ಬ್ರೇಕಿಂಗ್ ನ್ಯೂಸ್
20-02-23 09:55 pm Mangalore Correspondent ಕ್ರೈಂ
ಮಂಗಳೂರು, ಫೆ.20 : ಫೇಸ್ಬುಕ್ ನಲ್ಲಿ ಬಂದಿದ್ದ ಉದ್ಯೋಗ ಜಾಹೀರಾತು ನಂಬಿ ಅದಕ್ಕೆ ಅರ್ಜಿ ಹಾಕಿದ್ದಲ್ಲದೆ, ಅಪರಿಚಿತರು ಹೇಳಿದಂತೆ ವಿವಿಧ ಕಾರಣಕ್ಕೆ 9.79 ಲಕ್ಷ ರೂಪಾಯಿ ನೀಡಿ ವ್ಯಕ್ತಿಯೊಬ್ಬರು ವಂಚನೆಗೊಳಗಾದ ಬಗ್ಗೆ ಎಸ್ಪಿ ಕಚೇರಿಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ರಾಜೇಶ್ ಆಳ್ವ ಎಂಬವರು ಹಯಾಟೆಕ್ ಪ್ರಾಪರ್ ಸೊಲ್ಯುಶನ್ ಎಂಬ ಸಂಸ್ಥೆಯಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ಮಾಡಿಕೊಂಡಿದ್ದರು. ಕಂಪನಿಯಲ್ಲಿ ಕಡಿಮೆ ವೇತನ ಇದ್ದುದರಿಂದ ಫೇಸ್ಬುಕ್ ನಲ್ಲಿ ಬಂದಿದ್ದ ಮತ್ತೊಂದು ಉದ್ಯೋಗದ ಆಫರ್ ನೋಡಿ ಅರ್ಜಿ ಹಾಕಿದ್ದರು. ಅದರಲ್ಲಿದ್ದ ವಾಟ್ಸಪ್ ನಂಬರಿಗೆ ವಿಚಾರಿಸಿದಾಗ, ಜಾಬ್ ಅಪ್ಲಿಕೇಷನ್ ಫಾರ್ಮ್ ಕಳುಹಿಸಿದ್ದರು. ಬಯೋಡೇಟಾ ಕಳುಹಿಸಿ, ಆ ಕಡೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊಸೆಸಿಂಗ್ ಚಾರ್ಜ್, ಕಸ್ಟಮ್ ಕ್ಲಿಯರೆನ್ಸ್ ಹಾಗೂ ವಿವಿಧ ಚಾರ್ಜ್ ಹೆಸರಲ್ಲಿ ಹಣ ಕಳುಹಿಸಿದ್ದಾರೆ.
ಎಟಿಎಂ ಕ್ಯಾಶ್ ಡಿಪಾಸಿಟ್ ಮೆಷಿನ್ ಹಾಗೂ ಫೋನ್ ಪೇ, ಪೇಟಿಎಂ ಮೂಲಕ ಅಪರಿಚಿತರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಸುಮಾರು 9,97,000 ಹಣವನ್ನು ಕಳುಹಿಸಿದ್ದಾರೆ. ಉನ್ನತ ಉದ್ಯೋಗ ಸಿಗುತ್ತದೆ ಎಂದು ನಂಬಿ ತನ್ನಲ್ಲಿದ್ದ ಲಕ್ಷಾಂತರ ಹಣವನ್ನು ಕಳಕೊಂಡಿದ್ದಾರೆ. ಕಳೆದ ಡಿಸೆಂಬರ್ 18ರಿಂದ ಫೆಬ್ರವರಿ 20ರ ನಡುವೆ ವಂಚನೆ ಎಸಗಲಾಗಿದೆ ಎಂದು ರಾಜೇಶ್ ಆಳ್ವ ದೂರು ನೀಡಿದ್ದಾರೆ.
Mangalore Facebook Job offer advertising fraud, man loses 9.79 lakhs.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
12-08-26 11:18 pm
HK News Staffer
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm