಹೆಲ್ಮೆಟ್ ತೆಗೆಯದೆ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿ ಸಾವಿರಾರು ರೂಪಾಯಿ ಮೌಲ್ಯದ ಸಿಹಿ ತಿಂಡಿ, ದಿನಸಿ ಖರೀದಿಸಿ ಗೂಗಲ್ ಪೇ ಮಾಡಲು ಫೋನ್ ಸ್ವಿಚ್ ಆಫ್ ಆಗಿದೆ, ಈಗಲೇ ಹಣ ತಂದು ಕೊಡುವೆ ಎಂದು ಹೇಳಿ ವ್ಯಾಪಾರಿಗಳನ್ನ ಯಾಮಾರಿಸಿದ್ದ. ಅದೇ ಶೋಕಿಲಾಲ ಕಳೆದ ನವೆಂಬರ್ 13 ರಂದು ಮತ್ತೆ ಕುತ್ತಾರು ಪಂಡಿತ್ ಹೌಸ್ ನಲ್ಲಿರುವ "ಸುಧಿ ಕಲೆಕ್ಷನ್" ಎಂಬ ಮೊಬೈಲ್ ಅಂಗಡಿಗೆ ತೆರಳಿ ಮಾಲಕ ದೀಪಕ್ ಅವರಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲನ್ನ ಖರೀದಿಸಿ ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಎಂದು ಸಬೂಬು ನೀಡಿದ್ದು ನನ್ನ ಮನೆ ಸಮೀಪದಲ್ಲೇ ಇದೆ, ನಾಳೆ ಹಣ ನೀಡೋದಾಗಿ ತನ್ನ ಸಂಪರ್ಕದ ಮೊಬೈಲ್ ನಂಬರ್ ನೀಡಿ ತೆರಳಿದ್ದ.
ದೀಪಕ್ ಅವರು ವಂಚಕ ನೀಡಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ತಾನು ಮೋಸ ಹೋಗಿರುವುದು ತಿಳಿದ ಮೇಲೆ ಮೊಬೈಲ್ ನಂಬರಿನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅದು ಖತರ್ನಾಕ್ ವಂಚಕ ಗೂಡ್ಸ್ ಮುನೀರನದೆಂದು ತಿಳಿದುಬಂದಿದೆ. ಗೂಡ್ಸ್ ಮುನೀರನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ವಂಚನೆ, ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತ ಈಗ ಡಮ್ಮಿ ಒಡವೆಗಳನ್ನ ಧರಿಸಿ ಅಮಾಯಕರನ್ನ ಯಾಮಾರಿಸಿ ವಂಚಿಸುವ ಖಯಾಲಿ ಬೆಳೆಸಿದ್ದಾನೆ. ಮೂಲತಃ ಕಸಬಾ ಬೆಂಗ್ರೆ ನಿವಾಸಿಯಾಗಿರೋ ಈತ ತೊಕ್ಕೊಟ್ಟು ಆಸುಪಾಸಿನಲ್ಲೇ ಬಿಡಾರ ಹೂಡಿರುವ ಶಂಕೆ ಇದೆ. ಉಳ್ಳಾಲ ಪೊಲೀಸರು ಆದಷ್ಟು ಬೇಗನೆ ಈತನ ಹೆಡೆಮುರಿ ಕಟ್ಟ ಬೇಕೆಂದು ವಂಚನೆಗೊಳಗಾದ ದೀಪಕ್ ಒತ್ತಾಯಿಸಿದ್ದಾರೆ.
Mangalore Ullal police arrest one for Cheating bakery and shops of money.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm