ಬ್ರೇಕಿಂಗ್ ನ್ಯೂಸ್
08-08-23 02:32 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 8: ಮಂಗಳೂರಿನಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಪತ್ತೆ ಪ್ರಕರಣದಲ್ಲಿ ಪೊಲೀಸರು ಫಾರೆನ್ಸಿಕ್ ವರದಿ ಪಡೆದಿದ್ದು ಚಾಕಲೇಟ್ ನಲ್ಲಿ ಗಾಂಜಾ ಅಂಶ ಪತ್ತೆಯಾಗಿದೆ ಎಂದು ಕಮಿಷನರ್ ಕುಲದೀಪ್ ಜೈನ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಇಬ್ಬರು ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಜುಲೈ 19ರಂದು ಮೂರು ಗೋಣಿ ಚೀಲಗಳಲ್ಲಿ ಬಚ್ಚಿಟ್ಟಿದ್ದ ಸುಮಾರು 107 ಕೇಜಿ ಬಾಂಗ್ ಚಾಕಲೇಟ್ ಪತ್ತೆಯಾಗಿತ್ತು. ರಥಬೀದಿಯ ವೈಭವ್ ಪೂಜಾ ಸೇಲ್ಸ್ ಅಂಗಡಿ ಮತ್ತು ಫಳ್ನೀರಿನ ಗೂಡಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಚಾಕಲೇಟನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಫಾರೆನ್ಸಿಕ್ ತಜ್ಞರ ವರದಿಯಲ್ಲಿ ಚಾಕಲೇಟಿನಲ್ಲಿ ಗಾಂಜಾ ಅಂಶ ಇರುವುದು ಪತ್ತೆಯಾಗಿದ್ದು ಆರೋಪಿಗಳಾದ ಮನೋಹರ್ ಶೇಟ್ (49) ಮತ್ತು ಬೆಚನ್ ಸೋನ್ಕರ್ (34) ವಿರುದ್ಧ ಮಾದಕ ವಸ್ತು ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪೂಜಾ ಸೇಲ್ಸ್ ಅಂಗಡಿಯಲ್ಲಿ 20 ರೂ.ಗೆ ಚಾಕಲೇಟ್ ಮಾರುತ್ತಿದ್ದ ಬಗ್ಗೆ ವಿದ್ಯಾರ್ಥಿಗಳು ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ ವೈಭವ್ ಪೂಜಾ ಸೇಲ್ಸ್ ಅಂಗಡಿಯ ಮಾಲಕ ಮನೋಹರ ಶೇಟ್ ಪ್ರತಿ ವರ್ಷವೂ ನವರಾತ್ರಿ, ಹೋಳಿ ಸಂದರ್ಭದಲ್ಲಿ ಬಾಂಗ್ ಚಾಕಲೇಟ್ ಮಾರುತ್ತಿದ್ದೇನೆ. ಈ ಬಾರಿಯೂ ಮಾರಾಟಕ್ಕೆ ತಂದಿರಿಸಿದ್ದಾಗಿ ಹೇಳಿಕೆ ನೀಡಿದ್ದರು.
ಹಾಗಾಗಿ ಪೊಲೀಸರು ಬಾಂಗ್ ಚಾಕಲೇಟ್ ವಶಕ್ಕೆ ಪಡೆದು ನೋಟಿಸ್ ಕೊಟ್ಟು ತೆರಳಿದ್ದರು. ಇದೀಗ ಫಾರೆನ್ಸಿಕ್ ವರದಿ ಆಧರಿಸಿ ಆರೋಪಿಗಳ ವಿರುದ್ಧ ಹೆಚ್ಚುವರಿ ಕೇಸು ದಾಖಲು ಮಾಡಿದ್ದಾರೆ. ಮಂಗಳೂರನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಸತತವಾಗಿ ಪೊಲೀಸರು ದಾಳಿ ನಡೆಸುತ್ತಿದ್ದು ಕಾಲೇಜು ಕ್ಯಾಂಪಸ್ಗಳಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಾಂಗ್ ಚಾಕಲೇಟ್ ಮಾರಾಟ ಆಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.
ಬಾಂಗ್ ಅನ್ನೋದು ಉತ್ತರ ಪ್ರದೇಶದಲ್ಲಿ ಕಾಮನ್ ಆಗಿರುವ ಪ ಪದಾರ್ಥ. ಬಾಂಗ್ ಹೆಸರಲ್ಲಿ ಪಾನ್ ಬೀಡಾ ರೀತಿಯಲ್ಲೇ ಮಾರಾಟ ಮಾಡುತ್ತಾರೆ. ಗಾಂಜಾ ಹೂವು ಮತ್ತು ಹಣ್ಣನ್ನು ಬಳಸಿ ಬಾಂಗ್ ತಯಾರಿಸುತ್ತಿದ್ದು ಒಂದು ರೀತಿಯ ಅಮಲು ಪದಾರ್ಥವಾಗಿದೆ. ಅದೇ ಬಾಂಗ್ ಅನ್ನು ಚಾಕಲೇಟಿನಲ್ಲಿ ಮಿಕ್ಸ್ ಮಾಡಿದ್ದು ಅವನ್ನು ಮಾರುಕಟ್ಟೆಗೆ ಬಿಡಲಾಗಿದೆ. ಗಾಂಜಾ ಅಂಶ ಇರುವುದರಿಂದ ಮಾದಕ ವಸ್ತುಗಳ ಮಾರಾಟ ನಿಷೇಧ ಕಾಯ್ದೆಯಡಿ ಬಾಂಗ್ ಚಾಕಲೇಟ್ ಮಾರಾಟವೂ ನಿಷೇಧ ಆಗಿರುತ್ತದೆ.
A case under the NDPS (Narcotic Drugs and Psychotropic Substances) Act has been booked against two petty shopkeepers caught with over Bhang chocolates worth over Rs 17,000 worth possessed by two petty shopkeepers after lab tests.
21-06-25 02:48 pm
Bengaluru Staff
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
20-06-25 10:19 pm
HK News Desk
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
21-06-25 03:56 pm
Giridhar Shetty, Mangaluru
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
Mangalore Forest Guard, Someshwara Beach, U T...
20-06-25 09:54 pm
21-06-25 12:21 pm
Mangaluru Correspondent
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm